ಟಿಪ್ಪು ದೇಶ ಮತ್ತು ನಾಡು ಕಂಡ ಅದ್ಭುತ ದೊರೆ. ಟಿಪ್ಪು ಸುಲ್ತಾನ್ ಯಾರನ್ನೂ ಮತಾಂತರ ಮಾಡಲಿಲ್ಲ. ಅವರನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಟಿಪ್ಪು ಸುಲ್ತಾನ್ ಯಾವತ್ತಿಗೂ ಆಂಗ್ಲರಿಗೆ ಗುಲಾಮನಾಗಿ ಬದುಕಲಿಲ್ಲ. ಬ್ರಿಟಿಷರೇ ಅವರನ್ನು ಮೈಸೂರು ಹುಲಿ ಎಂದು ಕರೆದಿದ್ದಾರೆ ಎಂದು ಧಾರವಾಡದಲ್ಲಿ ಆಯೋಜಿಸಿದ್ದ ದೇಶಪ್ರೇಮಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮೇರು ಐಎಎಸ್, ಕೆಎಸ್ ಸ್ಟಡಿ ಸೆಂಟರ್ ನ ನಿರ್ದೇಶಕಿ ಪ್ರಮೀಳಾ ಮೇಟಿ ಉಪನ್ಯಾಸ ನೀಡಿದರು.
ಶ್ರೀರಂಗಪಟ್ಟಣದ ಮೇಲಿನ ದಾಳಿಯಿಂದಾಗಿ, ಬ್ರಾಹ್ಮಣರ ಕೊಲೆಯಾದಾಗ ಅದನ್ನು ಬೇಕಂತಲೇ ಟಿಪ್ಪುವಿನ ಮೇಲೆ ಹೇರುವ ಹುನ್ನಾರ ನಡೆಯಿತು. ಆ ಸಮಯದಲ್ಲಿ ಟಿಪ್ಪು ಸುಲ್ತಾನ್ ಮಲಬಾರ್’ನಲ್ಲಿದ್ದರು. ಮತ್ತು ಈ ಘಟನೆಯ 10 ತಿಂಗಳ ತರವಾಯ ಟಿಪ್ಪು ಶ್ರೀರಂಗಪಟ್ಟಣಕ್ಕೆ ಬಂದರು. ಆ ಸಮಯದಲ್ಲಿ ಟಿಪ್ಪು ಸುಲ್ತಾನರೆ ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಸುದ್ಧಿ ಹಬ್ಬಿಸಲಾಯಿತು. ಟಿಪ್ಪು ಸುಲ್ತಾನ್ ಶೃಂಗೇರಿಯಲ್ಲಿ ಅಡ್ಡ ಪಲ್ಲಕ್ಕಿ ಉತ್ಸವವನ್ನು ಜಾರಿಗೆ ತಂದರು. ಅವರನ್ನು ಕನ್ನಡದ ದೇಶಿಯ ರಾಜ ಮತ್ತು ಗ್ರೇಟ್ ಲೀಡರ್ ಎಂದು ಕರೆಯಬೇಕು. ಅವರು ರಾಜ್ಯದ ಜನರ ಸುಭಿಕ್ಷೇಗಾಗಿ ತಮ್ಮಿಬ್ಬರ ಮಕ್ಕಳನ್ನು ಒತ್ತೆ ಇಟ್ಟರು. ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನೇಕ ಅನಿಷ್ಟ ಪದ್ದತಿಗಳನ್ನು ಟಿಪ್ಪು ಸುಲ್ತಾನ್ ವಿರೋಧಿಸಿದ್ದರು ಎಂದು ಹೇಳಿದರು.
ಇದನ್ನೂ ಓದಿ ಧಾರವಾಡದ ವೆಂಕಟೇಶ್ವರ ದೇವರ ಮೂರ್ತಿ ಪ್ರತಿಷ್ಠಾಪಿಸಿದ್ದು, ಟಿಪ್ಪು ಸುಲ್ತಾನ್: ಪ್ರೊ. ಎ.ವಾಯ್.ಸಾವಂತ್
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಶಾಕಿರ್ ಸನದಿ ಮಾತನಾಡಿ, ರಾಜ ಪ್ರತಿರಾಜರ ಯುದ್ಧಗಳಲ್ಲಿ ಜಾತಿ ಇರಲಿಲ್ಲ. ಅಧಿಕಾರ ಮಾತ್ರ ಇತ್ತು. ಟಿಪ್ಪು ಸುಲ್ತಾನ್ ಒಬ್ಬ ಒಳ್ಳೆಯ ಆಡಳಿತಗಾರ ಮತ್ತು ವಿಶೇಷವಾಗಿ ರೈತ ಆಗಿದ್ದರು. ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.





