ಧಾರವಾಡ | ಇಂದಿನ ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚು ಮಹತ್ವ ಕೊಡಬೇಕಿದೆ: ಡಾ. ಮಾಸನಕಟ್ಟಿ

Date:

ಮಕ್ಕಳಲ್ಲಿ ಅದಮ್ಯವಾದ ಸೃಜನಶೀಲ ಮನಸ್ಸಿರುತ್ತದೆ. ಅದನ್ನು ಪಾಲಕರು ಹಾಗೂ ಗುರುಗಳು ಗುರುತಿಸಿ ಬೆಳೆಸಬೇಕು. ಕವಿತೆ ರಚನೆ ಸುಲಭವಲ್ಲ. ಅದಕ್ಕೆ ಗಟ್ಟಿಯಾದ ಓದು, ಚಿಂತನೆಯ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ ಎಂದು ಸಾಹಿತಿ ಡಾ. ಚಿದಾನಂದ ಮಾಸನಕಟ್ಟಿ ಅಭಿಪ್ರಾಯ ಪಟ್ಟರು.

ಧಾರವಾಡ ನಗರದ ಮಕ್ಕಳ ಅಕಾಡೆಮಿಯಲ್ಲಿ 22ನೇ ತ್ರಿಭಾಷಾ ಮಕ್ಕಳ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, “ಕಾವ್ಯವು ಮಕ್ಕಳಿಗೆ ಆಲೋಚನೆ, ಚಿಂತನೆ ಹಾಗೂ ಅಭಿಪ್ರಾಯವನ್ನು ಮನಮುಟ್ಟುವಂತೆ ಪ್ರತಿಪಾದಿಸಲು ಸಹಾಯಕವಾಗುತ್ತದೆ. ಕವಿತೆಗಳ ರಚನೆಯಿಂದ ಕೀರ್ತಿ, ಜ್ಞಾನ, ಸಂಪತ್ತು, ಅನಿಷ್ಠಗಳ ನಿವಾರಣೆ, ಆನಂದ ದೊರೆಯುತ್ತದೆ” ಎಂದರು.

ಸಂಸ್ಥೆಯ ಅಧ್ಯಕ್ಷ ಡಾ. ರಾಜೇಂದ್ರ ದೇಶಪಾಂಡೆ ಮಾತನಾಡಿ, “ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದೇ ನಮ್ಮ ಕರ್ತವ್ಯವಾಗಿದ್ದು, ಕೇವಲ ಅಂಕ ಗಳಿಕೆಯ ಯಾಂತ್ರಿಕ ಕಲಿಕೆಗಿಂತ ಅನುಭವಾತ್ಮಕ ಕಲಿಕೆ ಅಗತ್ಯವಿದೆ. ಮಕ್ಕಳು ವಾಚಿಸಿದ ಆಯ್ದ ಕವನಗಳನ್ನು ಡಾ. ಬಾಳಪ್ಪ ಚಿನಗುಡಿಯವರ ಸಂಪಾದಕತ್ವದಲ್ಲಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಬೆಳೆಯುವ ಮಕ್ಕಳ ಕವಿ ಮನಸ್ಸುಗಳಿಗೆ ಪ್ರೋತ್ಸಾಹಿಸಲಾಗುವುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕನ್ನಡ ವಿಭಾಗದಲ್ಲಿ ಕು, ವೈಷ್ಣವಿ ಪ್ರಥಮ, ಕು, ಪ್ರಿಯಾಂಕಾ ದ್ವಿತೀಯ, ಕು, ಶೃತಿ ಗಾಣಿಗೇರ ತೃತೀಯ ಸ್ಥಾನ , ಹಿಂದಿ ವಿಭಾಗದಲ್ಲಿ ಕು,ಶೌರ್ಯ ಬರ್ನವಾಲ ಪ್ರಥಮ,ಕು, ಫೀಜಾ ದ್ವಿತೀಯ, ಕು, ಆಧ್ಯಶ್ರೀ ಚಂದ್ರಾ ತೃತೀಯ ಸ್ಥಾನ, ಇಂಗ್ಲೀಷ್ ವಿಭಾಗದಲ್ಲಿ ಕು,ತೇಜಸ್ಸ್ ಹೆಗಡೆ ಪ್ರಥಮ, ಕು, ಅವನಿ ದ್ವಿತೀಯ, ಕು ಸಾನ್ವಿ ಪಾಟೀಲ ತೃತೀಯ ಸ್ಥಾನವನ್ನು ಪಡೆದರು. ಇವರಿಗೆ ಪ್ರಶಸ್ತಿ ಪತ್ರ, ಫಲಕವನ್ನು ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರವನ್ನು ಅಧ್ಯಕ್ಷರು ವಿತರಿಸಿದರು.

ಇದನ್ನೂ ಓದಿ: ಧಾರವಾಡ | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಾ. ಬಾಳಪ್ಪ ಚಿನಗುಡಿ, ಪ್ರೊ. ಐ ಎಸ್ ಹುಯಿಲಗೋಳ, ಎಮ್ ಡಿ ಹುಂಡೆಕಾರ ನಿರ್ಣಾಯಕರಾಗಿದ್ದರು. ಶ್ರೀನಿವಾಸ ವಾಡಪ್ಪಿ ಅತಿಥಿಗಳನ್ನು ಪರಿಚಯಿಸಿದರು. ನಗರದ ವಿವಿಧ ಶಾಲೆಗಳಿಂದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ, ಗುರು, ತಾಯಿ, ತಂದೆ, ಶಾಲೆ, ರೈತ, ಸೈನಿಕ, ಮಗಳು, ಮಾನವ, ಕಪ್ಪುಹಣ, ಪರಿಸರ, ಸ್ನೇಹ, ಪ್ರೀತಿ, ಕನಸ್ಸುಗಳ ವಿಷಯಗಳಾದಾರಿತ ಚುಟುಕು, ಹಾಸ್ಯಗಳಲ್ಲಿ ಕವನ ವಾಚಿಸಿದರು.

ಪ್ರೊ. ಐ.ಎಸ್ ಹುಂಡೆಕಾರ, ಪ್ರೊ. ಎನ್ ಬಿ ನಾಲತವಾಡ ಸೇರಿದಂತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಗುರುಗಳು, ಪಾಲಕರು ಹಾಗೂ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...