“ಮಕ್ಕಳ ಆರೋಗ್ಯ ತಪಾಸಣೆ ಅತೀ ಅವಶ್ಯ. ಮಕ್ಕಳಲ್ಲಿರುವ ಖಾಯಿಲೆಗಳು ಯಾರಿಗೂ ತಿಳಿದಿರುವುದಿಲ್ಲ. ಅದರ ಬಗ್ಗೆ ಹೇಳಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ. ಮಕ್ಕಳ ಆರೋಗ್ಯ ತಪಾಸಣೆಯಿಂದ ಉಲ್ಬನವಾಗುವ ಕಾಯಿಲೆಗೆ, ಮುನ್ನವೇ ಚಿಕಿತ್ಸೆ ಕೊಡಿಸಬಹುದು. ಹೀಗಾಗಿ ಕಾಲಕಾಲಕ್ಕೆ ಚಿಕ್ಕ ಮಕ್ಕಳ ತಜ್ಞರೊಂದಿಗೆ ತಪಾಸಣೆ ನಡೆಸುವುದ ಅವಶ್ಯವಾಗಿದೆ” ಎಂದು ತಾಲೂಕ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶನಿವಾರ ಲೈಪ್ ಕೇರ್ ಆಸ್ಪತ್ರೆ ಹಾಗೂ ನ್ಯೂ ನಳಂದ ಹೊಟೆಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ಮಕ್ಕಳ ವೈದ್ಯಕೀಯ ಆರೋಗ್ಯ ಶಿಬಿರ ಹಾಗೂ ಬಿಪಿ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
“ಶಾಲಾ ಹಂತದಲ್ಲಿ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಿ ಉಚಿತ ಔಷಧಿ ನೀಡಿ ಸಹಕರಿಸಿದ ಡಾ.ಗೋಣೆಶ ಮೇವುಂಡಿ ಹಾಗೂ ಜಗದೀಶ ಸಂಗಟಿಯವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು” ಎಂದರು.
ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದ ಖ್ಯಾತ ಮಕ್ಕಳ ವೈದ್ಯ ಡಾ. ಗೊಣೇಶ ಮೇವುಂಡಿ, “ಒಂದು ದೇಶ ಪ್ರಗತಿಯಾಗಬೇಕಾದರೆ ಆರೋಗ್ಯ ಮತ್ತು ಶಿಕ್ಷಣ ಎರಡೂ ಅತ್ಯಂತ ಅವಶ್ಯ. ಹೀಗಾಗಿ ಈ ಎರಡೂ ವಿಷಯಗಳಲ್ಲಿ ಪಾಲಕರು ಅತ್ಯಂತ ಜಾಗೃತಿ ವಹಿಸುವುದು ಅವಶ್ಯವಾಗಿದೆ” ಎಂದರು.
“ಇಂದಿನ ಕಾಲದಲ್ಲಿ 10 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಪೋಷಕಾಂಶಗಳ ಕೊರತೆ ಹಾಗೂ ಹೊಟ್ಟೆಯಲ್ಲಿ ಜಂತುಗಳು ಬೆಲೆಯುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಮಕ್ಕಳ ಮುಖದ ಬಿಳಿ ಕಲೆಗಳು (ತದ್ದು) ಕಾಣಿಸಿಕೊಳ್ಳುತ್ತವೆ. ಇವು ತಪಾಸಣೆ ನಡೆಸದೇ ಗೊತ್ತಾಗುವುದಿಲ್ಲ. ಹೀಗಾಗಿ ವರ್ಷದಲ್ಲಿ ಒಂದೆರಡು ಭಾರಿಯಾದರೂ ಪಾಲಕರು ತಪ್ಪದೇ ಮಕ್ಕಳ ಆರೋಗ್ಯ ತಪಾಸಣೆ ನಡೆಸುವುದು ಅವಶ್ಯವಾಗಿದೆ” ಎಂದರು.

ಶಾಲಾ ಮುಖ್ಯೋಪಾಧ್ಯಾಯ ಡಾ.ನಿಂಗು ಸೊಲಗಿ ಮಾತನಾಡಿ, “ಶಾಲೆಯಲ್ಲಿ ಪೋಷಣ್ ಅಭಿಯಾನದಡಿ ನಿತ್ಯ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ವಿತರಿಸಲಾಗುತ್ತಿದೆ, ನಿಯಮಿತ ಕಬ್ಬನಾಂಶ ಮಾತ್ರೆ ಕೊಡಲಾಗುತ್ತಿದೆ. ಆದರೂ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸುತ್ತಿದ್ದೆವು. ಈ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮೂಲಕ ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳಿದ್ದರೂ ಅದನ್ನು ಪರಿಹರಿಸಲು ಅನುಕೂಲವಾಗುವುದೆಂದು ಎಸ್ಡಿ.ಎಂ.ಸಿ. ಯವರ ಸಹಕಾರದಲ್ಲಿ ಶಿಬಿರ ಸಂಘಟಿಸಲಾಗಿದೆ. ಸದೃಢ-ಸಮರ್ಥ ಮಕ್ಕಳಿಂದ ಸಮಾಜ ಕುಟುಂಗಳು ಸದೃಡವಾಗಿ ಬೆಳೆಯುತ್ತವೆ” ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಮಲ್ಟಿ ಮಿಡಿಯಾ ತರಗತಿಗಾಗಿ ಡಾ. ಗೋಣೇಶ ಮೇವುಂಡಿಯವರು ಎರಡು ಟಿ.ವಿ. ಗಳನ್ನು ನೀಡಿ ಪ್ರೋತ್ಸಾಹಿಸಿದ್ದನ್ನು ಸ್ಮರಿಸಿಕೊಂಡರು.
ಮಕ್ಕಳ ಆರೋಗ್ಯ ತಪಾಸಣೆ ಮಾಡಿದ ಡಾ.ಗೋಣೆಶ ಮೇವುಂಡಿ ಹಾಗೂ ಡಾ.ಲಕ್ಷ್ಮಣ ಪೂಜಾರ, ನ್ಯೂ ನಳಂದ ಹೋಟೆಲ್ ಮಾಲೀಕ ಜಗದೀಶ ಸಂಗಟಿ, ಡಾ. ಪ್ರಶಾಂತ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಸೇತುರಾಮಾಚಾರ್ಯ ಕಟ್ಟಿ ಮಾತನಾಡಿದರು.
ಈ ಶಿಬಿರದಲ್ಲಿ ತಮ್ಮ ಮಕ್ಕಳೊಂದಿಗೆ ತಾಯಂದಿರೂ, ಹಿರಿಯ ನಾಗರಿಕರೂ ಸಹ ಶಾಲೆಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜತೆಗೆ ಭೀಮಾಂಬಿಕಾನಗರದ ಡಾ.ಬಿ.ಎಸ್.ಮೇಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ ಸಹ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ ದಂಡಿನ ಅಧ್ಯಕ್ಷತೆವಹಿಸಿದ್ದರು
ಕಾರ್ಯಕ್ರಮದಲ್ಲಿ ಬಸವರಾಜ ತಿಗರಿ, ರಂಗಪ್ಪ ಮೇಟಿ, ಸಿದ್ದರಾಮಗೌಡ ಪಾಟೀಲ, ಯಲ್ಲಪ್ಪ ಅಬ್ಬೀಗೇರಿ, ಅಶೋಕ ಕೋಳಿ, ವಿಠಲ ಜಂಬಿಗಿ, ಪರಮೇಶ ದಂಡಿನ, ಜಿತೇಂದ್ರ ಬಾಗಳಿ, ಪ್ರಭಾವತಿ ಆರ್. ಗಾಡದ, ಶಿವಲೀಲಾ ಅಬ್ಬಿಗೇರಿ, ಬಸವರಾಜ ಹೆಬಲಿ , ಲಕ್ಷ್ಮಣ ಸಂಗಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಬಿ.ಎಚ್.ಹಲವಾಗಲಿ ಸ್ವಾಗತಿಸಿ, ಪಿ.ಎಂ.ಲಾಂಡೆ ನಿರೂಪಿಸಿ, ಎಂ.ಆರ್.ಗುಗ್ಗರಿ ವಂದನಾರ್ಪನೆ ಮಾಡಿದರು.





