“ನರಗುಂದ ಪಟ್ಟಣದ ತಾಲೂಕ ಆಸ್ಪತ್ರೆಯ ತುರ್ತುವಾಹನ 108 ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಹೃದಯಯಘಾತಗೊಂಡು ವ್ಯಕ್ತಿ ಸಾವನ್ನಪ್ಪಿದ್ದಾನೆ. ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಘಟನೆಗಳು ನರಗುಂದ ತಾಲ್ಲೂಕು ಆಸ್ಪತ್ರೆ ಎದುರು ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು.
ನರಗುಂದ ಪಟ್ಟಣದ ವಿವೇಕಾನಂದ ಬಡಾವಣೆಯ ವ್ಯಕ್ತಿಯೊಬ್ಬರು ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ತಾಲ್ಲೂಕು ಆಸ್ಪತ್ರೆಯ ತುರ್ತು ವಾಹನ 108 ಕರೆ ಮಾಡಿದಾಗ ಬೇರೆ ಕಡೆಗೆ ಪೇಷಂಟ್ ಕರೆದುಕೊಂಡು ಹೋಗಿದೆ” ಎಂದು ಸಿಬ್ಬಂದಿ ಹೇಳಿದ್ದಾರೆ.
ಆದರೆ ತುರ್ತು ವಾಹನವೂ ನರಗುಂದ ತಾಲೂಕ ಆಸ್ಪತ್ರೆ ಆವರಣದಲ್ಲಿ ಇದ್ದರೂ ಸುಳ್ಳು ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಬರದೇ ವೆಂಕಪ್ಪ ಲಕ್ಷ್ಮಪ್ಪ ಕಲಕೇರಿ ಎಂಬವರು ಮೃತಪಟ್ಟಿದ್ದಾರೆ.
“ಸರಿಯಾದ ಸಮಯಕ್ಕೆ ತುರ್ತು ವಾಹನ ಕಲ್ಪಿಸದ ಸಿಬ್ಬಂದಿಗಳಿಗೆ ಕಾನೂನು ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತುಗೊಳಿಸಬೇಕು. ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಒದಗಿಸಬೇಕು” ಎಂದು ಮೃತ ವ್ಯಕ್ತಿಯ ಸಂಬಂಧಿಕರು ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನರಗುಂದ ಸಂಚಾಲಕರು ದತ್ತಾತ್ರೇಯ ಜೋಗನ್ನವರ್ ಹೋರಾಟಗಾರರು ನರಗುಂದ ತಾಲೂಕ ಆಸ್ಪತ್ರೆಯ ಅವ್ಯವಸ್ಥೆಯ ಮತ್ತು, ರೋಗಿಗಳಿಗೆ ಸಿಗಬೇಕಾದ ಔಷಧಿ ಉಪಚಾರದ ಬಗ್ಗೆ, ಸಿಬ್ಬಂದಿ ನಿರ್ಲಕ್ಷದ ಬಗ್ಗೆ, ಸ್ವಚ್ಛತೆ ಬಗ್ಗೆ ಆಕ್ರೋಶ” ಹೊರ ಹಾಕಿದರು.
ಬರುವ ದಿನಮಾನಗಳಲ್ಲಿ ರೋಗಿಗಳಿಗೆ ಸರಿಯಾದ ಆರೋಗ್ಯ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ” ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಮುಖಂಡರು ಸುರಕೋಡ್, ರವಿ ಚಿಂತಾಲ, ಶರಣಪ್ಪ ಛಲವಾದಿ, ವೀರೇಶ್ ಶಿರಹಟ್ಟಿ, ಕಾಜೆಸಾಬ್ ಕಿಲ್ಲೆದಾರ್, ಕಿರಣ್ ವಡಿಗೇರಿ, ಮೈಲಾರಪ್ಪ ಹಿರೇಮನಿ, ಹನುಮಂತ್ ಶಿರಹಟ್ಟಿ ಇನ್ನು ಮುಂತಾದವರು ಉಪಸ್ಥಿತರಿದ್ದರು
ವರದಿ: ಗುರುನಾಥ ಕೆಂಗಾರಕರ ಸಿಟಿಜನ್ ಜರ್ನಲಿಸ್ಟ್ ನರಗುಂದ





