ಗುಬ್ಬಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ನಂಜುಂಡಸ್ವಾಮಿ ಆಯ್ಕೆ

Date:

 ವೃತ್ತಿಯಲ್ಲಿ ಆಯುರ್ವೇದ ವೈದ್ಯ ಪ್ರವೃತ್ತಿಯಲ್ಲಿ ಇತಿಹಾಸ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಲೆ ಮರೆ ಕಾಯಂತಹ ಸಾಹಿತ್ಯ ಕೃಷಿಕನಿಗೆ ಸಂದ ಗೌರವ ಇದಾಗಿದೆ.

ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದೇ ತಿಂಗಳು 20 ರಂದು ನಡೆಸಿರುವ ಅದ್ದೂರಿ ಸಮ್ಮೇಳನ ಕನ್ನಡ ಹಬ್ಬ ಇಡೀ ತಾಲ್ಲೂಕಿನ ಇತಿಹಾಸದಲ್ಲಿ ಒಂದು ಮೆರೆಗು ಕಟ್ಟಿಕೊಟ್ಟ ಕಾರ್ಯಕ್ರಮವಾಗಿ ಹೊರ ಹೊಮ್ಮಲಿದೆ. ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹಾಗೂ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ತಮ್ಮ ಪದಾಧಿಕಾರಿಗಳೊಂದಿಗೆ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿ ಡಾ.ನಂಜುಂಡಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಜೊತೆಗೆ ಸಮ್ಮೇಳನದ ಅಧಿಕೃತ ಲೋಗೋ ಕೂಡಾ ಬಿಡುಗಡೆ ಮಾಡಲಾಯಿತು.

ಸಾಹಿತ್ಯದ ನಿರಂತರ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ 64 ವರ್ಷ ವಯೋಮಾನದ ನಂಜುಂಡಸ್ವಾಮಿ 1961 ರ ಆಗಸ್ಟ್ 25 ರಂದು ಜನಿಸಿದವರು. ತಂದೆ ಎ.ಬಸವರಾಜು, ತಾಯಿ ಎನ್.ಪಿ.ಶಾರದಮ್ಮ ಅವರ ಗರ್ಭದಲ್ಲಿ ಜನಿಸಿ ಗುಬ್ಬಿ, ಮೈಸೂರು ನಗರದಲ್ಲಿ ಪ್ರಾಥಮಿಕ ಪ್ರೌಢ, ಪಿಯು ಶಿಕ್ಷಣ ಮುಗಿಸಿ ಬಳ್ಳಾರಿಯಲ್ಲಿ ಆಯುರ್ವೇದ ಪದವಿ ಪಡೆದು ತುಮಕೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಶುದ್ಧ ಆಯುರ್ವೇದ ಚಿಕಿತ್ಸಾಲಯ ಮೂಲಕ 1986 ರಲ್ಲಿ ಆರಂಭಿಸಿದರು. ಚಿಕ್ಕ ವಯಸ್ಸಿನಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಇವರು ಸಂಶೋಧನೆ ಕಾರ್ಯ ಆರಂಭಿಸಿ ನಿರಂತರ ಸಾಹಿತ್ಯ ಕೃಷಿ ನಡೆಸಿದರು. ಸದಾ ಓದುವ ಹವ್ಯಾಸ ಬೆಳಸಿಕೊಂಡು ಆಳವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಸಹ ರೂಢಿಸಿಕೊಂಡಿದ್ದರು. ಇದರ ಫಲ ಇಂದಿಗೂ ಅವರ ತುಮಕೂರು ನಿವಾಸದಲ್ಲಿ ಗ್ರಂಥಾಲಯವನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಕಾಳು ಬೇಳೆ ಆಹಾರ ಪದಾರ್ಥ ಕಾಣುವುದು ಸಾಮಾನ್ಯ. ಆದರೆ ಇವರ ಅಡುಗೆಮನೆ ಪುಸ್ತಕಗಳ ಜೋಡಣೆಯ ಕಪಾಟು ಆಗಿರುವುದು ಇವರ ಸಾಹಿತ್ಯಾಸಕ್ತಿ ತೋರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೀರಶೈವ ಧರ್ಮ-ಸಾಹಿತ್ಯ ಸಂಸ್ಕೃತಿ-ಇತಿಹಾಸ ಕುರಿತು ಆಳವಾಗಿ ಅಧ್ಯಯನ ಮಾಡಿದ ಇವರು ಈ ವಿಚಾರದಲ್ಲಿ ಸ್ಪಷ್ಟ ಮಾಹಿತಿ ನೀಡಬಲ್ಲ ಏಕೈಕ ವಿದ್ವಾಂಸರು ಎಂದರೂ ಅತಿಶಯೋಕ್ತಿಯಲ್ಲ. 50 ಕ್ಕೂ ಅಧಿಕ ಹೆಚ್ಚು ಕೃತಿ ರಚಿಸಿ ಸಂಪಾದಿಸಿದರಲ್ಲಿ ಮಾಗಡಿ ವೀರಪ್ಪಶಾಸ್ತ್ರಿ, ಶಿವಗಂಗಾ ಕ್ಷೇತ್ರ, ವೀರಶೈವ ಮಠಗಳು, ಗೋಸಲ ಶ್ರೀ ಗುಬ್ಬಿ ಚನ್ನಬಸವೇಶ್ವರಸ್ವಾಮಿ, ವಚನ ಪಿತಾಮಹ ಡಾ.ಫಾ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಮೀಕ್ಷೆ, ಸಿದ್ಧಾಂತ ಶಿಖಾಮಣಿ, ಸ್ಥಲ ಬೇದಗಳು, ಸೋಮೆಕಟ್ಟೆ ಚೆನ್ನವೀರಸ್ವಾಮಿ ಕೃತಿಗಳು, ಕಾಯಕಯೋಗಿ, ಹೊನ್ನುಡಿಕೆ ದರ್ಶನ, ಕಲ್ಪಸಿರಿ, ಕರ್ನಾಟ ಕಲ್ಯಾಣಕಾರಕಂ ಹೀಗೆ ಅನೇಕ ಖ್ಯಾತ ಕೃತಿಗಳು ಎಂದಿಗೂ ದಾಖಲೆ ರೀತಿ ಪ್ರಕಟಗೊಂಡಿದೆ. 

ತಾಳೆ ಗರಿ ಶಾಸನ ಓದುವ ಏಕೈಕ ಪಂಡಿತ ನಂಜುಂಡಸ್ವಾಮಿ : ತಾಳೆ ಗರಿಗಳನ್ನು ಓದಿ ವಿಸ್ತಾರ ಮಾಹಿತಿ ಒದಗಿಸಿದ ಇತಿಹಾಸ ಸಂಶೋಧಕ ನಂಜುಂಡಸ್ವಾಮಿ ಅವರು ತಾಮ್ರ ಶಾಸನಗಳನ್ನು ಓದಿ ಸರಳ ಕನ್ನಡಕ್ಕೆ ಉಲ್ಲೇಖಿಸಿದ್ದಾರೆ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಅಷ್ಟೇ ಅಲ್ಲದೇ ಪುಸ್ತಕದಲ್ಲಿನ ಕನ್ನಡ ವ್ಯಾಕರಣ ತಪ್ಪಿದ್ದಲ್ಲಿ ಯಾವ ಪುಟದಲ್ಲಿ ತಪ್ಪು ಇದೆ ಎಂಬುದನ್ನು ನೇರ ಲೇಖಕರಿಗೆ ಪತ್ರ ಮುಖೇನ ತಿಳಿಸುವ ವಿಶೇಷ ಪಾಂಡಿತ್ಯ ಇವರಲ್ಲಿದೆ. ಪುರಾತನ ವೀರಶೈವ ಮಠಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿದ ಇವರು ಗುಬ್ಬಿ ಹೊಸಹಳ್ಳಿ ಅರಸು ಮನೆತನದ ಕೃತಿ, ಪೂಜಾದತ್ತಿ ತಾಮ್ರ ಶಾಸನ, ಗುಬ್ಬಿ ಮಲ್ಲಣ್ಣಾರ್ಯ ಕೃತಿಯ ಉಲ್ಲೇಖ, ಬಸವಪಥ, ಇತ್ತೀಚಿಗೆ ಹಲಗೆಯಾರನ ಶೋಧನೆಗಳು, 150 ಪುಸ್ತಕ ಹಸ್ತಪ್ರತಿ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಹೀಗೆ ಅನೇಕ ಕೃತಿಗಳನ್ನು ರಚಿಸಿ ಜಿಲ್ಲೆಯ ಮೇರು ಸಾಹಿತಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.

ಡಾ.ಬಿ.ನಂಜುಂಡಸ್ವಾಮಿ ಅವರಿಗೆ ಸಂದ ಪ್ರಶಸ್ತಿಗಳ ಪೈಕಿ ಶಿವಗಂಗಾಶ್ರೀ ಪ್ರಶಸ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವೀರಶೈವ ಪ್ರತಿಭಾ ಸಂಪನ್ನ, ಇತಿಹಾಸ ಅಕಾಡೆಮಿಯಿಂದ ನೊಳಂಬ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಖ್ಯವಾಗಿದೆ. ಒಟ್ಟಾರೆ ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಮೆರಗು ತುಂಬಿದ ನಂಜುಂಡಸ್ವಾಮಿ ಅವರಿಗೆ ಇಡೀ ತಾಲ್ಲೂಕು ಜನತೆ ಹೆಚ್ಚಿನ, ಕೆಚ್ಚಿನ, ಮೆಚ್ಚಿನ ಪ್ರಶಂಸೆ ನೀಡಬೇಕಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...