ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಎಲ್ಲ ಹಳ್ಳಿಗಳಿಗೂ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಗಜೇಂದ್ರಗಡದ ಬಸ್ ನಿಲ್ದಾಣದಲ್ಲಿ ಬಸ್ಗಳನ್ನು ತಡೆದು ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ದಿನನಿತ್ಯ 2:30 ಗಂಟೆಗೆ ಗಜೇಂದ್ರಗಡದಿಂದ ಬಾದಾಮಿಗೆ ಹೊರಡುತ್ತಿದ್ದ ಬಸ್, ಕಳೆದ ನಾಲ್ಕು ದಿನಗಳಿಂದ ಸಂಚಾರ ನಡೆಸುತ್ತಿಲ್ಲ. ಬಸ್ ಸಂಚಾರ ಒದಗಿಸುವಂತೆ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮೂರಿಗೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ಮುಖಂಡ ಗಣೇಶ ರಾಠೋಡ್, “ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯ ಒದಗಿಸುವಂತೆ ಕಳೆದ ತಿಂಗಳೂ ಮನವಿ ಸಲ್ಲಿಸಲಾಗಿತ್ತು. ತಶೀಹಲ್ದಾರರಿಗೂ ಕೂಡ ಮನವಿ ಮಾಡಿದ್ದೆವು. ಅವರು ಡಿಪೋ ಮಾನ್ಯೇಜರ್ ಜೊತೆ ಮಾತನಾಡುತ್ತೆನೆ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಸಂಘಟನೆಯ ಚಂದ್ರು ರಾಠೋಡ್ ಮಾತನಾಡಿ, “ನಾವು ಈ ಹಿಂದೆ ಹಲವಾರು ಭಾರಿ ಮನವಿ ಮಾಡಿದ್ದೇವೆ. ಆದರೂ, ಬಸ್ ಸೌಲಭ್ಯ ಕಲ್ಪಿಸಲು ಡಿಪೋ ಮಾನ್ಯೇಜರ್ ಮುಂದಾಗುತ್ತಿಲ್ಲ” ಎಂದು ಕಿಡಿಕಾರಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಡಿಪೋ ಸಿಬ್ಬಂದಿಗಳು ಶನಿವಾರ ಸಭೆ ಕರೆದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಪ್ರತಿಭಟನೆಯಲ್ಲಿ ಯೋಗಿಶ ಚಿಟಗಿ, ಮಾಂತೇಶ ಪೂಜಾರ, ನಾಗರಾಜ ಎಸ್ ಎಮ್, ಅಪ್ಪು ಪೂಜಾರ, ಮುಪಯ್ಯ ಬೆಳವಣಕಿ, ಮಣಿಕಂಠ, ಸರ್ವೆಶ ಕುರಿ, ಮುತ್ತುರಾಜ್ ಕುದರಿ, ವೀರಪ್ಪ ನಾಯಕ, ನಾಗರಾಜ ಉಸಲಕೊಪ್ಪದ, ಶರಣಪ್ಪ ರೋಣದ, ಮತ್ತಣ್ಣ ರೋಣದ ಹಾಗೂ ವಿಧ್ಯಾರ್ಥಿಗಳು ಇದ್ದರು.




