ಗದಗ | ಮನುಸ್ಮೃತಿ ಸುಟ್ಟಿರುವುದು ಭಗವದ್ಗೀತೆಯಲ್ಲಿಯ ಅಸಮಾನತೆಯನ್ನು ಸುಟ್ಟಂತೆ: ಬಂಡಾಯ ಸಾಹಿತಿ ಬಸೂ

Date:

“ಅಸಮಾನತೆ ಸಾರುವ ಮನುಸ್ಮೃತಿ ಸುಡುವುದು ಸಣ್ಣ ವಿಷಯವಲ್ಲ. ಈ ಹೆಣ್ಣು-ಗಂಡನ್ನೂ ಅಸಮಾನತೆ ನೋಡಲಾಯಿತು. ಬಾಬಾ ಸಾಹೇಬ್‌ರು ಮನುಸ್ಮೃತಿಯನ್ನ ಬಿಟ್ಟು ಬೇರೆ ಗ್ರಂಥಗಳನ್ನು ಸುಡಲಿಲ್ಲವೇಕೆ? ಅದರಲ್ಲಿರುವ ಅಸಮಾನತೆ, ಭೇದಭಾವ ಬೇರೆ ಗ್ರಂಥಗಳಲ್ಲಿ ಇಲ್ಲ. ಮನುಸ್ಮೃತಿ ಸುಟ್ಟಿರುವುದು ಭಗವದ್ಗೀತೆಯಲ್ಲಿರುವ ಅಸಮಾನತೆಯನ್ನು ಸುಟ್ಟಂತೆ” ಎಂದು ಪ್ರಗತಿಪರ ಚಿಂತಕ, ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.

ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ‌ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಮನುಸ್ಮೃತಿ ದಹನ್ ದಿವಸವನ್ನು ‘ಮನುಸ್ಮೃತಿ’ ಸುಡುವ ಮೂಲಕ ‌ಆಚರಿಸಲಾಯಿತು.

ಬಂಡಾಯ ಹೊರಾಟಗಾರ ಲಡಾಯಿ ಪ್ರಕಾಶಕ ಬಸವರಾಜ್ ಸೂಳೆಬಾವಿ ಮಾತನಾಡಿ, “1927 ಡಿಸೆಂಬರ್ 25 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಮನುಸ್ಮೃತಿ” ಸುಟ್ಟಿದ್ದು ಈ ದೇಶದ ಅಸಮಾನತೆ ಸುಟ್ಟ ದಿನ. ಈ ದೇಶ ಸಮಾನತೆಯಿಂದ ಕೂಡಿರುವಂತದ್ದಲ್ಲ. ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಮನುಷ್ಯನನ್ನೇ ಮನುಷ್ಯನನ್ನಾಗಿ ಕಾಣದ ದೇಶವಿದು. ಒಬ್ಬರು ಇನ್ನೊಬ್ಬರನ್ನು ಸಮಾನತೆಯಿಂದ ನೋಡದ ದೇಶವಿದು. ಎಲ್ಲರನ್ನೂ ಜಾತಿಯಿಂದ, ಜಾತಿ ಕಾರಣದ ಅಸಮಾನತೆಯಿಂದ ಕಂಡ ದೇಶವಿದು. ಬ್ರಾಹ್ಮಣರು ಶ್ರೇಷ್ಠ, ಉಳಿದವರು ಕನಿಷ್ಠವೆಂದು ಕಂಡಂತ ದೇಶವಿದು. ಈ ರೀತಿ ಅಸಮಾನತೆಯನ್ನು ಎತ್ತಿ ಹಿಡಿಯುವ ಮನುಸ್ಮೃತಿಯನ್ನು ಸುಡುವುದರ ಮೂಲಕ ಸಮಾನತೆ ಸಾರಿದರೆಂದು ಎಲ್ಲರೂ ತಿಳಿಯಬೇಕು” ಎಂದು ಹೇಳಿದರು.

“ಗಂಡು-ಹೆಣ್ಣಿನ ನಡುವೆ ಸಮಾನತೆ ಬರಬೇಕು ಎಂದು ಸಂವಿಧಾನ ಬಂದ ಮೇಲೆ ಬಂದಿದೆ ಎಂದು ನಾವೆಲ್ಲ ತಿಳಿದಿದ್ದೆವೆ. ಆದರೆ, ಇದು 1927ರಲ್ಲೇ ಬಾಬಾ ಸಾಹೇಬ್‌ರಿಗೆ ಈ ಆಲೋಚನೆ ಬಂದಿತ್ತು. ಈ ವಿಚಾರಕ್ಕೆ ಬೆಂಬಲ ಕೊಟ್ಡವರು ಮಹಾಡ್‌ನಲ್ಲಿ ಸಮಾವೇಶ ಆದ ಸಂದರ್ಭದಲ್ಲಿ ಮನುಸ್ಮೃತಿ ಸುಡಲು ಠರಾವು ಮಾಡಿದವರು ಚಿತ್ಪಾವನ ಬ್ರಾಹ್ಮಣ ಸಿ‌.ಎನ್. ಸಹಸ್ರ ಪುತೆ ಮಾಡಿದರು. ಪಿ‌.ಎನ್.ರಾಜಬೊದೆ ಎಂಬುವವರು ಅದಕ್ಕೆ ಅನುಮೋದನೆ ಮಾಡಿದರು” ಎಂದು ಹೇಳಿದರು.

ದಲಿತ ಕಲಾ ಮಂಡಳಿ ಕಲಾವಿದ ಶರೀಫ್ ಮಾತನಾಡಿ, “ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮೇಲು-ಕೀಳಿನಿಂದ ಜನರನ್ನು ವಿಂಗಡಿಸುತ್ತಾ ಬಂದಿದೆ. ಇಂದಿಗೂ ಜಾತಿ ಆಧಾರದಲ್ಲಿ ಮರ್ಯಾದೆ ಹತ್ಯಗಳು ಅದು ಮನುಸ್ಮೃತಿಯ ಒಂದು ಭಾಗವೇ ಅಗಿದೆ. ಹೆಣ್ಣು-ಗಂಡುಗಳ ಮಧ್ಯ ಬೇಧಭಾವ ಹುಟ್ಟು ಹಾಕಿ ಹೆಣ್ಣು ಅಡಿಗೆ ಮನೆಗೆ ಸೀಮೀತ ಎಂಬ ಕಟ್ಟಳೆಯನ್ನು ನಿರ್ಮಿಸಿದ್ದು ಈ ಮನುಸ್ಮೃತಿ ಇದನ್ನು ಸುಡುವುದರ ಮೂಲಕ ಬಾಬಾ ಸಾಹೇಬ್‌ರು 1927ರಲ್ಲಿ ಅಸಮಾನತೆ ಸಾರುವ ಮನುಸ್ಮೃತಿ ಸುಡುವುದರಿಂದ ಸಮಾನತೆಗೆ ಮೊದಲ ಚಾಲನೆ ನೀಡಿದರು” ಎಂದರು.

ಈ ಸುದ್ದಿ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ಜಿ; ಗಾಂಧಿ ಕನಸಿಗೆ ಕೊಳ್ಳಿ ಇಟ್ಟ ಕೇಂದ್ರ

ಈ ಸಂದರ್ಭದಲ್ಲಿ ಅನಂದ ಸಿಂಗಾಡೆ, ಶಿವಾನಮದ ತಮ್ಮಣ್ಣವರ, ಅನಿಲ್ ಕಾಳೆ, ಪರಶು ಕಾಳೆ, ಬಾಲರಾಜ್ ಅಳಂದ, ಯಲ್ಲಪ್ಪ ರಾಮಗೇರಿ, ಮುತ್ತು ಬಿಳಿಯೆಲಿ, ಬಸೂ ಬಿಳಿಯೆಲಿ, ರವಿ, ಎಸ್‌.ಎನ್.ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಮಂಜುನಾಥ, ರಮೇಶ ಕೊಳೂರು ಹಾಗೂ ಇತರರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...