ಡಾ. ಓ ನಾಗರಾಜು ವಿರಚಿತ ʼಹಿಂದೂಪುರʼ ಕಾದಂಬರಿ ಬಿಡುಗಡೆ

Date:

ಬಂಡಾಯ ಸಾಹಿತ್ಯ ಸಂಘಟನೆಯ ತುಮಕೂರು ಜಿಲ್ಲಾ ಘಟಕದ ಸಂಚಾಲಕರೂ ಆಗಿರುವ ಲೇಖಕ, ಪ್ರಾಧ್ಯಾಪಕ ಡಾ. ಓ ನಾಗರಾಜು ಅವರು ರಚಿಸಿರುವ ʼಹಿಂದೂಪುರʼ ಕಾದಂಬರಿಯ ಜನಾರ್ಪಣೆ ಕಾರ್ಯಕ್ರಮ ಶನಿವಾರ (ಏ.5)ದಂದು ತುಮಕೂರು ನಗರದ ಕನ್ನಡ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾಡೋಜ ಪುರಸ್ಕೃತ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆ ಇರಲಿದ್ದು, ಪತ್ರಕರ್ತ ಹಾಗೂ ಸಾಹಿತಿ ರಘುನಾಥ್‌ ಚ.ಹ. ಕೃತಿ ಬಿಡುಗಡೆ ಮಾಡಲಿದ್ದಾರೆ.

ಇನ್ನು ʼಹಿಂದೂಪುರʼ ಕಾದಂಬರಿ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್‌ ಲಕ್ಷ್ಮೀನಾರಾಯಣಸ್ವಾಮಿ ಅವರು ಬರೆದಿರುವ ಬೆನ್ನುಡಿಯು ಇಂತಿದ್ದು, ನಿಮ್ಮ ಓದಿಗಾಗಿ..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕವಿ ಕೆ ಬಿ ಸಿದ್ದಯ್ಯರಿಂದ ಕಾವ್ಯ ಕೇಂದ್ರಿತವಾಗಿದ್ದ ತುಮಕೂರು, ಡಾ. ಓ. ನಾಗರಾಜು ಅವರಿಂದ ಸೃಜನಶೀಲ ಕಥನ ಕೇಂದ್ರಿತವೂ ಆಗುತ್ತಿದೆ. ಕಾವ್ಯಾತ್ಮಕ ಗುಣಗಳಿಂದ ಮೈವೆತ್ತಿರುವ ‘ಹಿಂದೂಪುರ’ ಕನ್ನಡದ ಗಮನಾರ್ಹ ಕಾದಂಬರಿಗಳಲ್ಲಿ ಒಂದು. ಅಷ್ಟು ಮಾತ್ರವಲ್ಲದೆ ಗ್ರಾಮ್ಯ ಭಾಷೆಯಿಂದ ಓದುಗನೊಳಗೆ ಹೊಸ ಲೋಕವನ್ನು ಸೃಷ್ಟಿಸುವ ಶಕ್ತಿ ಅದಕ್ಕಿದೆ. ತಳ ಸಮುದಾಯದ ಸಾಂಸ್ಕೃತಿಕತೆ ಮತ್ತು ಸ್ತ್ರೀಪರ ಸಂವೇದನೆ ಹಿಂದೂಪುರದ ಜೀವಾಳ. ಭಾರತದ ವಾಸ್ತವತೆಯ ಜೊತೆಗೆ ಸಕಲೆಂಟು ಜಾತಿಗಳು ಸಾಮರಸ್ಯದಿಂದ ಬದುಕಬಲ್ಲ ಆದರ್ಶ ಗ್ರಾಮವಿದು!. ಇಲ್ಲಿ ಸಂಕಟಗಳು, ಕುಚೇಷ್ಟೆಗಳು ಇಲ್ಲವೆಂದಲ್ಲ, ಅದರ ಪ್ರಮಾಣ ಕಡಿಮೆ.
ಅವಸ್ಥಾತರದ ಕಾಲದಲ್ಲಿ ವರ್ಗ ಪ್ರಜೆಯೂ ಪ್ರಬಲಗೊಂಡು ಮನಸ್ಸುಗಳ ನಡುವೆ ಹೇಗೆಲ್ಲಾ ಗೋಡೆಗಳ ನಿರ್ಮಿಸಬಲ್ಲದು ಎಂಬ ಪರಿಪ್ರೇಕ್ಷೆ ಕಾದಂಬರಿಯ ಮೊದಲ ಭಾಗದಲ್ಲಿ ಕಂಡರೆ, ಎರಡು ಮತ್ತು ಮೂರರಲ್ಲಿ ಹೊಸ ತಲೆಮಾರಿನ ಪರಿವರ್ತನೆಯ ಗಂಭೀರತೆ ಇದೆ.

ಗ್ರಾಮೀಣ ಬದುಕಿನ ಬಗೆಗಿನ ಅದಮ್ಯ ಕಾಳಜಿ ಮತ್ತು ಸೂಕ್ಷ್ಮ ಗ್ರಾಹಿತ್ವ ಕಾದಂಬರಿಯ ಸೊಗಸನ್ನು ಹೆಚ್ಚಿಸಿದೆ. ಪರಂಧಾಮನ ಪಾತ್ರ ಮತ್ತೊಬ್ಬ ಹೂವಯ್ಯನಂತೆ ಕಂಡರೆ, ಲಕ್ಷ್ಮಣದಾಸ್‌ ಕುಲಾಚಾರಗಳಿಂದ ಪರಕೀಯಗೊಂಡರಷ್ಟೇ ತಳ ಸಮುದಾಯಗಳು ನೆಲೆ ಕಾಣಲಿಕ್ಕೆ ಸಾಧ್ಯವೆಂದು ನಂಬಿದಂತಿದೆ. ಓದುಗರ ಎದೆಯಲ್ಲಿ ಅಚ್ಚರಿ ಹುಟ್ಟಿಸುವ ಮೆಧೇಟಿ ಪಾತ್ರ ಸ್ಥಾಪಿತ ಮೌಲ್ಯಗಳ ಭಜನೆಯಂತಿದೆ – ಇಂತಹ ಸಂಗತಿಗಳಿಂದ ಕಾದಂಬರಿಗೆ ದಲಿತರ ನವಬೌದ್ಧಿಕತೆ ದಕ್ಕಿದೆ. ಒಬ್ಬಿಬ್ಬರು ಲೇಖಕರಷ್ಟೇ ದಲಿತ ಕಾದಂಬರಿಯ ವಕ್ತಾರರಾಗಿದ್ದ ದಶಕಗಳ ಭ್ರಮೆಯನ್ನ ಮತ್ತು ಭಜನಾ ಮಂಡಳಿಗಳನ್ನ ಓ. ನಾಗರಾಜ್ ತಮ್ಮ ವಿಶಿಷ್ಟ ಕಸೂತಿಯಿಂದ ಭಂಜಿಸಿದ್ದಾರೆ. ಇದು ಕಾದಂಬರಿಯ ಹೊಸ ಮನ್ವಂತರ, ನಾಗರಾಜ್ ಅದರ ಪ್ರವರ್ತಕರು.

ಇದನ್ನೂ ಓದಿ: ತುಮಕೂರು | ದಲಿತರಲ್ಲಿ ಅರಿವಿನ ಕಿಡಿ ಹೊತ್ತಿಸಿದ ‘ಮಹಾಡ್‌ ಸತ್ಯಾಗ್ರಹ’ : ಡಾ.ನಾಗಭೂಷಣ್ ಬಗ್ಗನಡು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...