ಗದಗ | ಧಾರ್ಮಿಕ ಸಾಮರಸ್ಯದ ಬದುಕಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಪ್ರೊ ಎಸ್. ಯು. ಸಜ್ಜನಶೆಟ್ಟರ್

Date:

“ಧಾರ್ಮಿಕ ಸಾಮರಸ್ಯ ಬದುಕಿಗೆ ಗದಗ ಜಿಲ್ಲೆಯ ಕೊಡೆಗೆ ಅಪಾರ. ಶರಣ ಸಾಹಿತ್ಯ ಚಳುವಳಿಯು ಪ್ರಾಚೀನ ಕಾಲದಿಂದಲೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ” ಎಂದು ಪ್ರೊ. ಎಸ್. ಯು. ಸಜ್ಜನಶೆಟ್ಟರ್ ಹೇಳಿದರು.

ಗದಗ ಪಟ್ಟಣದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಡಾ. ಎಂ ಎಂ ಕಲಬುರ್ಗಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯದ ಕುರಿತು ಏಳು ಸರಣಿ ಉಪನ್ಯಾಸವನ್ನು ಆಯೋಜಿಸಲಾಗಿದ್ದು, ಗದಗ ಜಿಲ್ಲೆಯ ಶರಣರ ಸಾಹಿತ್ಯದಲ್ಲಿ ಧಾರ್ಮಿಕ ಸಾಮರಸ್ಯದ ಕೊಡುಗೆಗಳು ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

“ಗದಗನಲ್ಲಿ ಪ್ರಮುಖ ನಾಲ್ಕು ವಚನಕಾರರು ಬರುತ್ತಾರೆ. ರಜಗನ್ನ, ಮುಕ್ತಾಯಕ್ಕ ಜಿಲ್ಲೆಯ ಲಕ್ಕಂಡಿ ಗ್ರಾಮದವರು. ಲಕ್ಷ್ಮೇಶ್ವರದ ಆದಯ್ಯ ಮತ್ತು ಅರವಣಿಗೆ ಅಣ್ಣಯ್ಯ. ಅಜಗಣ್ಣ ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ. ಮುಕ್ತಾಯಕ್ಕನ ಅಣ್ಣ ಅಜಗಣ್ಣ ಆಗಿದ್ದನು. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೂಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದ್ಯರ ಅರವತ್ತು ವಚನಕ್ಕೆ

ದಣ್ಣಾಯಕರ ಇಪ್ಪತ್ತು ವಚನ

ದಣ್ಣಾಯಕರ ಇಪ್ಪತ್ತು ವಚನಕ್ಕೆ

ಪ್ರಭುದೇವರ ಹತ್ತು ವಚನ

ಪ್ರಭುದೇವರ ಹತ್ತು ವಚನಕ್ಕೆ

ಅಜಗಣ್ಣನ ಐದು ವಚನ

ಅಜಗಣ್ಣನ ಐದು ವಚನಕ್ಕೆ

ಕೂಡಲ ಚೆನ್ನಸಂಗಯ್ಯನಲ್ಲಿ

ಮಹಾದೇವಿಯಕ್ಕಗಳ ಒಂಸು ವಚನ

ನಿರ್ವಚನ ಕಾಣಾ ಸಿದ್ದರಾಮಯ್ಯಾ 

ಈ ವಚನದ ಮೂಲಕ ನಮ್ಮ ಪರಿಸರದಲ್ಲಿ ಬದುಕಿದ ಅಜಗನ್ನ ಮುಕ್ತಾಯಕರು ಶರಣ ಸಾಹಿತ್ಯ ಪರಂಪರೆಯಲ್ಲಿ ಎಷ್ಟು ಮಹತ್ವದ ಸ್ಥಾನವನ್ನು ಪಡೆದಿದ್ದರೂ ಎಂಬುದು ತಿಳಿದು ಬರುತ್ತದೆ” ಎಂದರು.

“ಗದಗ ಜಿಲ್ಲೆ ಶರಣ ಸಾಹಿತ್ಯ ಚಳುವಳಿಯ ಪ್ರಮುಖ ಕೇಂದ್ರವಾಗಿ, ಧಾರ್ಮಿಕ ಸಾಮರಸ್ಯದಿಂದ ಬದುಕವ ಪ್ರದೇಶವಾಗಿ ಪ್ರಾಚೀನ ಕಾಲದಿಂದಲೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ” ಎಂದು ವಿದ್ಯಾರ್ಥಿಗಳನ್ನು ಉಪದೇಶಿಸಿ ಉಪನ್ಯಾಸ ನೀಡಿದರು. 

“ಸಾಹಿತ್ಯ ಚರಿತ್ರೆಯಲ್ಲಿ ಬರುವ ಅತಿ ಹೆಚ್ಚು ಕವಿಗಳ ಬದುಕಿದ ಪರಿಸರ ನಮ್ಮದಾಗಿದೆ. ಪಂಪನಿಂದ ಹಿಡಿದು ಕುಮಾರ ವ್ಯಾಸರ ಆದಿಯಾಗಿ ಮೊದಲಾದ ಶ್ರೇಷ್ಠ ಕವಿಗಳೆಲ್ಲರೂ ಬದುಕಿದ್ದು ಇದೇ ನೆಲದಲ್ಲಿ. ಸಾಹಿತ್ಯದ ಹಾಗೂ ಮೌಲಿಕ ಬದುಕಿನ ಜೊತೆಗೆ ಸಾಂಸ್ಕೃತಿಕ ಅಂಶಗಳು ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇಂತಹ ಶರಣ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಪರಿಸರ ಇಂದಿನ ಯುವ ಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು” ಎಂದು ಕಿವಿಮಾತು ಹೇಳಿದರು.

ಉಪನ್ಯಾಸದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು ಪ್ರೊ. ಜಿ ವಿಶ್ವನಾಥ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ ನಾಗರಾಜ ವೀ ಬಳಿಗೇರ ವಂದನಾರ್ಪಣೆ ನೆರವೇರಿಸಿ ಕೊಟ್ಟರು. ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...