ಬೀದರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಫೆ.3 ಮತ್ತು 4ನೇ ರಂದು ಆಯೋಜಿಸಲು ಉದ್ದೇಶಿಸಲಾಗಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ತಿಳಿಸಿದ್ದಾರೆ.
“ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರ, ಸಮಾಜ ಮುಖಂಡರ ಮತ್ತು ಸಾಹಿತಿಗಳ ಸಭೆಯಲ್ಲಿ ಪರಿಷತ್ತಿನ ನಿಯಮಗಳಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದಾಗ ಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು” ಎಂದು ಹೇಳಿದರು.
ವಿವಿಧ ಸಮಿತಿಗಳಿಗೆ ನೇಮಕಗೊಂಡವರ ಪಟ್ಟಿ :
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಗುರುನಾಥ ಕೊಳ್ಳೂರು, ಕೋಶಾಧ್ಯಕ್ಷರಾಗಿ ಬಾಬು ವಾಲಿ ಅವರನ್ನು ನೇಮಕ ಮಾಡಲಾಯಿತು. ಡಿ.ಕೆ.ಗಣಪತಿ (ಪ್ರಚಾರ ಸಮಿತಿ), ರಾಜೇಂದ್ರಕುಮಾರ ಗಂದಗೆ, ವಿಜಯಕುಮಾರ ಪಾಟೀಲ ಯರನಳ್ಳಿ(ಮೆರವಣಿಗೆ ಸಮಿತಿ), ರೇವಣಸಿದ್ದಪ್ಪ ಜಲಾದೆ (ವೇದಿಕೆ ಸಮಿತಿ), ಡಾ.ಬಸವರಾಜ ಬಲ್ಲೂರ (ಸ್ಮರಣ ಸಂಚಿಕೆ ಸಮಿತಿ), ರಾಜಕುಮಾರ ಪಾಟೀಲ, ವಿಜಯಕುಮಾರ ಸೋನಾರೆ, ಅಶೋಕ ದಿಡಗೆ (ಪ್ರಸಾದ ಸಮಿತಿ), ಸಂಗ್ರಾಮ ಇಂಗಳೆ, ಶಂಭುಲಿಂಗ ವಾಲದೊಡ್ಡಿ (ಸಾಂಸ್ಕೃತಿಕ ಸಮಿತಿ), ಗುರುನಾಥ ರಾಜಗಿರಾ, ಸಂತೋಷ ಜೋಳದಾಬಕೆ (ನಗರ ಅಲಂಕಾರ ಸಮಿತಿ), ರಾಜೇಂದ್ರ ಮಣಗಿರೆ, ಯೋಗೇಶ ಮಠದ (ಚಿತ್ರಕಲಾ ಸಮಿತಿ), ಮೀನಾಕ್ಷಿ ಪಾಟೀಲ (ಮಹಿಳಾ ಸಮಿತಿ), ಮಲ್ಲಿಕಾರ್ಜುನ ಟಂಕಸಾಲೆ, ಕಲ್ಯಾಣರಾವ ಚಳಕಾಪುರೆ (ಧ್ವಜಾರೋಹಣ ಮತ್ತು ಶಿಸ್ತುಪಾಲನ ಸಮಿತಿ), ಡಾ.ಸಿ.ಆನಂದರಾವ (ವೈದ್ಯಕೀಯ ಸಮಿತಿ) ರಚಿಸಲಾಗಿದ್ದು, ಸಮಿತಿಯು ಪದಾಧಿಕಾರಿಗಳನ್ನು ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ಸಮಿತಿ ಅಧ್ಯಕ್ಷರಿಗೆ ವಹಿಸಲಾಯಿತು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಐತಿಹಾಸಿಕಗೊಳಿಸಲು ಸರ್ವರೂ ದುಡಿಯೋಣ. ಕನ್ನಡ ನಾಡು, ನುಡಿಗೆ ಅಹರ್ನಿಶಿ ದುಡಿದ ಡಾ.ಬಸವಲಿಂಗ ಪಟ್ಟದ್ದೇವರ ಅಧ್ಯಕ್ಷತೆಯಲ್ಲಿ ಜರುಗುವ ಸಮ್ಮೇಳನಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್ಸಿ?
ಸಭೆಯಲ್ಲಿ ರಾಜೇಂದ್ರಕುಮಾರ ಗಂದಗೆ, ಸೋಮಶೇಖರ ಪಾಟೀಲ ಗಾದಗಿ, ಕುಶಾಲರಾವ ಪಾಟೀಲ, ಶರಣಪ್ಪ ಮಿಠಾರೆ, ಬಾಬುರಾವ ಕಾರಬಾರಿ, ಡಿ.ಕೆ.ಗಣಪತಿ, ಅನೀಲಕುಮಾರ ಬೆಲ್ದಾರ್, ಮಾರುತಿ ಬೌದ್ಧೆ, ಸಹಜಾನಂದ ಕಂದಗೂಳೆ, ರಮೇಶ ಬಿರಾದಾರ, ಸಿದ್ದಪ್ಪ ಮೂಲಗೆ, ರಾಜಕುಮಾರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





