ಗದಗ | ಮರ್ಯಾದೆ ಹತ್ಯೆ ಪ್ರಕರಣ; ಮಾನ್ಯ ಪಾಟೀಲ್ ಹೆಸರಿನಲ್ಲಿ ಕಾಯ್ದೆ ಜಾರಿಯಾಗಲಿ: ಪ್ರಗತಿಪರ ಸಂಘಟನೆಗಳು ಒತ್ತಾಯ

Date:

ಮರ್ಯಾದೆ ಹತ್ಯೆ ಕಾನೂನನ್ನು ಇನಾಂ ವೀರಾಪುರ ಗ್ರಾಮದಲ್ಲಿ ಹತ್ಯೆಗೀಡಾದ ಮಾನ್ಯ ಪಾಟೀಲ್ ಹೆಸರಲ್ಲಿ ಕಾಯ್ದೆಯಾಗಿ ಜಾರಿಯಾಗಲಿ” ಎಂದು ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದವು.

ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಇಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮಾನ್ಯ ಪಾಟೀಲ್ ಮರ್ಯಾದಾ ಹತ್ಯ ಖಂಡಿಸಿ, ಹತ್ಯೆಯ ಹೊಣೆಗಾರಿಕೆ ಹೊತ್ತು “ಪ್ರಾಯಶ್ಚಿತ್ತ ದಿನ” ಸತ್ಯಾಗ್ರಹ‌ ಹಮ್ಮಿಕೊಳ್ಳಲಾಯಿತು. 

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತಿಚೆಗೆ ಮಾನ್ಯ ಪಾಟೀಲ್ ಮರ್ಯಾದಗೇಡು ಹತ್ಯ ಖಂಡಿಸಿ ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ, ಬಸವ ಕೇಂದ್ರ ವಿವಿಧ ದಲಿತ-ಪ್ರತಗತಿಪರ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002716784

ಸಾಮಾಜಿಕ ಹೋರಾಟಗಾರ ಹಾಗೂ ಸಾಹಿತಿ ಬಸವರಾಜ್ ಸೂಳೆಬಾವಿ ಅವರು ಪ್ರಸ್ತಾವಿಕ ಮಾತನಾಡಿ, “ಈ ಪ್ರಾಯಶ್ಚಿತ್ತವನ್ನ ಆಕ್ರೋಶಿತರಾಗಿ ಪ್ರತಿಭಟಿಸುತ್ತಿಲ್ಲ. ಇಲ್ಲಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳಲು ಮಾಡುತ್ತಿರುವ ದಿನ. 12ನೇ ಶತಮಾನದಲ್ಲಿ ಬಸವಣ್ಣವರು ಹೇಳಿದಂತೆ ಲಿಂಗಾಯತರು ನಡೆದುಕೊಳ್ಳುತ್ತಿಲ್ಲ. ಲಿಂಗಾಯತವನ್ನ ಲಿಂಗಾಯತರು ಜಾತಿಯ ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿಸಿದ್ದೇವೆ. ದೇಶದ ಜಾತಿ ವ್ಯವಸ್ಥೆ ಮನುಷ್ಯರನ್ನು ಭಿನ್ನವಾಗಿ ನೋಡುವಂತ ವ್ಯವಸ್ಥೆಯಲ್ಲಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

1002716859

ಗದಗಿನ ಸಿದ್ದರಾಮ ಸ್ವಾಮಿಗಳು ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಅನ್ಯ ಭಿನ್ನ ಸಂಸ್ಕೃತಿಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಆದರೆ, ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂದು‌ ಸಾರುವ ಈ ಕಾಲದಲ್ಲಿ ಜಾತಿ ಶ್ರೇಷ್ಠತೆಯ ವ್ಯಸನದಲ್ಲಿ ಮಗಳನ್ನೇ ಮರ್ಯಾದೆ ಹತ್ಯ ಮಾಡುವಂತ ರಾಕ್ಷಸ ಮನಸ್ಥಿತಿಯನ್ನ ಕಂಡಾಗ ಬೇಸರವಾಗುತ್ತದೆ” ಎಂದರು.

1002716857

ಧಾರವಾಡದ ಪ್ರೊ.ಶಶಿಧರ ತೋಡಕರ ಮಾತನಾಡಿ, “ಮಾನ್ಯ ಪಾಟೀಲ್ ನನ್ನ ವಿದ್ಯಾರ್ಥಿನಿ ನಮ್ಮ ಹಿರಿಯ ಪ್ರೊಫೆಸರ್ ಸದಾನಂದಗೌಡ ಪಾಟೀಲ್ ಅವರ ಮೊಮ್ಮಗಳು. ಮಾನ್ಯ ನಮ್ಮ ಕಣ್ಣೇದುರೆ ಬೆಳೆದಿರುವ ಮಗಳು. ಈ ಘಟನೆ ನಡೆಯುವ ಪೂರ್ವದಲ್ಲಿ ಹಲವು ಬಾರಿ ನಾವು ಮಾನ್ಯಳ ತಂದೆಗೆ ತಿಳಿಸಿ ಹೇಳುವ ಕೆಲಸ ಮಾಡಿದೆವು. ಆ ವ್ಯಕ್ತಿಯಲ್ಲಿ ಇದ್ದಂತ ಜಾತಿ ಹಾಗೂ ಸ್ವಃ ಶ್ರೇಷ್ಠತೆಯ ವ್ಯಸನ ಅಂತ ಕ್ರೌರ್ಯ ಮಾಡಲು ಪ್ರೇರೇಪಿಸಿತು. ಇದು ರಾಕ್ಷಸ ಮನಸ್ಥಿತಿ” ಎಂದು ಮಾನ್ಯಳ ಜೊತೆಗಿನ ಬಾಂಧವ್ಯ ಹಾಗೂ ಘಟನೆಯ ಕುರಿತು ಖೇದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಹರ್ಲಾಪುರ, ಶಿವನಗೌಡ ಗೌಡ, ಎಸ್.ಎ ಮುಜಿದ, ಎಚ್.ಡಿ.ಡಬರಿ, ಬಿ.ಆರ್.ದಿವದಾರ, ಎಲ್‌.ಎಮ್.ಹೊಸಳ್ಳಿ, ಮಹಾಂತೇಶ ಮದ್ನೂರ, ಪಾಂಡಪ್ಪ ಲಮಾಣಿ, ಮಾರುತಿ. ಕೆ.ಅಂಗಡಿ, ಕರಿಯಪ್ಪ ಸಂಶಿ, ಚನ್ನಬಸಪ್ಪ ಅಂಗಡಿ, ಎಮ್.ಬಿ.ಲಿಂಗದಾಳ, ಶರೀಫ್ ಬಿಳೆಯೆಲಿ, ಮುತ್ತು ಬೆಳೆಯೆಲಿ, ಆನಂದ ಸಿಂಗಾಡಿ, ಅನೀಲ್ ಕಾಳೆ ಪರಸುರಾಮ ಕಾಳೆ, ರಮೇಶ ಕೋಳೂರು, ಯಲ್ಲಪ್ಪ ರಾಮಗೇರಿ, ಅಶೋಕ ಬರಗುಂಡಿ, ಶೇಖಣ್ಣ ಕವಳಿಕಾಯಿ, ಶ್ರೀದೇವಿ ಶೆಟ್ಡರ, ಗವರಕ್ಕ ಬಡಿಗಣ್ಣವರ, ಪದ್ಮಾ ಹಂಜಿಗಿ, ಗಿರಿಜಾ ಹಸಬಿ, ಸಹನಾ ಹಾತಲಗಿ, ಸುಜಾತ ವಾರದ, ಅಕ್ಕಮಹಾದೇವಿ ಚೆಟ್ಟಿ, ಶಿವಲೀಲಾ ಅಕ್ಕಿ, ಅನ್ನಪೂರ್ಣ ಬರಗುಂಡಿ, ಸರೋಜಾ ಮುಗುದ ತಡಸದ, ರೇಣುಕಾ ಕರಿಗೌಡರ, ಜಯಶ್ರೀ ಹುಬ್ಬಳ್ಳಿ, ಸುವರ್ಣ ಹೊಸಂಗಡಿ ಸರೋಜ ಲಿಂಗದಾಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...