“ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಯೋಜನೆಗಳು ಬಡವರ ಪಾಲಿನ ಸಂಜೀವಿನಿ, ಬಡ ಜನರ ಆಶಾಕಿರಣ ಬಡವರ ಪಾಲಿಗೆ ಪಂಚಾಮೃತವಾಗಿದೆ ಎಂದು ಗದಗ ತಾಲೂಕ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸದಸ್ಯರು ಪ್ರೋ. ಸಂಗಮೇಶ ಹಾದಿಮನಿ ಹೇಳಿದ್ದಾರೆ.
ಗದಗ ಪಟ್ಟಣದಲ್ಲಿ ಪತ್ರಿಕಾ ಪ್ರಕಟನೆಗೆ ತಿಳಿಸಿರುವ ಅವರು, “ಬಡ ಕುಟುಂಬ ಮನೆಗಳಿಗೆ ಬೇಟಿ ನೀಡಿದಾಗ ಕುಟುಂಬದ ಯಜಮಾನರು ಹೇಳಿದ ಮಾತು ನುಡಿದಂತೆ ನಡೆದ ಸರಕಾರ ಇದಾಗಿದೆ” ಎಂದಿದ್ದಾರೆ.
“ಗೃಹಲಕ್ಮೀ ಯೋಜನೆ, ಯುವನಿಧಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆಗಳ ಮೂಲಕ ಜನರ ವಿಶ್ವಾಸಗಳಿಸುವುದರ ಜೊತೆಗೆ ನಾವು ನಿಮ್ಮ ಕಷ್ಟ ನೋವಿನಲ್ಲೂ ಇದ್ದೆವೆ ಎಂಬ ಭರವಸೆಯೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆತ್ಮವಿಶ್ವಾಸದಿಂದ ಬದುಕಲು ಸಹಕಾರಿ ಆಗಿದೆ.
ಫಲಾನುಭವಿಗಳ ಮುಖದಲ್ಲಿನ ಮಂದಹಾಸ ನಗು ಆತ್ಮತೃಪ್ತಿ ನೀಡುತ್ತದೆ” ಎಂದು ಪ್ರೊ. ಸಂಗಮೇಶ ಹಾದಿಮನಿ ಸಂತಸ ವ್ಯಕ್ತಪಡಿಸಿದ್ದಾರೆ.





