ಕೆಜಿಎಫ್ ತಾಲೂಕಿನಲ್ಲೇ ವಿಭಿನ್ನ ಮತ್ತು ವಿಶಿಷ್ಟವಾಗಿ ಎಲ್ಲ ಭಾಷೆಗಳಲ್ಲೂ ಮಕ್ಕಳಿಂದ ಎಕ್ಸ್ ಪೋ ಕಾರ್ಯಕ್ರಮವನ್ನು ಗ್ರೀನ್ ವುಡ್ಜ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಬಳಿಯ ಸುಂದರಪಾಳ್ಯ ಗ್ರಾಮ ಪಂಚಾಯಿತಿಯ ಗ್ರೀನ್ ವುಡ್ಜ್ ಶಾಲೆಯಲ್ಲಿ ಎಕ್ಸ್ ಪೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್
ಗ್ರೀನ್ ವುಡ್ಜ್ ಎಕ್ಸ್ ಪೋ ನಿಂದ ಮೂಲ ಉದ್ದೇಶ ಮಕ್ಕಳಲ್ಲಿರುವ ಜ್ಞಾನ ಪ್ರತಿಭೆ ಕೌಶಲ್ಯವನ್ನು ಹೊರ ಉಮ್ಮಿಸುವ ಕೆಲಸವನ್ನು ಮಾಡಲಾಗಿದೆ ಎಂದರು.
ಶಾಲೆಯ 660 ವಿದ್ಯಾರ್ಥಿಗಳು ಈ ಎಕ್ಸ್ ಪೋ ನಲ್ಲಿ ಭಾಗವಹಿಸಿದ್ದಾರೆ ಕನ್ನಡ ಇಂಗ್ಲಿಷ್ ಹಿಂದಿ ಕಂಪ್ಯೂಟರ್ ವಿಜ್ಞಾನ ವಿಷಯವಾರು ಮಕ್ಕಳು ಚಾಟ್ಸ್ ಮೂಲಕ ಪ್ರಾಯೋಗಿಕವಾಗಿ ಪ್ರದರ್ಶನ ಮಾಡಿ ಇದರ ಉದ್ದೇಶವನ್ನು ವಿವರವಾಗಿ ವೀಕ್ಷಿಸುವ ಪ್ರತಿಯೊಬ್ಬ ಪೋಷಕರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟಿದ್ದಾರೆ.
ಜೋತೆಗೆ ಸುತ್ತಮುತ್ತಲಿನ ಶಾಲೆ ಕಾಲೇಜುಗಳಿಗೆ ವಿಭಿನ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಲ್ಲಿರುವ ಮಕ್ಕಳ ಹಾಗೂ ಶಿಕ್ಷಕರ ಪರಿಶ್ರಮ ಮತ್ತು ಜ್ಞಾನವನ್ನು ಇತರೆ ಶಾಲೆಗಳ ಮಕ್ಕಳಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ಮುಳಬಾಗಲು ಕೆಜಿಎಫ್ ಹಾಗೂ ವಿವಿಧ ತಾಲೂಕುಗಳಿಂದ ವಿದ್ಯಾರ್ಥಿಗಳು ಬಂದು ಈ ಪ್ರೋ ನಲ್ಲಿ ಭಾಗವಹಿಸಿದ್ದಾರೆ ಎಂದರು.
ಈ ಶಾಲೆಯ ವಿದ್ಯಾರ್ಥಿಗಳು ಅದ್ಭುತ ಹಾಗೂ ಅವಿಸ್ಮರಣೀಯ ಅನುಭವದಂತೆ ಪ್ರೋ ನಲ್ಲಿ ಭಾಗವಹಿಸಿ ವಿವರಿಸಿದ್ದಾರೆ ಎಂದು ವೀಕ್ಷಿಸಿದ ವಿವಿಧ ಶಾಲೆಗಳ ಶಿಕ್ಷಕರು ಮಕ್ಕಳು ಪೋಷಕರು ಅಭಿನಂದಿಸಿದ್ದಾರೆ ಎಂದರು.
ಈ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಕಾರ್ಯದರ್ಶಿಗಳು, ಶಿಕ್ಷಕರು ಅತ್ಯುತ್ತಮ ಸಾಧನೆಯಾಗಿದೆ. ಬೃಹತ್ ಮಟ್ಟದ ಪ್ರೋ ನಡೆದಿದೆ. ಆದರೆ ನಮ್ಮ ಮೂಲ ಉದ್ದೇಶ ಕೆಜಿಎಫ್ ತಾಲೂಕಿನ ಆಂಧ್ರ ಗಡಿಭಾಗದಲ್ಲಿರುವ ಸಣ್ಣ ಖಾಸಗಿ ಶಾಲೆಯಾಗಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳು ಯಾವುದೇ ದೊಡ್ಡ ಮಟ್ಟದ ಶಾಲೆ ಕಾಲೇಜುಗಳಿಗಿಂತ ಕಡಿಮೆ ಇಲ್ಲ ಇಲ್ಲಿಯೂ ಗುಣಮಟ್ಟದ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆ ಗಳಾದ ಕ್ರೀಡೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಪ್ರತಿಭಾ ಕಾರಂಜಿ ಗ್ರೀನ್ ವುಡ್ಜ್ ಪ್ರೋ ಇಂತಹ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ನಮ್ಮ ಶಾಲೆಯು ಸಾಗುತ್ತಿದೆ ಎಂಬ ಸಂದೇಶ ಸಾರಿದೆ ಎಂದರು.
ಶಾಲೆಯು ಶೈಕ್ಷಣಿಕವಾಗಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ.100% ಫಲಿತಾಂಶ ಬರುತ್ತಿದೆ ವಿದ್ಯಾರ್ಥಿಗಳು 619 ಅಂಕಗಳನ್ನು ಪಡೆದುಕೊಂಡಿದ್ದು, ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದು ಶಾಲೆಗೂ ಸಹ ಅತ್ಯುತ್ತಮ ಶಾಲಾ ಪ್ರಶಸ್ತಿ ದೊರೆತಿದೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಶಾಲೆಯು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಸಾಗುತ್ತಿದೆ ಎಂದು ಹೇಳಿದರು.
ಪೋಷಕರಾದ ರಾಯಸಂದ್ರ ಹನುಮಂತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಪ್ರೋ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಉತ್ತಮ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಲಿದೆ ಇಂತಹ ಕಾರ್ಯಕ್ರಮಗಳಿಗೆ ತಾವು ಸಹ ಸದಾ ಸಹಕಾರಿ ನೀಡುತ್ತೇವೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಮಾತನಾಡಿ ಶಾಲೆ ಆರಂಭಿಸಿದ ನಾಲ್ಕು ವರ್ಷಗಳಲ್ಲಿ ಗ್ರೀನ್ ವುಡ್ಜ್ ಶಾಲೆಯು ಅತ್ಯುತ್ತಮ ಶಾಲೆಯಾಗಿ ಮುನ್ನಡೆಯುತ್ತಿದೆ ಇದಕ್ಕೆ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪಾತ್ರ ಮಹತ್ತರದಾಗಿದೆ.
ಗ್ರಾಮೀಣ ಬಡ ಜನತೆಯ ದೂರದೃಷ್ಟಿಯು ಇಲ್ಲಿ ರೂಪಿಸಿಕೊಳ್ಳಬಹುದು ಮಕ್ಕಳು ಉತ್ತಮ ಭವಿಷ್ಯ ಉಜ್ವಲಕ್ಕಾಗಿ ಈ ಶಾಲೆಯು ಪ್ರೇರಣೆಯಾಗಿದೆ ಎಂದರು.
ಇದನ್ನು ಓದಿದ್ದೀರಾ…? ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿಗೆ ಅರಿನಾಗನಹಳ್ಳಿ ಶಿಕ್ಷಕ ಡಾ.ಮಂಜುನಾಥ್ ಆಯ್ಕೆ.
ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷ ನಾರಾಯಣ್, ಕಾರ್ಯದರ್ಶಿ ಹರಿಕೃಷ್ಣ, ಪ್ರಾಂಶುಪಾಲೆ ನಿರ್ಮಲಾ, ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ವಸಂತ್ ಕುಮಾರ್, ಚೈತ್ರ, ಶ್ರೀನಿವಾಸ್ ಗೌಡ, ಹಾಗೂ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.





