ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಎಪಿಎಂಸಿ ಗೋದಾಮು ಆವರಣದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎನ್.ಸಿ.ಸಿ.ಎಫ್ ಸಂಸ್ಥೆಯ ಪರವಾಗಿ 2025-26ನೇ ಸಾಲಿನ ಎಫ್.ಎ.ಕ್ಯೂ ಗುಣಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಯರಗುಪ್ಪಿ ಉದ್ದು ಖರೀದಿ ಕೇಂದ್ರವನ್ನು ಶಾಸಕ ಎಮ್ ಆರ್ ಪಾಟೀಲ ಉದ್ಘಾಟಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿ ಕ್ವಿಂಟಲ್’ಗೆ ಉದ್ದು ರೂ.7800/- ಬೆಂಬಲ ಬೆಲೆ ನಿಗದಿಯಾಗಿದ್ದು, ಖರೀದಿ ಪ್ರಮಾಣ ಒಬ್ಬ ರೈತರಿಂದ ಗರಿಷ್ಠ 30 ಕ್ವಿಂಟಲ್ ( ಪ್ರತಿ ಎಕೆರೆಗೆ 5 ಕ್ವಿಂಟಲ್ ಮಾತ್ರ ) ಈ ಖರೀದಿ ಕೇಂದ್ರದ ಸದುಪಯೋಗವನ್ನು ಕ್ಷೇತ್ರದ ರೈತರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಇದನ್ನೂ ಓದಿ ಹುಬ್ಬಳ್ಳಿ | ಕೋ-ಆಪರೇಟಿವ್ ಸೊಸೈಟಿಗೆ ಬೆದರಿಸಿ 1.5 ಕೋಟಿ ಬೇಡಿಕೆ ಇಟ್ಟಿದ್ದ ಐವರ ಬಂಧನ
ಈ ಸಂದರ್ಭದಲ್ಲಿ ಬಸವಣ್ಣಜ್ಜನವರು, ಶಿವಾನಂದ ಸ್ವಾಮಿಗಳು, ಡಾ. ಅರವಿಂದ ಕಟಗಿ, ಉಮೇಶ ಹೆಬಸೂರ್, ದಾನಪ್ಪ ಗಂಗಾಯಿ, ಹರ್ಷಿತಾ ಕಟಗಿ ಹಾಗೂ ರೈತ ಮುಖಂಡರು ಮತ್ತು ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.





