ಬೀದರ್ | ಒಳ್ಳೆಯ ಮನುಷ್ಯನಾಗಲು ಓದಿನ ಅಗತ್ಯವಿದೆ : ಡಾ.ಶಿವಾಜಿ ಮೇತ್ರೆ

Date:

ಶಿಕ್ಷಣ ಒಳ್ಳೆಯ ಮನುಷ್ಯನನ್ನಾಗಿಸುತ್ತದೆ. ಓದುವುದು ಎಂದರೆ ಜ್ಞಾನ ಪಡೆಯುವ ದಾರಿಯಾಗಿದೆ. ಸಮಾಜದ ಒಳಿತಿಗಾಗಿ ಬಳಕೆಯಾಗಿರುವುದನ್ನೇ ಜ್ಞಾನವೆನ್ನುತಾರೆ ಎಂದು ಕಲಬುರ್ಗಿಯ ಎನ್.ವಿ. ಕಾಲೇಜು ಪ್ರಾಧ್ಯಾಪಕ ಡಾ. ಶಿವಾಜಿ ಮೇತ್ರೆ ಅಭಿಪ್ರಾಯಪಟ್ಟರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ʼಓದುವ ಬಗೆಗಳು: ಒಂದು ಚಿಂತನೆʼ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಠ್ಯ ಕೃತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಸಮಾಜವನ್ನು ರೂಪಿಸುವ ಶಕ್ತಿ ಪಡೆದಿವೆ’ ಎಂದರು.

ʼಇಡೀ ಬದುಕು ವ್ಯವಹಾರವಲ್ಲ. ಬದುಕಿನಲ್ಲಿ ಎಷ್ಟೇ ನಷ್ಟವಾದರೂ ಅದನ್ನು ಎದುರಿಸುವ, ಭರಿಸುವ ದಾರಿಯು ಜ್ಞಾನ ಪರಂಪರೆಯಲ್ಲಿ ಅಡಗಿದೆ. ಮಾನವನಾಗುವ ಗುಣಗಳನ್ನು ಬಿತ್ತುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ. ಎಲ್ಲವನ್ನು ಪ್ರಶ್ನಿಸುವ ಸಾಮರ್ಥ್ಯ, ಹಲವು ಅರ್ಥಗಳನ್ನು ಕಂಡುಕೊಳ್ಳುವ ಪ್ರಮೆಯು ಓದಿನಲ್ಲಿದೆ. ಪ್ರತಿ ವಿಷಯದ ಮೂಲ ಅರಿಯಲು ದೊಡ್ಡ ಲೇಖಕರ ಕೃತಿ ಓದುವ ಅಗತ್ಯವಿದೆ. ಸಾಹಿತ್ಯದಿಂದ ವಿವೇಕವನ್ನು , ವಿಜ್ಞಾನದಿಂದ ಪರೀಕ್ಷಣೆಯ ಗುಣವನ್ನು ಬೆಳೆಯುತ್ತದೆ. ಭಾವ ಕೇಂದ್ರಿತವಾದ ಸಾಹಿತ್ಯ ಮತ್ತು ವಾಸ್ತವ ಕೇಂದ್ರೀತ ವಿಜ್ಞಾನ ಎರಡು ಮುಖ್ಯ’ ಎಂದು ವಿಶ್ಲೇಷಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಓದುವುದೆಂದರೆ ನಮ್ಮ ಅರಿವಿನ ಹರವು :

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ‘ಓದುವುದೆಂದರೆ ನಮ್ಮ ಅರಿವಿನ ಹರವು, ತಿಳುವಳಿಕೆಯ ಹಾಗೂ ಪ್ರಜ್ಞೆಯ ವಿಸ್ತಾರ ಎಂದರ್ಥ. ಪ್ರತಿ ಓದು ಹೊಸ ಜಗತ್ತಿನ ಹಾಗೂ ಹೊಸ ಅನುಭವ ಲೋಕದ ಪಯಣವಾಗಿದೆ. ಸಿನಿಮಾ, ಸಾಹಿತ್ಯ ಕೃತಿ, ಕಲಾಕೃತಿ ಮತ್ತು ಸಮಾಜವನ್ನು ಪಠ್ಯವಾಗಿ ಅನುಸಂಧಾನ ಮಾಡಿದಾಗ ಅವುಗಳ ಸಾಂಸ್ಕೃತಿಕ ಚಹೆರೆಗಳು ಕಾಣುತ್ತವೆ’ ಎಂದರು.

‘ಒಂದು ನಿರ್ದಿಷ್ಟ ಲೋಕದೃಷ್ಠಿ ರೂಪಿಸುವ, ನೀತಿ-ಅನೀತಿಗಳ ಸೀಮೆಯನ್ನು ತಿಳಿಸುವ, ಸೃಷ್ಟಿಯ ಅಗಮ್ಯ ಮತ್ತು ನಿಗೂಢತೆಗಳ ಅರಿವು ಗಂಭೀರ ಓದಿನಿಂದ ಸಾಧ್ಯ. ಆರ್ಥಿಕ ಸ್ವರೂಪದ ಬಗೆಗೆ, ಉತ್ಪಾದನಾ ಚಟುವಟಿಕೆಗಳ ಭೂಮಿಕೆಯ ಬಗೆಗೆ, ಸಾಮಾಜಿಕ, ರಾಜಕೀಯ ವಲಯದ ಪ್ರಜ್ಞೆ ಪ್ರಭಾವವನ್ನು ಅರುಹಿಸುವ ಶಕ್ತಿ ಓದಿಗಿದೆ. ಒಂದು ಕೃತಿಯ ಬಹುಮುಖತ್ವವನ್ನು ಗ್ರಹಿಸುವ ಪ್ರಕ್ರಿಯೆ ಓದುವುದರಿಂದ ಆಗುತ್ತದೆ. ತೆರೆದ ಪಠ್ಯಗಳನ್ನು ಮುಕ್ತವಾದ ಮತ್ತು ನಿಕಟ ಓದಿನಿಂದ ಹೊಸ ಅರ್ಥಗಳನ್ನು ಕಂಡುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಮಾತನಾಡಿ, ‘ನಮ್ಮ ಭಾಗದ ಮಕ್ಕಳು ಹೆಚ್ಚು ಓದಿ ಉನ್ನತ ಹುದ್ದೆಗಳು ಪಡೆದರೆ ಈ ಭಾಗದ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿಯಾಗುತ್ತದೆ’ ಎಂದರು.

ಈ ಸುದ್ದಿ ಓದಿದ್ದೀರಾ? ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವ : ದಲಿತ ಕಾರ್ಮಿಕನ ಮಗನಿಗೆ ಎರಡು ಚಿನ್ನದ ಪದಕ

ಕಾರ್ಯಕ್ರಮದಲ್ಲಿ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಅಶೋಕರೆಡ್ಡಿ ಗದಲೆಗಾಂವ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪೂರೆ, ಪ್ರವೀಣ ಬಿರಾದಾರ, ನೀಲಮ್ಮ ಮೇತ್ರೆ, ಸಚಿನ ಬಿಡವೆ, ಸೌಮ್ಯಾ ಕರಿಗೌಡ, ರೋಶನ್ ಬಿ, ಗುರುದೇವಿ ಕಿಚಡೆ, ಗಂಗಾಧರ ಸಾಲಿಮಠ, ಪ್ರಭಾಕರ ನೌಗಿರೆ, ಬಸವರಾಜ ಗುಂಗೆ, ಸುಧೀರ ಗೋದೆ, ಪವನ ಪಾಟೀಲ, ಜಗದೇವಿ ಜವಳಗೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...