ಗದಗ | ಕಾಯಕ ದಾಸೋಹದ ಆರ್ಥಿಕ ನೀತಿಯನ್ನು ಭೋಧಿಸಿದ್ದು ಬಸವಣ್ಣ: ಸಚಿವ ಎಚ್.ಕೆ ಪಾಟೀಲ್

Date:

ಬಸವಣ್ಣನವರನ್ನ ಆದ್ಯತ್ಮಕ್ಕೆ ಸೀಮಿತವಾಗಿಸಿದ್ದೇವೆ. ಆದರೆ, ಆರ್ಥಿಕ ತಜ್ಞ ಎಂದು ಮರೆತಿದ್ದೀವಿ. ಕಾಯಕ ತತ್ವ, ದುಡಿ, ದುಡಿದದ್ದನ್ನು ಹಂಚು ಎನ್ನುವ ತತ್ವ ಅಡಗಿದೆ. ಕಾಯಕ ದಾಸೋಹದ ಆರ್ಥಿಕ ನೀತಿಯನ್ನು ಭೋಧಿಸಿದ ಬಸವಣ್ಣನವರನ್ನು ನೆನಪಿಸಿಕೊಳ್ಳಬೇಕು ಎಂದು ಎಚ್.ಕೆ. ಪಾಟೀಲ್ ಹೇಳಿದರು.

ಗದಗ ಪಟ್ಟಣದ ಜಿಲ್ಲಾಡಳಿತ ಕಛೇರಿಯ ಆಡಿಟೋರಿಯಂನಲ್ಲಿ ʼಸಾಂಸ್ಕೃತಿಕ ನಾಯಕʼ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು.

ಮಾನವತಾವಾದಿ ಬಸವಣ್ಣನವರನ್ನು ಇತ್ತೀಚಿಗೆ ಸಾಂಸ್ಕೃತಿಕ ನಾಯಕ ಎಂದು ಗೌರವಿಸಿ, ಅಧಿಕೃತವಾಗಿ ಒಪ್ಪಿಕೊಂಡಿದ್ದೇವೆ. ಸಂವಿಧಾನ ರಚನೆ ಮಾಡುವಾಗ ನಾವೇಲ್ಲರೂ ಒಂದೇ ಎನ್ನುವ ಹಾಗೆ ಜಗಜ್ಯೋತಿ ಬಸವೇಶ್ವರರು ಮಾನವ ಕುಲಕ್ಕೆ ಮಾರ್ಗದರ್ಶನ. ಅವರ ನಡತೆಯ ಮೂಲಕ ಅವರ ಕಾಲದ ವಿಶೇಷತೆಯನ್ನು ಜಗತ್ತಿಗೆ ತೋರಿಸಿದ್ದರಿಂದ ನಾವೆಲ್ಲರು ಇವತ್ತು ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಪ್ಪಿಕೊಂಡಿದ್ದೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಲ್ಲ ಕಚೇರಿಗಳಲ್ಲಿ ಸಂವಿಧಾನ ಪೂರ್ವ ಪೀಠಿಕೆ ಹಾಕಲಾಗಿದೆ ಹಾಗೇ ಬಸವಣ್ಣನವರ ಭಾವಚಿತ್ರ ಇರುತ್ತದೆ. ಕಛೇರಿಗಳಿಗೆ ಬರುವರನ್ನು ಇವ ನಮ್ಮವ ಎಂದು ಬರಮಾಡಿಕೊಳ್ಳಬೇಕು. ʼಬಸವಣ್ಣನವರ ಪೋಟೋ ಹಾಕಿದೆ ಎಂದರೆ, ಬಾರಕೋಲು ಹಾಕಿಕೊಂಡು ನಿಂತಂಗ,ʼ ಹಾಗಾಗಿ ಬಸವಣ್ಣನವರ ನೀತಿ, ಸಂದೇಶದ ಭಯ ಇರಬೇಕು. ಎಲ್ಲರನ್ನು ಎಚ್ಚರಿಸುವುದಕ್ಕೆ ಗುರು ಬಸವಣ್ಣನವರು ನಿಂತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದರು.

ಹನ್ನೆರಡನೇ ಶತಮಾನದಿಂದ ಇಲ್ಲಿವರೆಗೂ ಗೌರವದಿಂದ ಕಾಣುತ್ತಾ ಪೂಜೆ ಮಾಡುವುದರ ಜೊತೆಗೆ ಎಡಕ್ಕ ಬರ್ರಿ, ಬಲಕ್ಕ ಬರ್ರಿ ಎಂದು ಹೇಳುತ್ತಿವಿ. ಬಸವಣ್ಣನವರ ವಚನಗಳು ಕೇವಲ ಭಾಷಣಕ್ಕೆ ಅಷ್ಟೇ ಸೀಮಿತವಾಗಿ ಬಿಟ್ಟಿವಿ. ಅವರು ವಚನಗಳ ಮೂಲಕ ಅವರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಎಲ್ಲ ಕಛೇರಿಗಳಲ್ಲಿ ಈ ಭಾವಚಿತ್ರ ಬಂದ ಮೇಲೆ ಬದಲಾವಣೆ ಆಗಬೇಕು. ಸರ್ಕಾರಿ ಕಛೇರಿಗಳಿಗೆ ಬಡವರು, ಶ್ರಮ ಜೀವಿಗಳು ಬಂದಾಗ ಕಛೇರಿಯಲ್ಲಿ ಗೌರವಿಸದೇ ಇದ್ದರೆ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರನ್ನು ಅವಮಾನಿಸದ ಹಾಗೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಮ್.ಎನ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಮುಖಂಡರು ಎಸ್.ಎನ್. ಬಳ್ಳಾರಿ, ಬಸವರಾಜ ಕಡೆಮನಿ, ಅಧಿಕಾರಿಗಳು, ಬಸವಣ್ಣನವರ ಅನುಯಾಯಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...