ಸಿಎಂ ಸಿದ್ದರಾಮಯ್ಯನವರಿಗೆ ಮುನ್ಸಿಪಲ್ ಮೈದಾನಕ್ಕೆ ಹೊಂದಿಕೊಂಡ ಅಲೆಮಾರಿ ಗುಡಿಸಲುಗಳು, ಜೋಪಡಿಗಳು ಕಾಣಿಸದಂತೆ ಜಿಲ್ಲಾಡಳಿತ ಮರೆ ಮಾಡಿರುವುದು ಕಂಡುಬಂದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಚಂದನ ಎಜ್ಯುಕೇಶನ್ ಸೊಸೈಟಿ, ವತಿಯಿಂದ ಆಯೋಜಿಸಿರುವ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವಾಗ ಅಲೆಮಾರಿ ಸುಮುದಾಯದ ಗುಡಿಸಲುಗಳು ಕಾಣದಂತೆ ಮರೆ ಮಾಡಲಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು ಶೊಷಿತ ಸಮುದಾಯಗಳ ನಾಯಕರೆಂದೆ ಗುರುತಿಸಿಕೊಂಡಿದ್ದಾರೆ. ಆದರೆ ಸುಮಾರು ನಲವತ್ತು ಐವತ್ತು ವರ್ಷಗಳಿಂದ ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೆ, ಗುಡಿಸಲು ಜೋಪಡಿಗಳಲ್ಲಿ ವಾಸಿಸುವ ಅಲೆಮಾರಿ ಸಮುದಾಯದ ಗುಡಿಸಲುಗಳು ಸಿಎಂ ಸಿದ್ದರಾಮಯ್ಯನವರಿಗೆ ಕಾಣಿಸದಂತೆ ಮರೆಮಾಚಿರುವುದು ದುರಂತ.

“ಡಿಸಿ ಅವರು ಆದೇಶ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ್ತಾರೆ, ಅವರಿಗೆ ನಿಮ್ಮ ಗುಡಿಸಲು, ಜೋಪಡಿಗಳು ಕಾಣಬಾರದೆಂದು ಪರದೆ ಹಾಕ್ತಿದ್ದೀವಿ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ” ಎಂದು ಅಲೆಮಾರಿ ಸಮುದಾಯದವರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಎಲ್ಲಾ ಧರ್ಮಗಳ ಬಗ್ಗೆ ಅರಿತು ಬಾಳೋಣ : ಎಸ್ಪಿ ಹರಿರಾಮ್ ಶಂಕರ್
“ಸಿಎಂ ಸಿದ್ದರಾಮಯ್ಯ ಅವರಿಗೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಕೊಡಲು ಅವಕಾಶ ಕೊಡಲಿಲ್ಲ” ಎಂದು ಅವರು ಹೇಳಿದ್ದಾರೆ.





