ಕರ್ನಾಟಕ ರಾಜ್ಯ ರೈತ ಸಂಘ ಭತ್ತ, ರಾಗಿ, ಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ತಾಲ್ಲೂಕು ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.
ಕೃಷ್ಣರಾಜ ನಗರ, ಪಿರಿಯಾಪಟ್ಟಣ, ಹೆಗ್ಗಡದೇವನ ಕೋಟೆ, ಟಿ ನರಸೀಪುರ, ನಂಜನಗೂಡು, ಸಾಲಿಗ್ರಾಮ, ಮೈಸೂರು ಸೇರಿದಂತೆ ಜಿಲ್ಲೆಯೆಲ್ಲೆಡೆ ಫಸಲು ಕಟಾವು ಆರಂಭವಾಗಿದೆ. ರೈತರು ಕೊಯ್ಲು ಮಾಡಿದ ಧಾನ್ಯ ಶೇಕರಿಸಿಡಲು, ಸಂರಕ್ಷಿಸಲು ಕಷ್ಟಕರವಾದ ಸಂದರ್ಭ. ಶೀತ ಹಾಗೂ ಮಳೆಯ ವಾತಾವರಣ ಇರುವುದರಿಂದ. ಬೆಳೆದ ಬೆಳೆಯನ್ನು ಆಯಾ ಅಗತ್ಯ ಅನುಸಾರ ಖರೀದಿ ಕೇಂದ್ರ ತೆರೆದಲ್ಲಿ ರೈತರಿಗೆ ಅನುಕೂಲ ಆಗುತ್ತದೆ. ಮದ್ಯವರ್ತಿಗಳ ಹಾವಳಿ ತಪ್ಪುತ್ತದೆ ಎನ್ನುವುದು ರೈತ ಸಂಘದ ಆಗ್ರಹ.
ವರ್ಷ ಪೂರ್ತಿ ಮಳೆ. ಬೆಳೆದ ಬೆಳೆ ಕಾಪಾಡಿಕೊಳ್ಳುವುದೇ ಸವಾಲಾಗಿದೆ. ಇನ್ನ ದುಬಾರಿ ಖರ್ಚಿನ ವ್ಯವಸಾಯದಲ್ಲಿ ಮತ್ತೆ ತಿಂಗಳಾನುಗಟ್ಟಲೆ ಮನೆಯಲ್ಲಿ ಸಂಗ್ರಹಿಸಿ ಇಡುವುದು ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಲಿದೆ. ಹೀಗಾಗಿ, ಮುಂದಿನ ವ್ಯವಸಾಯದ ದೃಷ್ಟಿಯಿಂದ, ಈ ವ್ಯವಸಾಯದ ಸಾಲಸೋಲ ತೀರಿಸಿ ಒಂದಷ್ಟು ಆರ್ಥಿಕ ಸ್ಥಿತಿಗತಿ ಸುಧಾರಿಸಲು ಸರ್ಕಾರ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು. ರೈತರಿಂದ ನೇರವಾಗಿ ಖರೀದಿ ಮಾಡಬೇಕು. ಯಾವುದೇ ವಿಳಂಬ ಮಾಡದೆ ಹಣ ಪಾವತಿ ಮಾಡುವುದು ಅತ್ಯಗತ್ಯ.
ಖರೀದಿ ಕೇಂದ್ರ ತೆರೆಯುವುದು ತಡವಾದಲ್ಲಿ ರೈತರು ದಲ್ಲಾಳಿಗಳಿಗೆ ಮಾರಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ, ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕಲಿದ್ದಾನೆ. ಭತ್ತವನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕು. ಪಡಿತರ ವ್ಯವಸ್ಥೆಗೆ ಬೇಕಾದ ಅಕ್ಕಿಯನ್ನು ರೈತರಿಂದ ಖರೀದಿಸಿ ನೇರವಾಗಿ ಪೂರೈಕೆ ಮಾಡಬೇಕು. ಇದರಿಂದ ಸರ್ಕಾರಕ್ಕೂ ಅನುಕೂಲ, ರೈತರಿಗೂ ಆರ್ಥಿಕ ಬೆಂಬಲ ದೊರೆತಂತಗುತ್ತದೆ.
ಈ ಹಿಂದೆ ರೈಸ್ ಮಿಲ್ ಗಳಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕೊಳ್ಳುವ ವ್ಯವಸ್ಥೆ ಇತ್ತು. ಅದನ್ನೇ ಮತ್ತೆ ಜಾರಿಗೆ ತರಬೇಕು. ಮುಸುಕಿನ ಜೋಳ ಬೆಲೆಯಲ್ಲಿ ಇಳಿಕೆ ಕಂಡಿದೆ, ರೈತರು ಕಂಗಾಲಾಗಿದ್ದಾರೆ. ಹಾಗಾಗಿ, ಈ ಕೂಡಲೇ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಟಿ ನರಸೀಪುರ | ಭತ್ತ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದ ರೈತ ಸಂಘ
ಪಿರಿಯಾಪಟ್ಟಣ :

ತಾಲ್ಲೂಕು ಅಧ್ಯಕ್ಷ ಕೆ. ಎಸ್. ಸ್ವಾಮಿಗೌಡ, ಉಪಾಧ್ಯಕ್ಷ ಗುರುರಾಜ್, ಕಾವೇರಮ್ಮ, ಬಿ.ವಿ. ಗಣೇಶ್, ಸುರೇಶ, ಯುವ ಘಟಕ ಅಧ್ಯಕ್ಷ ಪಿ. ಮಹದೇವ, ಗೌರವಧ್ಯಕ್ಷ ನವೀನ ರಾಜ ಅರಸ್, ವಿಜಯ ಅರಸ್, ಆಲನಹಳ್ಳಿ ಹರೀಶ್, ಮಹೇಶ್, ಲೋಕೇಶ್, ಸತೀಶ್ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆನಂದಗೆರೆಮಂಜುನಾಥ, ಬೆಟ್ಟದಪುರ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.
ಹೆಗ್ಗಡದೇವನ ಕೋಟೆ:

ತಾಲ್ಲೂಕು ಅಧ್ಯಕ್ಷ ಮಹದೇವ ನಾಯಕ, ಗೌರವಧ್ಯಕ್ಷ ಜಕ್ಕಳ್ಳಿ ರವಿಕುಮಾರ್, ಕಾರ್ಯಧ್ಯಕ್ಷ ಚಾಮಹಳ್ಳಿ ಮಹದೇವ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ್, ಕಾರ್ಯದರ್ಶಿ ಶಿಂಡೇನಹಳ್ಳಿ ರವಿ, ಉಪಾಧ್ಯಕ್ಷ ಚಿಕ್ಕ ಬೋರೇಗೌಡ, ವೆಂಕಟೇಗೌಡ, ಸಂಘಟನಾ ಕಾರ್ಯದರ್ಶಿ, ಸಿದ್ದರಾಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ದೇವಮ್ಮ, ಟೌನ್ ಅಧ್ಯಕ್ಷ ವಿ. ಪ್ರಸಾದ್, ಕುಮಾರ್, ಮಂಜು ಸೇರಿದಂತೆ ಇನ್ನಿತರರು ಇದ್ದರು.
ಕೃಷ್ಣರಾಜನಗರ:

ತಾಲ್ಲೂಕು ಅಧ್ಯಕ್ಷ ಎಂ. ಜೆ. ಮಲ್ಲೇಶ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಪ್ರಧಾನ ಕಾರ್ಯದರ್ಶಿ ಹೊಂಬಾಳೆ ಗೌಡ, ಜಿಲ್ಲಾ ಉಪಾಧ್ಯಕ್ಷ ಎಂ. ಎನ್. ನಟರಾಜು, ಬ್ಯಾಡರಹಳ್ಳಿ ಕುಬೇರ, ಅರ್ಜುನ ಹಳ್ಳಿ ಮಂಜುನಾಥ, ಕಗ್ಗೆರೆ ಮಹಾದೇವ, ವಿನಯ್, ಜಗದೀಶ್, ನಂಜುಂಡಸ್ವಾಮಿ, ಸುಕುಂದರಾಜ್, ಗಂಧನಹಳ್ಳಿ ಹರೀಶ್, ಸಾತಿಗ್ರಾಮ ಕಾಳೆಗೌಡ, ಗೋಪಾಲೆಗೌಡ, ಗೋಪಾಲಚಾರ್, ಸುರೇಶ್ ಸೇರಿದಂತೆ ಇನ್ನಿತರರು ಇದ್ದರು
ಸಾಲಿಗ್ರಾಮ:






