“ಇಂದಿನ ರೈತರು ಕೃಷಿಯ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಾರದು ಸಾವಯುವ ಕೃಷಿ ಅಳವಡಿಸಿಕೊಂಡು ದೇಶಕ್ಕೆ ಅನ್ನ ಹಾಕ ಬೇಕು. ರೈತರ ಆರಾಧ್ಯ ದೈವ ಶ್ರೀ ಭಗವಾನ್ ಬಲರಾಮ ಆಗಿದ್ದಾರೆ” ಎಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ರಮೇಶ್. ಬ. ಕೋಳಿವಾಡ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದ ಉಡಚಮ್ಮ ದೇವಸ್ಥಾನದಲ್ಲಿ ಭಾರತೀಯ ಕಿಸಾನ್ ಸಂಘ ವತಿಯಿಂದ ಭಗವಾನ್ ಬಲರಾಮ್ ಜಯಂತಿ ಆಚರಣೆ ಮಾಡಿದರು.
ಯುವ ಮುಖಂಡರು ನಾಗರಾಜ್ ಕುಲಕರ್ಣಿ ಮಾತನಾಡಿ, “ಭಗವಾನ್ ಬಲರಾಮರ ಚರಿತ್ರೆಯನ್ನು ಹೇಳುತ್ತಾ ಕೃಷಿಯ ಬಗ್ಗೆ ಇಂದಿನ ಪರಿಸ್ಥಿತಿ ಹೇಗಿದೆ ಎಂದು ತಿಳಿಸಿದರು. ಮತ್ತು ಭಗವಾನ್ ಬಲರಾಮರು ಕೃಷಿಯ ಬಗ್ಗೆ ಹೊಂದಿದ ಕಾಳಜಿ ಮತ್ತು ಸಾಧನೆ ಹೇಗಿತ್ತು ಎಂಬುದನ್ನು ತಿಳಿಸಿದರು.
“ಭಾರತೀಯ ಕಿಸಾನ್ ಸಂಘ ಬಲರಾಮರ ಚಿನ್ಹೆಯನ್ನು ಹೊಂದಿದೆ. ಅಲ್ಲದೆ ಪ್ರತಿ ವರ್ಷ ಬಲರಾಮ್ ಜಯಂತಿಯನ್ನು ಗ್ರಾಮದಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ಆಚರಿಸುತ್ತಿರುದು ಸ್ಲಾಗಣೀಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕಡ್ಡಾಯವಾಗಿ ದೇವದಾಸಿ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು ಬಸವರಾಜ
ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರು ಶಂಕರಗೌಡ ಪಾಟೀಲ್ ಹಾಜರಿದ್ದರು. ಮಾಗಡಿ ಗ್ರಾಮದ ಶ್ರೀ ಪಕ್ಕೀರಯ್ಯ ಹಿರೇಮಠ್, ಪುಂಡಲೀಕ ಅದರ್ಕಟ್ಟಿ, ರಾಮನಗೌಡ ಪಾಟೀಲ್, ಅಶೋಕ್ ಮುಳಗುಂದ, ಅಶೋಕ್ ಚ ಪಲ್ಲೇದ, ಮಲ್ಲಿಕಾರ್ಜುನ ಈ ಪಾಟೀಲ್, ಶಿವಲಿಂಗಪ್ಪ ಕೊಡಿ, ಗೋಪಾಲ್ ರೆಡ್ಡಿ ಶೆಟ್ರಡಿ, ವೀರೇಶ್ (ರಾಜು), ಶಿವಶೀಂಪಿ, ಈಶ್ವರ್, ಗಿರೀಶ್ ಪತ್ತಾರ್, ಅಮೃತ್ತಗೌಡ ಪಾಟೀಲ್, ಹಾಲಪ್ಪ ಲಕ್ಷ್ಮೇಶ್ವರ, ಈಶ್ವರ್ ಗೌಡರ್ ಪಾಟೀಲ್, ಬಸನಗೌಡ ಪಾಟೀಲ ಇನ್ನು ಹಲವಾರು ರೈತರು ಹಾಜರಿದ್ದರು.





