ಕಳೆದ ಎರಡೂ ವರೆ ದಶಕಗಳಿಂದ ಪುಸ್ತಕ ಪ್ರಕಾಶನ ಸಂಸ್ಥೆಯಲ್ಲಿ ತನ್ನದೇ ಆದ ಹಿರಿಮೆಗಳಿಸಿ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಅಕ್ಷರ ಸಂಸ್ಕೃತಿ ಉಳಿಸಿ, ಪುಸ್ತಕ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿರುವ ಗದಗಿನ ನಿರಂತರ ಪ್ರಕಾಶನದ ಪ್ರಕಾಶಕ, ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರು ರಾಜ್ಯಮಟ್ಟದ ಪ್ರಕಾಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೆಬ್ರವರಿ 7-8ರಂದು ಎರಡು ದಿನಗಳ ಕಾಲ ಬೀದರ್ ಜಿಲ್ಲೆಯ ಬೇಲೂರಿನ ಶರಣ ಉರಿಲಿಂಗ ಪೆದ್ದಿ, ಶರಣೆ ಕಾಳವ್ವೆ ಉತ್ಸವ, ಲಿಂಗೈಕ್ಯ ಶಿವಲಿಂಗೇಶ್ವರ ಶಿವಯೋಗಿಗಳ 57 ಪುಣ್ಯ ಸ್ಮರಣೆ ನಿಮಿತ್ಯ ಉರಿಲಿಂಗ ಪೆದ್ದಿ ಮಠದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಸಮಗ್ರ ಯೋಜನೆ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ ಸತೀಶ್ ಹೊಸಮನಿ ಯವರು ಪ್ರಶಸ್ತಿ ಪ್ರದಾನ ಮಾಡುವರು.
ಪುಸ್ತಕೋದ್ಯಮಿ ಬಸವರಾಜ್ ಜಿ ಕೊನೆಕ್ ಸಮ್ಮೇಳನ ದ ಸರ್ವಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಶರಣು ಸಲಗರ ಸಮಾರಂಭದ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಸಾಗರ ಖಂಡ್ರೆ ಪುಸ್ತಕ ವ್ಯಾಪಾರಿ ಮತ್ತು ಪ್ರಕಾಶಕರ ಸಂಘದ ಜಿಯಾ ಉದ್ದಿತ್ ಮುಖ್ಯ ಅತಿಥಿ ಗಳಾಗಿ ಪಾಲ್ಗೊಳ್ಳ ಲಿದ್ದಾರೆ.
ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸುವರು. ಖ್ಯಾತ ಕವಿ ಡಾ ರಾಜಶೇಖರ್ ಮಠಪತಿ ಇವರಿಂದ ಸಮಾರೋಪ ನುಡಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ನಿರಂತರ ಪ್ರಕಾಶನ ದ ಜೊತೆಗೆ ವಿದ್ಯಾನಿಧಿ ಪ್ರಕಾಶನ, ಅಭಿನವ ಪ್ರಕಾಶನ, ಶಾರದಾ ಪ್ರಕಾಶನ, ಅಮರ ಪ್ರಕಾಶನ ಶಿರಪುರ ಪ್ರಕಾಶನ, ಧರಿನಾಡು ಪ್ರಕಾಶನ, ಪೂಜಾ ಪ್ರಕಾಶನ ಸಂಸ್ಥೆ ಗಳ ಪ್ರಕಾಶಕರೂ ಪ್ರಕಾಶನ ಪ್ರಶಸ್ತಿ ಸ್ವೀಕರಿಸಲಿದ್ದಾರೆ
ನಿರಂತರ ಪ್ರಕಾಶನ ಪ್ರಕಟಿಸಿದ ವಿವಿಧ ಲೇಖಕರ ಪುಸ್ತಕಗಳು ನಾಡಿನ ಹಲವು ದತ್ತಿ ಪ್ರಶಸ್ತಿ ಮತ್ತು ಪುರಸ್ಕಾರಗಳು ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.





