ಗದಗ | ಪತ್ರಿಕಾರಂಗವನ್ನು ಇಂದು ವ್ಯಾಪಾರವನ್ನಾಗಿ ಮಾಡಿಕೊಳ್ಳಲಾಗಿದೆ: ಸಿದ್ಧನಗೌಡ ಪಾಟೀಲ್

Date:

“ಪತ್ರಿಕಾರಂಗವನ್ನು ಬೆಳೆಸಿದವರೂ ಇದ್ದಾರೆ. ಪತ್ರಿಕಾ ರಂಗವನ್ನು ಬಳಕೆ ಮಾಡಿಕೊಂಡು ಬೆಳೆದವರು ನಮ್ಮ ಮುಂದೆ ಇದ್ದಾರೆ‌. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಪತ್ರಿಕಾರಂಗವನ್ನು ಕೆಲವರು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಿಸಿದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ʼಅಕ್ಷರ ಸಂಗಾತʼ ಸಾಹಿತ್ಯ ಮಾಸಿಕ ಪತ್ರಿಕೆ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯನ್ನು ಮುನ್ನಡೆಸುತ್ತಾ ಬಂದಿರುವಂತ ಟಿ.ಎಸ್. ಗೊರವರ ಅವರನ್ನು ಅಭಿನಂದಿಸಿದರು.

“ಆಲೋಚನೆಗಳನ್ನ, ಚಿಂತನೆಗಳನ್ನ, ಸಾಮಾಜಿಕ ಚಿಂತನೆಗಳನ್ನು ರಾಜಕೀಯ, ಶೈಕ್ಷಣಿಕ ಬೆಳವಣಿಗೆಗಳ ವಿಚಾರಗಳನ್ನು ಎಲ್ಲ ಕ್ಷೇತ್ರಗಳ ವಿಚಾರಗಳನ್ನು ಜನರಿಗೆ ತಿಳಿಸುವುದೇ ಮಾಧ್ಯಮವಾಗಿರುತ್ತದೆ. ಈ ಎಲ್ಲ ಆಗುಹೋಗುಗಳನ್ನು ಗಮನದಲ್ಲಿ‌ ಇಟ್ಟುಕೊಂಡು ಹೊಸತು ಪತ್ರಿಕೆ ತರಲಾಯಿತು. ಸಾಹಿತ್ಯದ ಮೂಲಕ ಮನುಷ್ಯನ ಪ್ರಜ್ಞೆಯನ್ನು ಪ್ರವೇಶಿಸುವುದೇ ಸಾಹಿತ್ಯ ಪ್ರತಿಕೆಯಾಗಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಷ್ಟ್ರ, ರಾಜ್ಯದ, ವಿಶ್ವದ ಹಲವಾರು ಬೆಳವಣಿಗಳ ಅರ್ಥ ಮಾಡಿಕೊಳ್ಳಬೇಕಾದರೆ, ಯಾವುದೇ ಒಂದು ತೀರ್ಮಾನ ತೆಗೆದುಕೊಂಡರೆ ಅದು ಜನರಿಗೆ ಎಷ್ಟು ಪೂರಕವಾಗಿದೆ ಅಥವಾ ವಿರೋಧವಾಗಿದೆ ಎಂಬುದನ್ನು ಅರ್ಥಮಾಡಿಸಿಕೊಳ್ಳಲು ಈ ರೀತಿಯ ಪತ್ರಿಕೆಗಳು ಪರಿಣಾಮಕಾರಿ ಎಂದು ತಿಳಿಸಿದರು.

ಟಿವಿ ಮಾಧ್ಯಮಗಳು, ರೈತರ, ಬಡವರ, ಪರವಾಗಿ ಇವುಗಳಲ್ಲಿ ಯಾವುದೇ ಕಾಳಜಿಯಿಲ್ಲ. ಇವತ್ತು ಅತ್ಯಾಚಾರಗಳು ಆಗುತ್ತಿವೆ. ಬರಗಾಲ ಬೀಳ್ತಿದೆ, ಮಳೆ ಕಡಿಮೆ ಆಗ್ತಿದೆ. ಇಂತ ಸಂದರ್ಭದಲ್ಲಿ ಇಂತವುಗಳ ಕುರಿತು ಮಾತನಾಡದೇ ಅಯೋಧ್ಯೆಯಲ್ಲಿ ಏನಾಯಿತು, ರಾಮ ಮಂದಿರ ಬೇಕಾ? ಬೇಡ್ವಾ? ರಾಮ ಮಂದಿರ ಕಟ್ಟುವಾಗ ನಾವೇನ್ ಮಾಡ್ಬೇಕು, ನಿಮಗೆ ಅಕ್ಕಿಕಾಳು ಬಂದ್ವಾ, ಇದನ್ನೇ ಹೇಳ್ತಾ ಇದ್ದಾವೆ” ಎಂದು ವಿಷಾದಿಸಿದರು.

ಪಲ್ಲವ ವೆಂಕಟೇಶ ಮಾತನಾಡಿ, ಜೀವಪರ ಸಂಗತಿಗಳನ್ನು ಪಸರಿಸುವ ಒಂದು ಜಗತ್ತಿದೆ. ಸೃಜನಶೀಲತೆಯನ್ನು ನಾಶಗೊಳಿಸುವ ಒಂದು ಗುಂಪಿದೆ. ನಾವು ಯಾವ ಗುಂಪಿಗೆ ಇರಬೇಕೆಂದರೆ ಜೀವಪರ ಸಂಗತಿಗಳನ್ನು ಪಸರಿಸುವವರೊಂದಿಗೆ ಇರಬೇಕು ಎಂದು ಸಲಹೆ ನೀಡಿದರು.

ಐ.ಜೆ. ಮ್ಯಾಗೇರಿ, ಅನಸೂಯಾ ಕಾಂಬಳೆ ಅಕ್ಷರ ಸಂಗಾತ ಪಯಣ ಪ್ರತಿಕ್ರಿಯೆ ಕಾಲಕಾಲೇಶ್ವರ ಹಾದಿಮನಿ ಶಿವನಗೌಡ, ಮೆನಸಗಿ, ಮಹಾಂತೇಶ ಹಿರೇಕುರುಬರ್, ಮೌನೇಶ್ ನವಲಹಳ್ಳಿ, ಬಿ.ಎ. ಕೆಂಚರೆಡ್ಡಿ ಮಾತನಾಡಿದರು.

ವಿಶೇಷಾಂಕದ ಕವಿತೆಗಳನ್ನು ವಿಲ್ಸನ್ ಕಟೀಲ್, ಕಿರೆಸೂರು ಗಿರಿಯಪ್ಪ, ಕಳಕೇಶ ಗೂಡ್ಲಾನೂರು, ದಮ್ಮೂರು ಮಲ್ಲಿಕಾರ್ಜುನ ಹಾಗೂ ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...