ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂದು ಧಾರವಾಡದ ಕಾರ್ಯಕ್ರಮಗಳಿಗೆ ತೆರಳುವ ಮಾರ್ಗ ಮದ್ಯೆ ನವಲೂರಿನ ಪ್ರಸಿದ್ದ ನವಲೂರು ಪೇರಲ ಹಣ್ಣುಗಳನ್ನು ಸವಿದು, ತಾವೇ ಕ್ಯುಆರ್ ಕೋಡ್ (QR Code)ಬಳಸಿ ಹಣ್ಣು ಮಾರಾಟಗಾರರಿಗೆ ಹಣ ನೀಡಿದರು.
ಧಾರವಾಡ ಪೇಡೆಯಂತೆಯೇ ಪ್ರಸಿದ್ದಿಯಾದ ಪಡೆದ ನವಲೂರು ಪೇರಲಹಣ್ಣು ಪ್ರಯಾಣದ ಮದ್ಯೆ ಸಚಿವರ ಗಮನ ಸೆಳೆದಿದ್ದು, ವಾಹನ ನಿಲ್ಲಿಸಿ ಹಣ್ಣು ಸವಿದು ಮಾತನಾಡಿ, ಸಚಿವರು ಬೇಂದ್ರೆಯವರ `ನವಲೂರ ಕೆಂಪು ಸೀಬೆ, ಬಾಯಿ ಚಪ್ಪರಿಸುವ ಸಿಹಿ, ಧಾರವಾಡದ ಗಾಳಿಯಂತೆ ಅಮೃತದ ರುಚಿ’ ಎಂಬ ಮಾತುಗಳನ್ನು ಸ್ಮರಿಸಿದರು. ನವಲೂರಿನ ಪೇರಲವೇ ಹೆಚ್ಚು ರುಚಿ ಎಂದು ಬೇಂದ್ರೆಯವರು ಹೇಳಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಇದನ್ನೂ ಓದಿ ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ಇದೇ ವೇಳೆ ಪೇರಲಹಣ್ಣು ಬೆಳೆದ ರೈತ ಹಾಗೂ ಇನ್ನೊರ್ವ ರೈತ ಮಹಿಳೆ ಮಾತನಾಡಿ, ಇದು ತಮ್ಮ ತಂದೆಯವರ ಕಾಲದಿಂದ ಇದ್ದ ತೋಟದಿಂದ ತಂದ ಹಣ್ಣಾಗಿದೆ. ಜವಾರಿಯೇ ಹೆಚ್ಚು ರುಚಿ ಇರುತ್ತದೆ. `ಹೈಬ್ರಿಡ್ ಆಸೆಯಲ್ಲಿ ಜವಾರಿಗಳು ಕಾಣೆಯಾಗೈತ್ರಿ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.





