ದೊಡ್ಡಬಳ್ಳಾಪುರ | ಹೊರಗುತ್ತಿಗೆ ನಿಯಮಕ್ಕೆ ವಿರೋಧ; ಅರಣ್ಯ ಇಲಾಖೆ ಮುಂದೆ ನೌಕರರ ಮೌನ ಪ್ರತಿಭಟನೆ

Date:

ತಮ್ಮ ಜೀವದ ಹಂಗು ತೊರೆದು, ದಿನಗೂಲಿ ನೌಕರರಾಗಿ ಅರಣ್ಯ ರಕ್ಷಣೆ ಮಾಡುತ್ತಿದ್ದ ನೌಕರರನ್ನು ಏಕಾಏಕಿ ಅರಣ್ಯ ಇಲಾಖೆ ಹೊರಗುತ್ತಿಗೆ ವಿಭಾಗಕ್ಕೆ ಸೇರಿಸಿರುವುದನ್ನು ವಿರೋಧಿಸಿ ದಿನಗೂಲಿ ನೌಕರರು ಅರಣ್ಯ ಇಲಾಖೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 14 ಜನ ಕಳೆದ 25-30 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೂ ಇವರು ನಮೂನೆ-ಎಫ್‌ಎಸಿ-63ರಡಿಯಲ್ಲಿ ಸರ್ಕಾರದಿಂದ ನೇರವಾಗಿ ಸಂಬಳ ಪಡೆಯುತ್ತಿದ್ದರು. ಇದೀಗ ಅರಣ್ಯ ಇಲಾಖೆ 14 ದಿನಗೂಲಿ ನೌಕರರನ್ನೂ ಗುತ್ತಿಗೆ ವಿಭಾಗಕ್ಕೆ ಸೇರಿಸಿ ಗುತ್ತಿಗೆಯವರಿಂದ ಸಂಬಳ ಪಡೆಯುವಂತೆ ಮಾಡಿದೆ. ಈ ನಿರ್ಧಾರ ದಿನಗೂಲಿ ನೌಕರರ ಬದುಕು ಅತಂತ್ರವಾಗುವಂತೆ ಮಾಡಿದೆ.

WhatsApp Image 2025 07 30 at 6.46.16 PM 1

ಮಾಧ್ಯಮದೊಂದಿಗೆ ಮಾತನಾಡಿದ ದಿನಗೂಲಿ ನೌಕರ ಮಂಜುನಾಥ್ ನಾಯ್ಕ್, “ದಿನಗೂಲಿ ನೌಕರರಿಗೆ ಸದ್ಯ ತಿಂಗಳ ಸಂಬಳ ನೌಕರರ ಅಕೌಂಟ್ ಗಳಿಗೆ ನೇರವಾಗಿ ಬರುತ್ತಿದೆ. ಆದರೆ, ಈಗ ಹಣ ದೋಚುವ ದುರುದ್ದೇಶದಿಂದ ಹೊರಗುತ್ತಿಗೆಯನ್ನ ಜಾರಿ ಮಾಡಿದ್ದಾರೆ. ಹೊರಗುತ್ತಿಯಲ್ಲಿ 10 ಜನರು ಮಾಡುವ ಕೆಲಸವನ್ನ 5 ಜನರ ಕೈಯಲ್ಲಿ ಮಾಡಿಸಿ 5 ಜನರ ಹಣವನ್ನ ಲೂಟಿ ಮಾಡುತ್ತಾರೆ. ಹೊರಗುತ್ತಿಗೆಯಲ್ಲಿ ನಮ್ಮನ್ನು ಕೇಳುವರೇ ಇಲ್ಲದ ಪರಿಸ್ಥಿತಿ ಇದೆ. ಪ್ರಾಣದ ಹಂಗು ತೊರೆದು ಅರಣ್ಯ ಕಾಪಾಡುತ್ತೇವೆ. ಈ ವೇಳೆ ನಮ್ಮ ಪ್ರಾಣಕ್ಕೆ ಹಾನಿಯಾದರೆ ನಮ್ಮ ಕುಟುಂಬಗಳಿಗೂ ಇವರು ಸುದ್ದಿ ತಿಳಿಸುವುದಿಲ್ಲ. ಹೊರಗುತ್ತಿಗೆಯವರನ್ನ ಕೇಳಿದ್ರೆ ಅರಣ್ಯ ಇಲಾಖೆಯ ಜವಾಬ್ದಾರಿ ಅಂತಾರೆ, ಅರಣ್ಯ ಇಲಾಖೆ ಕೇಳಿದ್ರೆ ಹೊರಗುತ್ತಿಗೆ ನೌಕರರೆಂದು ಸಬೂಬು ಹೇಳ್ತಾರೆ. ನುಣುಕಿಕೊಳ್ಳುವುದಕ್ಕಾಗಿಯೇ ಹೊರಗುತ್ತಿಗೆ ನಿಯಮ ತಂದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...