“ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸಮಿತಿಯು ‘ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ್ಯಾಲಿ’ ಎನ್ನುವ ಬೃಹತ್ ಜನಾಂದೋಲನವನ್ನು ಇದೇ ಡಿಸೆಂಬರ್ 21 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಯು ಬಸವರಾಜ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ ವಾದಿ ಸಿಪಿಎಂ ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿ ಅವರು ಮಾತನಾಡಿದರು. ಇದನ್ನು ಉದ್ದೇಶಿಸಿ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು ಬಸವರಾಜ ಮಾತನಾಡಿದರು.
“ಈ ರ್ಯಾಲಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಮಧ್ಯಮ ಹಾಗೂ ಬಡ ರೈತರು, ಬಗರಹುಕುಂ ಸಾಗುವಳಿದಾರರು, ಭೂಸ್ವಾಧೀನ ವಿರೋಧಿ ಹೋರಾಟ ನಿರತ ರೈತರು, ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು, ವಿವಿಧ ಸರ್ಕಾರಿ ವಲಯದ ಯೋಜನಾ ಕಾರ್ಮಿಕರು, ಖಾಸಗಿ ಸರ್ಕಾರಿ ವಲಯಗಳ ಗುತ್ತಿಗೆ ನೌಕರರು, ಗ್ರಾಮೀಣ ವಲಯದ ಉದ್ಯೋಗ ಖಾತ್ರಿ ಹಾಗೂ ಕೃಷಿ ಕೂಲಿಕಾರರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಜಿ ನಾಗರಾಜ್ ಮಾತನಾಡಿ “ರಾಜ್ಯಾದ್ಯಂತ ಇರುವ ಸಿಪಿಐ(ಎಂ) ಶಾಖೆಗಳ ನೇತೃತ್ವದಲ್ಲಿ ಈಗಾಗಲೇ ನವೆಂಬರ್ 1 ರಿಂದ ಡಿಸೆಂಬರ್ 15ರವರೆಗೆ ರಾಜ್ಯದ ಉದ್ದಗಲಕ್ಕೂ ನಿತ್ಯ ನೂರಾರು ಕಾರ್ಯಕರ್ತರು ಕರಪತ್ರ, ಕಿರು ಪಸ್ತಕಗಳ ವಿತ್ತರಣೆ ಮೂಲಕ ಸಾವಿರಾರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ಹೇಗೆ ಜನಸಾಮಾನ್ಯರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಇದಕ್ಕೆ ಪರ್ಯಾಯವಾಗಿ ಸಿಪಿಎಂ ಪಕ್ಷ ನೇತೃತ್ತದ್ದ ಕೇರಳ ಹಾಗೂ ಹಿಂದಿನ ಪ.ಬಂಗಾಳ, ತ್ರಿಪುರ ಸರ್ಕಾರಗಳು ಜಾರಿ ಮಾಡಿದ ಹಾಗೂ ಮಾಡುತ್ತಿರುವ ಜನಪರ ನೀತಿಗಳು ಹೇಗೆ ಜನರ ಬದುಕನ್ನು ಉತ್ತಮಪಡಿಸಲು ಸಹಾಯವಾಗಿವೆ” ಎಂದರು.
“ರಾಜ್ಯದಲ್ಲೂ ಸಿಪಿಎಂ ಹಾಗೂ ಇತರೆ ಎಡ ಶಕ್ತಿಗಳ ನಡೆಸುತ್ತಿರುವ ಪರ್ಯಾಯ ರಾಜಕಾರಣ ಅದನ್ನು ಜನರು ಬೆಂಬಲಿಸಬೇಕಾದ ಅನಿವಾರ್ಯತೆಯನ್ನು ಮನವರಿಕೆ ಮಾಡಲಾಗುತ್ತಿದೆ. ಮಾತ್ರವಲ್ಲ ರಾಜ್ಯದ ಜನರ ಎದುರಿಸುತ್ತಿರುವ ಸುಮಾರು 20 ಅಧಿಕ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಹಿಸಬೇಕು” ಸಾರ್ವಜನಿಕರಿಂದ ಮನೆಮನೆಗಳಿಂದ ಸಿಹಿ ಸಂಗ್ರಹಗಳನ್ನು ಜೋತೆಗೆ ನಿಧಿ ಸಂಗ್ರಹವನ್ನು ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐಎಂ ಗದಗ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, “ಡಿಸೆಂಬರ್ 21 ರಂದು ನಡೆಯಲಿರುವ ಸಭೆಯಲ್ಲಿ ಗದಗ ಜಿಲ್ಲೆಯಿಂದ ಸುಮಾರು 1000 ಕ್ಕೂ ಹೆಚ್ಚು ಜನ ಪಕ್ಷದ ಸದಸ್ಯರು ಹಾಗೂ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಸೇರಿ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರು ಕಾಮ್ರೇಡ್ ಯು ವಾಸುಕಿ ಹಾಗೂ ರಾಜ್ಯದ ಪ್ರಮುಖ ಸಿಪಿಎಂ ನಾಯಕರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ, ಸದಸ್ಯರಾದ ಮಹೇಶ್ ಹೀರೆಮಠ್, ಮೇಹಬೂಬ ಹವಾಲ್ದಾರ, ಎಂ ಎಸ್ ಹಡಪದ, ಪೀರು ರಾಠೋಡ ಇದ್ದರು.





