ಧಾರವಾಡ | ಎಲ್ಲೆಂದರಲ್ಲಿ ನೆಲಕ್ಕೆ ಬಿದ್ದಿರುವ ಕೇಬಲ್‌ಗಳು; ಅಧಿಕಾರಿಗಳ ನಿರ್ಲಕ್ಷಕ್ಕೆ ಜನರ ಬೇಸರ

Date:

ಧಾರವಾಡದ ಹಲವೆಡೆ ಪಾದಚಾರಿ ಮಾರ್ಗದಲ್ಲಿ ಒಎಫ್‌ಸಿ, ಎಫ್‌ಟಿಟಿಎಚ್‌, ಫೋನ್‌, ಟಿ.ವಿ ಹೀಗೆ ವಿವಿಧ ಕೇಬಲ್‌ಗಳು ನೆಲಕ್ಕೆ ಬಿದ್ದಿವೆ. ಕೆಲವುಕಡೆ ತುಂಡಾಗಿವೆ, ಇನ್ನು ಕೆಲವೆಡೆ ಕೈಗೆಟುಕುವ ಅಂತರದಲ್ಲಿವೆ. ಕೆಲವು ಕಡೆ ವಿದ್ಯುತ್‌ ಕಂಬಗಳು, ಬಡಾವಣೆಯ ರಸ್ತೆ ಫಲಕಗಳಲ್ಲಿ ಕೇಬಲ್‌ ಸಿಂಬೆಗಳು ಜೋತುಬಿದಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿವೆ.

ಡಿ.ಸಿ. ಕಂಪೌಂಡದಲ್ಲಿನ ನೀರಾವರಿ ಎಂಜಿನಿಯರ್‌ ಕಚೇರಿ ಬದಿ, ಎದುರಿನ ಕಚೇರಿಯ ಕಾಂಪೌಂಡ್‌ ಬದಿ, ಈ ಪ್ರದೇಶದಲ್ಲಿನ ಮರಗಳಲ್ಲಿ ಕೇಬಲ್‌ಗಳು ಬಿದ್ದಿವೆ. ಬಿಡಾಡಿ ದನಗಳು, ಪಾದಚಾರಿಗಳು ಕೇಬಲ್‌ ತುಳಿದು-ಎಡವಿ ಬಿದ್ದಿರುವ ನಿದರ್ಶನಗಳು ಇವೆ. ಕೆಲವು ಕಡೆ ರಸ್ತೆಯಲ್ಲಿ ಅಡ್ಡಲಾಗಿಯೂ ಕೇಬಲ್‌ ಅಳವಡಿಸಲಾಗಿದೆ.

ನಗರದ ಡಿ.ಸಿ ಕಂಪೌಂಡ್‌ ಸುತ್ತಮುತ್ತ, ಜಯನಗರ, ಸಪ್ತಾಪೂರ, ಸಹಿತ ಬಹಳಷ್ಟು ಕಡೆ ಪಾದಚಾರಿ ಮಾರ್ಗಗಳಲ್ಲಿ ಈ ಸಮಸ್ಯೆ ಇದೆ. ಬಿಆರ್‌ಟಿಎಸ್‌ ವಿಭಜಕದಲ್ಲಿ ಅಳವಡಿಸಿರುವ ಬೇಲಿಯಲ್ಲೂ ಕೇಬಲ್‌ಗಳು ಸಿಕ್ಕಿಹಾಕಿಕೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಳೆ, ಗಾಳಿ ಸಂದರ್ಭದಲ್ಲಿ ಯಾವ ವಾಹನ, ವ್ಯಕ್ತಿಯ ಮೇಲೆ ಕೇಬಲ್‌ಗಳು ಬೀಳುತ್ತವೆಯೋ ಹೇಳಲಾಗದು. ಹೆಸ್ಕಾಂ ಮತ್ತು ಮಹಾನಗರ ಪಾಲಿಕೆ ಈ ಕೇಬಲ್‌ಗಳವಿಷಯದಲ್ಲಿ ಜಾಣ ಕುರುಡರಾಗಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಕೇಬಲ್‌ಗಳ ಸಮಸ್ಯೆ ಗೊತ್ತಿದ್ದರೂ ಅದನ್ನು ನಿವಾರಿಸಲು ಕ್ರಮ ವಹಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಹೆಚ್ಚು ಕೇಬಲ್‌ ಹಾಕಿರುವ, ಕೇಬಲ್‌ ಸಿಂಬೆ ಜೋತು ಹಾಕಿರುವ ವಿದ್ಯುತ್‌ ಕಂಬಗಳು ಕೆಲವುಕಡೆ ವಾಲಿವೆ. ಶಿಥಿಲವಾಗಿರುವ ಕಂಬಗಳಲ್ಲಿನ ಸಿಂಬೆಗಳು ಮಳೆ ರಭಸವಾಗಿ ಬಂದರೆ, ಜೋರು ಗಾಳಿ ಸಂದರ್ಭದಲ್ಲಿ ತೂಗಾಡುತ್ತವೆ ಇದರಿಂದ ರಸ್ತೆಗಳಲ್ಲಿ ಓಡಾಡುವವರು ಅಪಾಯದ ಪಕ್ಕದಲ್ಲೇ ಸುಳಿದಾಡುವಂತಾಗಿದೆ.

ರಸ್ತೆ ಬದಿ ಪಾದಚಾರಿ ಮಾರ್ಗದ ವೃಕ್ಷಗಳು, ಕಟ್ಟಡಗಳ ಕಾಪೌಂಡ್‌ಗಳು ಸಹಿತ ಎಲ್ಲೆಂದರಲ್ಲಿ ಕೇಬಲ್‌ ಅಳವಡಿಸಬಾರದು. ಅವಾಂತರಗಳಿಗೆ ಪಾಲಿಕೆ ಮತ್ತು ಹೆಸ್ಕಾಂನವರ ಬೇಜವಾಬ್ದಾರಿತನ ಕಾರಣ. ಈ ಬಗ್ಗೆ ಹಲವು ಬಾರಿ ಪಾಲಿಕೆಯವರಿಗೆ ದೂರು ನೀಡಿದರೂ ಸರಿಯಾಗಿ ಕ್ರಮ ವಹಿಸಿಲ್ಲ. ನಿಯಮಿತವಾಗಿ ಮಾರ್ಗ ನಿರ್ವಹಣೆ ಮಾಡಬೇಕು. ಅನಧಿಕೃತ ಕೇಬಲ್‌ ತೆರವಿಗೆ ಸಂಸ್ಥೆಗಳು ಕ್ರಮ ವಹಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ನಗರದ ಜನತೆ ಒತ್ತಾಯಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...