ಗದಗ | ವಸಾಹತುಶಾಹಿತ್ವವು ಒಳಿತು ಕೆಡಕುಗಳ ಸಂತೆ: ಪ್ರೊ. ಕೆ. ವೆಂಕಟೇಶ

Date:

“ವಿನಾಶ ಮತ್ತು ವಿಮೋಚನೆ ಕ್ರಿಯೆಗಳೆರಡೂ ಭಾರತದ ಮೇಲೆ ವಸಾಹತುಶಾಹಿತ್ವವು ಉಂಟು ಮಾಡಿದ ಪರಿಣಾಮಗಳು. ಬ್ರಿಟೀಷರ ಕ್ರೌರ್ಯ, ಜೀವ ವಿರೋಧಿ ಕೃತ್ಯಗಳಿಗೆ ರಿಯಾಯತಿ ತೋರದೇ ಬ್ರಿಟೀಷ್ ಸಂದರ್ಭದ ಜನಪರ ಮಾನವೀಯ ಘಟನೆಗಳನ್ನೂ ಸಹ ಮರೆಯಬಾರದು” ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಡಾ. ಕೆ. ವೆಂಕಟೇಶರವರು ಹೇಳಿದರು.

ಗದಗ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಮಾಜ-ವಿಜ್ಞಾನ ಸಂಘವು ‘ವಸಾಹತುಶಾಹಿ ಪ್ರಜ್ಞೆ : ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು’ ಎಂಬ ವಿಷಯದ ಕುರಿತು ಒಂದು ದಿನದ ಬಹುಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮವು ಮಹಾವಿದ್ಯಾಲಯದ ಸಭಾಂಗಣದಲ್ಲಿ ನೆರವೇರಿತು.

“ಕೆ.ಎಲ್.ಇ.ಯಂತಹ ಚಾರಿತ್ರಿಕ ವಿದ್ಯಾಸಂಸ್ಥೆಯೊಂದು ವರ್ತಮಾನದ ಸುಡು ಸಂಗತಿಯೊಂದರ ಕುರಿತು ಆರೋಗ್ಯಪೂರ್ಣ ಚರ್ಚೆಯೊಂದನ್ನು ಏರ್ಪಡಿಸಿರುವುದು ಅದರ ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಎನ್ನುವ ಮೂಲಕ ವಿಚಾರ ಸಂಕಿರಣದ ಆಶಯ ನುಡಿಗಳನ್ನು ಪ್ರೊ. ಕೆ. ವೆಂಕಟೇಶ ಅವರು ಪ್ರಾರಂಭಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಹುಕಾಲದ ಹಿಂದೆಯೇ ವಸಾಹತುಶಾಹಿ ಆಡಳಿತ ಕೊನೆಗೊಂಡರೂ ಅದರ ಭಿನ್ನ ಭಿನ್ನ ಪಳಯುಳಿಕೆಗಳು ಇಂದಿಗೂ ನಮ್ಮ ಕಣ್ಣೆದುರಿಗಿವೆ. ಪ್ರತಿನಿತ್ಯವೂ ಎದುರುಬದುರಾಗುತ್ತಿವೆ. ಆರ್ಥಿಕ ಸಂಪತ್ತನ್ನು ವಶಪಡಿಸಿಕೊಳ್ಳುವ ಮೂಲ ಉದ್ದೇಶದ ವಸಾಹತೀಕರಣವು ಭಾರತೀಯ ಜನತೆಯ ಸಂಸ್ಕೃತಿ, ಮೌಲ್ಯ, ಕಲೆ, ನೃತ್ಯ, ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿದ ಅತಿದೊಡ್ಡ ದಾಳಿಯಾಗಿದೆ” ಎಂದರು.

“ವಸಾಹತು ರಾಷ್ಟ್ರವಾಗಿದ್ದ ಕೀನ್ಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ ಎನ್ನುವ ಕಾರಣಕ್ಕೆ ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತಳ್ಳಲಾಗಿತ್ತು. ನಮ್ಮ ಸಂಸ್ಕೃತಿ, ಧರ್ಮ, ಭಾಷೆಗಳ ಮೇಲೆ ವಸಾಹತುಶಾಹಿ ಮಾಡಿದ ವಿನಾಶದ ಗಾಯಗಳಿವೆ.  ಇದರ ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆಯ ಕೆಲವು ಗಾಯಗಳಿಗೆ ವಸಾಹತುಶಾಹಿ ಧೋರಣೆಯು ವಿಮೋಚನೆಯ ಮುಲಾಮಾಗಿಯೂ ಕೆಲಸ ಮಾಡಿದೆ” ಎಂದರು.

“ನಮ್ಮ ಶಿಕ್ಷಣ ವ್ಯವಸ್ಥೆಯಂತೂ ಹೆಚ್ಚು ವಸಾಹತುಶಾಹಿ ಮನಸ್ಥಿತಿ ಹೊಂದಿದೆ. ‘ವಸಾಹತುಶಾಹಿ ಚಿಂತನೆಗಳು ನಮ್ಮ ಚಿಂತನೆಗಳಲ್ಲ’ ಎನ್ನುವ ಕಾರಣಕ್ಕೆ ರಾಮ ಮನೋಹರ ಲೋಹಿಯಾ ವಿದ್ಯಾಬ್ಯಾಸಕ್ಕಾಗಿ ಜರ್ಮನಿಗೆ ತೆರಳುತ್ತಾರೆ. ಬ್ರಿಟೀಷರ ವರ್ಣತಾರತಮ್ಯ ನೀತಿಯನ್ನು ಜಗತ್ತಿನ ಅತಿದೊಡ್ಡ ಶೋಷಣೆ ಎನ್ನುತ್ತಾರೆ. ವಸಾಹತುಶಾಹಿಯ ಕಾರಣಕ್ಕೆ ಭಾರತದ ಮೂಲ ನಿವಾಸಿಗಳಿಗೆ ಕೀಳರಿಮೆ ಉಂಟಾಯಿತೆನ್ನುವ ಲೋಹಿಯಾರವರು ಬ್ರಿಟೀಷರ ಬದಲಾಗಿ ಆಪ್ರಿಕನ್ನರು ಅಥವಾ ನಿಗ್ರೋಗಳು ಭಾರತವನ್ನು ಆಳಿದರೆ ನಮ್ಮ ವರ್ಣನೀತಿ ಬದಲಾಗುತ್ತಿತ್ತು ಎನ್ನುತ್ತಾರೆ. ಇಂತಹ ವಿಸ್ಮೃತಿಗಳ ಮಧ್ಯ ಜನಭಾಷೆ ಮತ್ತು ಜನಸಂಸ್ಕೃತಿಗಳ ಮೇಲೆ ದಬ್ಬಾಳಿಕೆಯ ಮಧ್ಯೆಯೂ ಸಮಾಜದ ಬಹುಪಾಲು ಜನರಿಗೆ ವಸಾಹತುಶಾಹಿತ್ವವು ವಿಮೋಚನೆಯಾಗಿ ಕಂಡಿದೆ” ಎಂದರು.

ವಸಾಹತುಶಾಹಿತ್ವವು ವಿಮೋಚನೆಯ ದಾರಿ : ವಸಾಹತು ನೀತಿಯ ಒಳಿತನ್ನು ಗುಣಗಾಣಿಸುವ ಸಮೂಹವೂ ನಮ್ಮ ನಡುವೆ ಇದೆ. ಕುವೆಂಪುವಿನಂತಹ ಮಹಾನ್ ಲೇಖಕರು ‘ಬ್ರಿಟೀಷರು ಭಾರತಕ್ಕೆ ಪ್ರವೇಶಿಸದಿದ್ದರೆ ನಾನು ಧಣಿಗಳ ಮನೆಯ ಸಗಣಿ ಬಾಚುತ್ತಿದ್ದೆ’ ಎನ್ನುವ ಮಾತು ವಸಾಹತುಶಾಹಿ ಕಾಲದ ಬ್ರಿಟೀಶ್ ಶಿಕ್ಷಣ ವ್ಯವಸ್ಥೆಯು ಶೂದ್ರ ಮತ್ತು ತಳ ವರ್ಗ, ಸ್ತ್ರೀಯರ ಪಾಲಿಗೆ ಬಿಡುಗಡೆಯ ದಾರಿಯಾಗಿ ಕಂಡಿರುವುದನ್ನು ಸೂಚಿಸುತ್ತದೆ” ಎಂದು ಪ್ರೊ. ಕೆ. ವೆಂಕಟೇಶ್ ಎಂದರು.

ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ವೀಣಾ ಈ ಪ್ರಾಸ್ತಾವಿಕವಾಗಿ ಮಾತನಾಡಿ, “ಬ್ರಿಟೀಷರಿಂದ ನಾವು ರಾಜಕೀಯ ಬಿಡುಗಡೆಯನ್ನು ಎಂದೋ ಪಡೆದಿದ್ದೇವೆ. ಆದರೆ ಸಾಂಸ್ಕೃತಿಕ ಬಿಡುಗಡೆ ಸಾಧ್ಯವಾಗಬೇಕು. ಗಾಂಧಿ ಅಧುನಿಕತೆಯು ಭಾರತಕ್ಕೆ ಶಾಪ ಎನ್ನುತ್ತಾರೆ. ನಾವಿಂದು ಬ್ರಿಟೀಷರಿಲ್ಲದೇ ಬ್ರಿಟೀಷರ ಹಿಡಿತದಲ್ಲಿದ್ದೇವೆ” ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಎ.ಕೆ.ಮಠ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀಮತಿ. ರಜನಿ ಪಾಟೀಲ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಲ್ಪಡುವ ಲೇಖನಗಳ ಸಂಕಲನ ‘ಛಾಯೆ’ ಬಿಡುಗಡೆಗೊಂಡಿತು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಮಳೆಯಿಂದ 349 ಮನೆಗಳಿಗೆ ಹಾನಿ; 161 ಅರ್ಜಿ ತಿರಸ್ಕಿರಿಸಿದ ಆಡಳಿತ

ಉದ್ಘಾಟನಾ ಕಾರ್ಯಕ್ರಮದ ನಂತರದ ತಾಂತ್ರಿಕ ಗೋಷ್ಠಿಗಳಲ್ಲಿ ಅಸ್ಸಾಂ ವಿಶ್ವವಿದ್ಯಾಲಯ, ಸಿಲಚಾರ್‌ನ ರಾಜ್ಯಶಾಸ್ತ್ರ ಪ್ರಾಧ್ಯಾಪಕರು ಹರ್ಷ ಎಸ್ ಮತ್ತು ಉತ್ತರ ಪ್ರದೇಶದ ನೋಯ್ಡಾದ ಜೆ.ಎಸ್.ಎಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಡಾ. ಅನುಷ ಹೆಗ್ಡೆ ವಸಾಹತುಶಾಹಿ ಅನುಭವದ ಕುರಿತಾದ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯಾಂಶಗಳು:

* ವಸಾಹತು ಪ್ರಜ್ಞೆ ಒಂದು ಮನಸ್ಥಿತಿ. 

* ಚರಿತ್ರೆಯನ್ನು ಆರಾಧನೆ ಮತ್ತು ಪೂರ್ವಾಗ್ರಹ ಮನಸ್ಥಿತಿಯಿಂದ ನೋಡಿದರೆ ಅರಿವಿಗಿಂತ ಅಪಾಯ ಜಾಸ್ತಿ

* ಚರಿತ್ರೆಯ ವಸ್ತುನಿಷ್ಠ ಅಧ್ಯಯನ ಈ ಕಾಲದ ಅಗತ್ಯ

* ಪಾಶ್ಚಿಮಾತ್ಯರಿಂದ ಬಂದದ್ದು ಎಲ್ಲವೂ ಶ್ರೇಷ್ಠವಲ್ಲ, ಎಲ್ಲವೂ ತಿರಸ್ಕೃತವಲ್ಲ

ವಿಚಾರ ಸಂಕಿರಣದಲ್ಲಿ ದೇಶ ಮತ್ತು ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಪ್ರತಿನಿಧಿಗಳು ಆಗಮಿಸಿ ಸುಮಾರು ಎಪ್ಪತ್ತು ಪ್ರಬಂಧಗಳನ್ನು ಮಂಡಿಸಿದರು. ವಿಚಾರಸಂಕಿರಣದಲ್ಲಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...