“ಜಿಲ್ಲಾದ್ಯಂತ ರೈತರು ಸಾಲಮಾಡಿ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಖರ್ಚು ಮಾಡಿದ್ದು, ಉತ್ತಮವಾಗಿ ಬೆಳೆಗಳು ಬೆಳೆದಿದ್ದವು. ನಿರಂತರ ಮಳೆಗೆ ಸಂಪೂರ್ಣ ಬೆಳೆ ಹಾನಿ ಆಗಿದೆ. ರೈತರು ಅಪಾರ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು ಬದುಕು ಸಂಕಷ್ಟದಲ್ಲಿದ್ದು ಶೀಘ್ರವಾಗಿ ರೈತರಿಗೆ ಬೆಳೆ ಪರಿಹಾರ ನೀಡಬೇಕು” ಎಂದು ರೈತ ಮುಖಂಡರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಮುತ್ತನಗೌಡ ಭ. ಚೌಡರಡ್ಡಿ ನೇತೃತ್ವದಲ್ಲಿ ನಿರಂತರ ಮಳೆಯಿಂದ ರೈತರಿಗೆ ನಷ್ಟ ಆಗಿದ್ದು, ಪರಿಹಾರ ನೀಡುವಂತೆ ಗದಗ ಪಟ್ಟಣದಲ್ಲಿ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ರೈತ ಸಂಘದ ಅಧ್ಯಕ್ಷರು ಮುಟ್ಟಗೌಡ ಚೌಡರೆಡ್ಡಿ ಮಾತನಾಡಿ, ರೈತರು ಈ ನಾಡಿನ ಬೆನ್ನೆಲುಬು, ಆದರೆ ಆ ಬೆನ್ನೆಲುಬಿಗೆ ಆಸರೆ ಇಲ್ಲದಂತಾಗಿದೆ. ಕಷ್ಟಪಟ್ಟು, ಸಾಲ ಮಾಡಿ ರೈತ ಬೆಳೆದ ಬೆಳೆ ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿ ಆಗಿದೆ. ಕೂಡಲೇ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡಬೇಕು” ಎಂದು ಒತ್ತಾಯಿದರು.
ರೈತ ಮುಖಂಡರು ಮೇಘರಾಜ್ ಬಾವಿ ಮಾತನಾಡಿ, “ಈ ಸರಿ ಮುಂಗಾರು ಮಳೆಯಿಂದ ರೈತರಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಆಗಿದೆ. ನಿರಂತರ ಮಳೆಗೆ ಹೆಸರು ಬೂದು ರೋಗ ಬಂದಿದೆ, ಕಪ್ಪಾಗಿವೆ. ಇವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಎರಡು ಸಾವಿರ, ಮೂರು ಸಾವಿರ ಕೇಳ್ತಿದ್ದಾರೆ. ರೈತ ಒಂದು ಎಕರೆಗೆ ಖರ್ಚು ಮಾಡಿದಷ್ಟು ಬೆಳೆದ ಬೆಳೆಯಿಂದ ಬರುವುದಿಲ್ಲ ಎಂದರೆ ರೈತ ಹೇಗೆ ತನ್ನ ಕುಟುಂಬವನ್ನು ಸಾಗಿಸಬೇಕು. ಹಾಗಾಗಿ ಸರಕಾರ ಕೂಡಲೇ ಎಕರೆಗೆ ನಲವತ್ತು ಸಾವಿರ ರೂಪಾಯಿ ಬೆಳೆ ನಷ್ಟ ಪರಿಹಾರ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಮನವಿ ಸಂದರ್ಭದಲ್ಲಿ ರೈತ ಮುಖಂಡರು ಸಂಗಣ್ಣ ದಂಡಿನ, ಅಶೋಕ ಹಿರೇಮಠ, ಎಸ್. ಎಮ್. ಪರಡ್ಡಿ, ಸಂಗಣ್ಣ ಪವಾಡಶೆಟ್ಟಿ, ಧರ್ಮಣ್ಣ ಬೂಸಗೌಡರ, ಬಸವರಾಜ ಹೊಸಮನಿ, ಚಂದ್ರಶೇಖರಯ್ಯ ವಸ್ತçದ, ಸಂಪತಕುಮಾರ ಅಮರನಾಥ, ಮಹೇಶ ಹಿರೇಮಠ, ಎಂ. ಎಸ್. ಹಡಪದ ಇನ್ನೂ ಅನೇಕರು ಉಪಸ್ಥಿತರಿದ್ದರು.





