ಗದಗ | ಬೆಳೆಗಳಿಗೆ ರಾಸಾಯನಿಕ ಸಿಂಪಡಿಸಲು ಡ್ರೋನ್‌ ತಂತ್ರಜ್ಞಾನ: ಪ್ರಾತ್ಯಕ್ಷಿಕೆಗೆ ಮುಂದಾದ ಕೆವಿಕೆ

Date:

ರೈತರು ತಮ್ಮ ಹೊಲದಲ್ಲಿ ಬೆಳೆದ ಕೃಷಿ ಬೆಳೆಗಳು ಕೀಟ-ರೋಗ ಬಾಧೆಗಳಿಗೆ ಒಳಗಾದ ಬೆಳೆಗಳು ನಲುಗಿ ಉತ್ತಮ ಇಳುವರಿ ಕೊಡದೆ ರೈತರು ಆರ್ಥಿಕ ನಷ್ಟ ಅನುಭವಿಸುತ್ತಾರೆ. ಈ ನಷ್ಟವನ್ನು ತಡೆಗಟ್ಟಲು ಸಮಯಕ್ಕೆ ಸರಿಯಾಗಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಲು ಡ್ರೋನ್‌ ತಂತ್ರಜ್ಞಾನ ಬಳಸುವುದನ್ನು ಕೆ ಎಚ್ ಪಾಟಿಲ್ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಲಾಗಿದೆ.

ಗದಗ ತಾಲೂಕಿನ ಬೆಳದಡಿ ಬ್ರಹ್ಮಾನಂದಪುರ, ನಾಗಾವಿ ಗ್ರಾಮಗಳು ಹಾಗೂ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ಹಾಗೂ ಶಿವಾಜಿನಗರ ಗ್ರಾಮಗಳಲ್ಲಿ ವಿವಿಧ ಬೆಳೆಗಳಾದ ಕುಸುಬೆ, ಕಡಲೆ, ಹಿಂಗಾರಿ ಜೋಳ ಹಾಗೂ ಹೂವಿನ ಬೆಳೆಗಳಲ್ಲಿ ಕೀಟ ರೋಗ ಬಾಧೆ ತಡೆಗಟ್ಟಲು ಡ್ರೋನ್ ಸಹಾಯದಿಂದ ಔಷಧಿ ಸಿಂಪಡಿಸಲು ರೈತರು ಸಜ್ಜಾಗುತ್ತಿದ್ದಾರೆ.

ಗದಗ ಜಿಲ್ಲೆಯ ಹುಲಕೋಟಿಯ ಕೆ ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯಗಳ ಸಂಯುಕ್ತಾಶ್ರಯದಲ್ಲಿ ಡೋನ್ ಯಂತ್ರದ ಪ್ರಾತ್ಯಕ್ಷಿಕೆಯನ್ನು ಮೂರು ದಿನಗಳ ಕಾಲ ಒಟ್ಟು 6 ಗ್ರಾಮಗಳ 140ಕ್ಕೂ ಅಧಿಕ ಮಂದಿ ರೈತರಿಗೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೃಷಿ ಬೆಳೆಗಳಲ್ಲಿ ಕೀಟ-ರೋಗ ಬಾಧೆ ತಡೆಗಟ್ಟಲು ರಾಸಾಯನಿಕ ಔಷಧಿಗಳನ್ನು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಸಿಂಪಡಣೆ ಮಾಡುವ ಪ್ರಕ್ರಿಯೆ ತುಂಬಾ ಮುಖ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಸಿಂಪಡಣೆ ಕೈಗೊಳ್ಳದೇ ಹೋದರೆ ಸಸ್ಯದ ಆರೋಗ್ಯ ನಶಿಸಿ, ಸುಮಾರು ಶೇ.20-30ರಷ್ಟು ಇಳುವರಿ ಕುಂಠಿತವಾಗುತ್ತದೆ.

1002644180

ಗದಗ ಜಿಲ್ಲೆಯ ಕ್ಷೇತ್ರ ಬೆಳೆಗಳಾದ ಹೆಸರು, ಗೋವಿನಜೋಳ, ಹತ್ತಿ, ಶೇಂಗಾ, ಕಡಲೆ, ಕುಸುಬೆ ಹಾಗೂ ಜೋಳ ಇವುಗಳಲ್ಲಿ ರಸ ಹೀರುವ ಕೀಟಗಳು, ಎಲೆ, ಕಾಂಡ ಮತ್ತು ತೆನೆ/ಕಾಯಿ ತಿನ್ನುವ ಕೀಟಗಳು ಹಾಗೂ ದುಂಡಾಣು, ನಂಜಾಣು ಮತ್ತು ಶಿಲೀಂಧ್ರಗಳಿಂದ ಬರುವ ವಿವಿಧ ರೋಗಗಳು ಸರ್ವೇ ಸಾಮಾನ್ಯ. ಈ ಬಾಧೆಗಳನ್ನು ಹತೋಟಿ ಮಾಡಲು ರೈತ ಬಾಂಧವರು ಎಕರೆಗೆ ಸುಮಾರು ₹1200 ರಿಂದ ₹2500ದವರೆಗೆ ಕೇವಲ ರಸಾಯನಿಕ ಪರಿಕರಗಳ ಖರೀದಿಗಾಗಿ ಖರ್ಚು ಮಾಡುತ್ತಾರೆ. ಇನ್ನು ಈ ರಾಸಾಯನಿಕಗಳನ್ನು ಸಿಂಪಡಿಸಲು ಕೂಲಿಯಾಳುಗಳಿಗೆ ದಿನಕ್ಕೆ ಸುಮಾರು ₹400ಗಳಷ್ಟು ಕೂಲಿ ಕೊಡಬೇಕಾಗುತ್ತದೆ.

ಎತ್ತರ ಬೆಳೆದ ಬೆಳೆಗೆ ರಾಸಾಯನಿಕ ಸಿಂಪಡಣೆಗೆ ಕಷ್ಟ

ರಾಸಾಯನಿಕಗಳನ್ನು ಸಿಂಪಡಿಸಲು ಬಳಸುವ ಬ್ಯಾಟರಿ ಹಾಗೂ ಎಂಜಿನ್ ಚಾಲಿತ ನ್ಯಾಪ್‌ಸ್ಯಾಕ್ ಸಿಂಪಡಣಾ ಯಂತ್ರಗಳು ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದರೆ, ಟ್ರ್ಯಾಕ್ಟರ್ ಚಾಲಿತ ಯಂತ್ರಗಳು ದೊಡ್ಡ ಹಿಡುವಳಿದಾರರಿಗೆ ಸರಿಹೊಂದುತ್ತವೆ. ಒಂದನೇ ಹಂತದ ಸಿಂಪಡಣೆಗೆ ರೈತರು ಈ ಯಂತ್ರಗಳನ್ನು ಉಪಯೋಗಿಸುತ್ತಿದ್ದರೂ, ಎರಡನೇ ಹಂತದ ಸಿಂಪಡಣೆಯ ವೇಳೆಗೆ. ಬೆಳೆಗಳು ಹೆಚ್ಚು ಎತ್ತರಕ್ಕೆ ಬೆಳೆದು ನಿಂತಾಗ, ಕೂಲಿಯಾಳುಗಳಿಂದ ಅಥವಾ ಟ್ರ್ಯಾಕ್ಟರ್ ಚಾಲಿತ ಯಂತ್ರಗಳಿಂದ ಸಿಂಪಡಣಾ ಕಾರ್ಯ ಕೈಗೊಳ್ಳುವುದು ಕಷ್ಟವಾಗುತ್ತದೆ.

ಅಪಾಯಕಾರಿ ರಾಸಾಯನಿಕಗಳು:

ರೈತರು ಬೆಳೆದ ಬೆಳೆಗಳಿಗೆ ಕೂಲಿಯಾಳುಗಳು ರಾಸಾಯನಿಕ ಸಿಂಪಡಣೆ ಮಾಡುವಾಗ ಅಪಾಯಕಾರಿ ರಾಸಾಯನಿಕಗಳು ದೇಹ ಸೇರುವ ಸಂಭವವಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕಗಳ ಸಂಪರ್ಕದಿಂದ ರೈತರು ಹಾಗೂ ಕೂಲಿಯಾಳುಗಳು ಸುಮಾರು 46 ಬಗೆಯ ವಿನಾಶಕಾರಿ ರೋಗಗಳಿಗೆ ತುತ್ತಾಗುತ್ತಾರೆ.

ರೈತರು ಬೆಳೆಗಳಿಗೆ ರಸಾಯನಿಕಗಳ್ಳನ್ನು ಸಿಂಪಡಣೆ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಲು ಹಾಗೂ ಸಿಂಪಡಣಾ ಕಾರ್ಯದ ದಕ್ಷತೆಯನ್ನು ಹೆಚ್ಚಿಸಲು ಡ್ರೋ ತಂತ್ರಜ್ಞಾನವು ರೈತರ ಪಾಲಿಗೆ ವರವಾಗಿ ಬಂದಿದೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಡೋನ್ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ರಸಾಯನಿಕಗಳ ಸಿಂಪರಣೆಗೆ ಹೆಚ್ಚಾಗಿ ಈ ಯಂತ್ರಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಆಕಾಶದಲ್ಲಿ ಹಾರುತ್ತಾ ಕಾರ್ಯನಿರ್ವಹಿಸುವ ಡೋನ್ ಗಳನ್ನು ನುರಿತ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮೋದಿತ ರಿಮೋಟ ಪೈಲಟ್ ಪರವಾನಗಿ ಪಡೆದ ಚಾಲಕರು ನಿಯಂತ್ರಿಸುವರು” ಎಂದು ಕೆವಿಕೆ ವಿಜ್ಞಾನಿಗಳು ಹೇಳುವರು.

ಹದಿನೈದು ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಣೆ:

ಡ್ರೋನ್ ಸಿಂಪಡಣಾ ಯಂತ್ರವು ಕೇವಲ 15 ನಿಮಿಷಗಳಲ್ಲಿ 1 ಎಕರೆಯಷ್ಟು ಜಮೀನಿನಲ್ಲಿ ಸಿಂಪಡಣೆ ಕೈಗೊಳ್ಳುತ್ತದೆ. ಮಾನವ ಚಾಲಿತ ಯಂತ್ರಗಳಿಗೆ ಹೋಲಿಸಿದಾಗ ಶೇ.80ಕ್ಕೂ ಹೆಚ್ಚು ಸಮಯ ಉಳಿತಾಯವಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಸುಮಾರು ಶೇ.20 ರಿಂದ 50ರಷ್ಟು ರಸಾಯನಿಕಗಳ ಉಳಿತಾಯವೂ ಆಗುತ್ತದೆ.

ಇದನ್ನೂ ಓದಿದ್ದೀರಾ? ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆ ಹಾನಿ: ಒಣದ್ರಾಕ್ಷಿ ರಫ್ತು ಸ್ಥಗಿತ, ಸಾಲದ ಶೂಲಕ್ಕೆ ರೈತ

ಈ ದಿನ.ಕಾಮ್ ಜತೆಗೆ ಹುಲಕೋಟಿಯ ಕೆ ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, “ದೇಶದಲ್ಲಿ ಕೃಷಿ ಯಾಂತ್ರೀಕರಣವು ಒಳ್ಳೆಯ ಪ್ರಗತಿ ಸಾಧಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಅದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ದಿನಗಳಲ್ಲಿ ಸಿಂಪಡಣಾ ಕಾರ್ಯಕ್ಕೆ ಡ್ರೋನ್ ಯಂತ್ರದ ಬಳಕೆಯು ಮನೆಮಾತಾಗಲಿದೆ. ಈ ನಿಟ್ಟಿನಲ್ಲಿ ಸಮರ್ಪಕ, ಸಂಶೋಧನೆಗಳನ್ನು ಕೈಗೊಂಡು ಈ ಹೊಸ ತಂತಜ್ಞಾನವನ್ನು ರೈತರ ಕೈಗೆಟುಕುವಂತಾಗಬೇಕು” ಎಂದು ಹೇಳಿದರು.

ಬೆಳಧಡಿ ಗ್ರಾಮದ ಪ್ರಗತಿಪರ ರೈತ ನೂರಪ್ಪ ಪೂಜಾರ ಮಾತನಾಡಿ, “ಮುಂದಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಇನ್ನೂ ಉಲ್ಬಣವಾಗಲಿದ್ದು, ಈ ಹೊಸ ತಂತ್ರಜ್ಞಾನವು ರೈತರ ಕೈಗೆಟುಕಲು ಹೋಬಳಿ ಮಟ್ಟಗಳಲ್ಲಿ ಡ್ರೋನ್‌ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಬೇಕು. ಇದರಿಂದ ರೈತರು ಹೆಚ್ಚು ಮಳೆಯಾದ ಸಂದರ್ಭಗಳಲ್ಲಿ ಅಥವಾ ಕೂಲಿಯಾಳುಗಳ ಅಭಾವದಲ್ಲಿ ಡ್ರೋನ್ ಮೂಲಕ ಸಿಂಪಡಣೆ ಮಾಡಿಸಲು ಅನುಕೂಲವಾಗುತ್ತದೆ” ಎಂದು ಹೇಳಿದರು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...