ಹಸಿದವನಿಗೆ ಅನ್ನವನ್ನು ನೀಡದ, ಕೆಳಗೆ ಬಿದ್ದವರ ಮೇಲೆಬ್ಬಿಸದ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಮತ್ತು ನಿರ್ಗತಿಕರ ಸೇವೆಯೇ ನಿಜವಾದ ಧರ್ಮವೆಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ ಎಂದು ಶಶಿಧರ ಹೊಸಳ್ಳಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ವಿವೇಕಾನಂದ ಸ್ಫೂರ್ತಿ ಫೌಂಡೇಷನ್’ನ ಸಹಯೋಗದಲ್ಲಿ ‘ವಿವೇಕ ವೇದಿಕೆ-2026’ ಶೀರ್ಷಿಕೆ ಅಡಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ. 12ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಪಂ ಮೈದಾನದಲ್ಲಿ ಹಮ್ಮಿಕೊಂಡಿದ್ದರು.
ಈ ವೇಳೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಸ್ವಾಮೀ ವಿವೇಕಾನಂದರು ಏಳಿ ಎದ್ದೇಳಿ ಎಂದು ಕರೆನೀಡಿದ್ದರೂ, ಯುವಕರು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಅವರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ; ಏನಾದರೂ ಸಾಧಿಸಬಹುದು. ಯುವಕರು ಸಮಾಜಕ್ಕಾಗಿ ಕಿಂಚಿತ್ತಾದರೂ ಬದುಕಬೇಕು ಎಂಬುದು ವಿವೇಕಾನಂದರ ಕರೆಯಾಗಿತ್ತು ಎಂದರು.
ಕುಂದಗೋಳದ ಬಸವಣ್ಣಜ್ಜನವರು ಮಾತನಾಡಿ, ಮನುಷ್ಯರು ಬದುಕು ಕಟ್ಟಿಕೊಳ್ಳುವ ಬಗ್ಗೆ ಸ್ವಾಮಿ ವಿವೇಕಾನಂದರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ. ಅದ್ಯಾತ್ಮದ ಶಕ್ತಿಯಾಗಿ ರೂಪುಗೊಂಡಿರುವ ವಿವೇಕಾನದರು ಭಾರತಕ್ಕೆ ಅದ್ಭುತವಾದ ಅಧ್ಯಾತ್ಮದ ಕೊಡುಗೆ ನೀಡಿದ್ದಾರೆ. ಅಣ್ಣಾ ಅಜಾರೆ ವಿವೇಕಾನಂದರಿಂದ ಸ್ಫೂರ್ತಿಗೊಂಡ ಕುರಿತು ಸ್ಮರಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿದ್ದು, ನಿಜಕ್ಕೂ ಶ್ಲಾಘನಿಯ ಎಂದು ಶೌರ್ಯ ವಿಪತ್ತು ಸಂಸ್ಥೆಯ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶೌರ್ಯ ವಿಪತ್ತು ಸಂಸ್ಥೆಯ ಜಿಲ್ಲಾಧ್ಯಕ್ಷ ಶಿವಾನಂದ ಬೆಂತೂರ ಮಾತನಾಡಿ, ವಿವೇಕಾನಂದರು ನಾನು ಮಡಿದರೂ ನನ್ನ ವಿಚಾರಗಳು ಬದುಕುತ್ತವೆ ಎಂದು ಸಾರಿದ್ದಾರೆ. ಭಾರತವೆಂದರೆ ಅನ್ಯ ದೇಶಗಳ ದೃಷ್ಟಿಯಲ್ಲಿ ಕೀಳರಿಮೆ ಇತ್ತು. ಅದನ್ನು ವಿವೇಕಾನಂದರು ತೊಡೆದುಹಾಕಿದರು. ಭಾರತದಲ್ಲಿರುವ ವಿವಿಧತೆಯಲ್ಲಿನ ಏಕತೆಯನ್ನು, ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಹೀಗೆ ಎಲ್ಲರೂ ಒಂದಾಗಿ ಬದುಕುತ್ತಿರುವ ಬಗ್ಗೆ ವಿದೇಶಕ್ಕೆ ತಿಳಿಸುವುದಕ್ಕಾಗಿ ವಿವೇಕಾನಂದರು ಚಿಕ್ಯಾಗೋ’ದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು ಎಂದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ವಿವಿಧ ಕೋರ್ಸ್ ಗಳ ನಡೆಸಲು ಸರ್ಕಾರದಿಂದ ದೊರೆತ ಮಾನ್ಯ ಫಲಕವನ್ನು ಬಿಡುಗಡೆಗೊಳಿಸಿದರು. ತಾಲೂಕಿನ ಪತ್ರಕರ್ತರಿಗೆ, ಗ್ರಾಮದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ, ರೈತ ಮುಖಂಡರಿಗೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿದರು. ಪ್ರಕಾಶ ಬತ್ತಿ ಸ್ವಾಗತಿಸಿದರು. ರವಿ ಬಾವುಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವದೇವರು ಮಾತನಾಡಿದರು. ಪವಿತ್ರಾ ಬಾವುಟೆ ನಿರೂಪಿಸಿದರು.
ಇದನ್ನೂ ಓದಿ ಧಾರವಾಡ | ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕು: ಸುನೈನಾ
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೀರಿಶಗೌಡ ಪಾಟೀಲ, ಉಪಾದ್ಯಕ್ಷೆ ಲೀಲಾವತಿ ಸೂಲದ, ಶಿವಾನಂದ ಪೂಜಾರ, ಅಂದಾನೆಪ್ಪ ಉಪ್ಪಿನ, ಗುರುಪಾದಪ್ಪ ಬಂಕದ, ಪ್ರಕಾಶಗೌಡ ಪಾಟೀಲ, ರಾಜು ಪುಟ್ಟಣ್ಣನವರ, ವಿದ್ಯಾಧರ ಸುಂಕದ, ಲೋಕೇಶ ಸರಾವರಿ, ಹಾಲಪ್ಪ ತಡಾಳ, ಯಲ್ಲಪ್ಪ ದ್ಯಾವನೂರು, ಶರಣಪ್ಪ ಬಾವುಟೆ, ಮಹ್ಮದ್ ಸಾಧಿಕ ಶಿರಹಟ್ಟಿ, ಜುಂಜಪ್ಪ ಚಲವಾದಿ, ಯಲ್ಲಪ್ಪ ಮುಳಗುಂದ, ರಮೇಶ ಅತ್ತಿಗೇರಿ ಇದ್ದರು.





