ಜಗತ್ತಿಗೆ ಭಾರತ ನೀಡಿದ ಉನ್ನತ ಕೊಡುಗೆಯೆಂದರೆ ಅದು ಯೋಗ. ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಹಾಗೂ ಇವೆರಡನ್ನೂ ಸಮತೋಲನದಲ್ಲಿರಿಸುವ ಪ್ರಾಚೀನ ಕಲೆಯೇ ಯೋಗ ಎಂದು ಧಾರವಾಡದ ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಮಕಾಂದರ ಅವರು ವಿದ್ಯಾರ್ಥಿಗಳನ್ನು ಉದ್ದೇಶೀಸಿ ಮಾತನಾಡಿದರು.
ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕ I ಮತ್ತು ಘಟಕ II, ಕ್ರೀಡಾ ಸಂಸ್ಕೃತಿ ಕೂಟ ಸಂಯೋಗದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗದಿನ ಆಚರಣೆ ವೇಳೆ ಮತನಾಡಿದರು.
“ನಿತ್ಯ ಯೋಗಾಭ್ಯಾಸಗಳನ್ನು ಮಾಡುವಾತನಿಗೆ ಯಾವುದೇ ದೈಹಿಕ ಕಾಯಿಲೆಗಳು ಬಾಧಿಸುವುದಿಲ್ಲ ಎನ್ನುವದು ಎಷ್ಟು ಸತ್ಯವೋ, ಮಾನಸಿಕ ಆರೋಗ್ಯ ಕೂಡಾ ಸ್ಥಿರವಾಗಿರುತ್ತದೆ ಎಂಬುದೂ ಅಷ್ಟೇ ಸತ್ಯ” ಎಂದು ತಿಳಿಸಿದ ದೈಹಿಕ ಶಿಕ್ಷಕ ಹಜರತ್ ತೋರಗಲ್ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ಮಾಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯಲಗಟ್ಟಾ ಪ್ರೌಢಶಾಲೆ ಮುಖ್ಯಶಿಕ್ಷಕ ನಾಗನಗೌಡರ ಅಮಾನತಿಗೆ ಎಸ್ಎಫ್ಐ ಆಗ್ರಹ
ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಕೋಟೆಕಲ, ಡಾ ಆಸ್ಮಾ ಬಳ್ಳಾರಿ, ಡಾ ಐ ಎ ಮುಲ್ಲಾ ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.





