ಬಡವರ ಹೊಟ್ಟೆ ತುಂಬಿಸಲು ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅಕ್ಕಿ ದಂಧೆಕೋರರು ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅನ್ನಭಾಗ್ಯ ಯೋಜನೇಯ ಅಕ್ಕಿ ಕಾಳು ದಂದೆಕೊರರ ಪಾಲಾಗುತ್ತಿದೆ. ನಗರದಲ್ಲಿ ಬೆಳಗ್ಗೆ ಸರಿಸುಮಾರು 9 ಗಂಟಗೆ ಬಡಾವಣೆಗಳಲ್ಲಿ ಮನೆಮನೆಗೆ ತೇರಳಿ ಬಡವರು, ಕಡು ಬಡವರಿಗೆಂದು ಗುರುತಿಸಿ ಸರಕಾರದಿಂದ ನೀಡಲಾಗುತ್ತಿರುವ ಅನ್ನ ಭಾಗ್ಯ ಯೋಜನೆಯ ಅಕ್ಕಿ ಯನ್ನು ಖರೀದಿಸುತ್ತಿದ್ದಾರೆ.
ಈ ಕಾಳು ದಂಧೆಕೋರರ ಸುಳಿವನ್ನು ಸಾರ್ವಜನಿಕರು ಸ್ಥಳಿಯ ನಾಗರೀಕ ಆಹಾರ ಸರಬರಾಜು ಇಲಾಖೆ ಅಧಿಕಾರಿ ಅನಿಲ್ ಪವಾರ ಹಾಗೂ ಗಣಕಯಂತ್ರ ನಿರ್ವಾಹಕ ಸಿಬ್ಬಂದಿ ರಫ್ಹೀಕ್ ನದಾಫ್ ಮತ್ತು ನರಗುಂದ ಪೊಲೀಸ್ ಠಾಣೆಯ ಪಿಎಸ್ಐ ಮಣ್ಣೂರ್ ಅವರಿಗೆ ಸಾರ್ವಜನಿಕರು ತಿಳಿಸಿದ್ದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಸರ್ಕಾರದಿಂದ ನೀಡುತ್ತಿರುವ ಪಡಿತರ ಹಕ್ಕಿಯನ್ನು ಮೂಟೆಗಟ್ಟಲೆ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿದ್ದು ಕಂಡು ಬಂದಿದೆ. ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಚೀಲಗಳನ್ನು ವಶಪಡಿಸೋಕೊಂಡಿದ್ದಾರೆ.
“ಅಲ್ಲದೆ ಕೆಲವು ಕಾಳು ದಂದೆ ಕೋರರು ಯಾರದು ಭಯವಿಲ್ಲದೆ ಕಾನೂನಿನ ಪರಿಜ್ಞಾನವಿಲ್ಲದೆ ಅಕ್ರಮವಾಗಿ ಅನ್ನ ಭಾಗ್ಯ ಯೋಜನೆಯ ಅಕ್ಕಿಗಳನ್ನು ಶೇಖರಣೆ ಮಾಡುತ್ತಿದ್ದಾರೆ. ಈ ಒಂದು ವ್ಯವಹಾರ ನರಗುಂದ ಪಟ್ಟಣ ಮತ್ತು ತಾಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ನಡೆಯುತ್ತಿದ್ದು ಕಾಳು ದಂದೆ ಕೋರರಿಗೆ ಕಡಿವಾಣ ಹಾಕಬೇಕಾಗಿದೆ” ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಅನ್ನಭಾಗ್ಯ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ದಂದೆಗೆ ಇಳಿದಿರುವ ದಂದೆಕೋರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದ ದಂಡಾಪೂರ್ ಬಡಾವನೆಯ ವಜ್ಜರಂಗ್ಗಿ ಎಂಬುವವರ ಮನೆಯ ಮುಂದೆ ಬಳಿಗಾರ್ ಗಿರಾಣಿಯ ಆವರಣದಲ್ಲಿ ಹೀರೊ ಹೆಚ್ ಎಫ್, ಗಾಡಿ ಸಂಖ್ಯೆ KA-24 Q2147 ಗುರುತಿನ ವಾಹನ ಬಳಸಿಕೊಂಡು ಸಂಗ್ರಹಿಸಿಡಲಾದದೆ. ಸುಮಾರು 50ಕೆಜಿ ಸಾಮರ್ಥ್ಯದ 48 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ವಾಹವನವನ್ನು ಬಿಟ್ಟು ಪರಾರಿಯಾಗಿದ್ದಾನೆಂದು ಸ್ಥಳೀಯ ತಿಳಿದ್ದಾರೆ.
ನರಗುಂದ ಪೊಲೀಸ್ ಠಾಣೆಯ ಪಿಎಸ್ಐ ಮಣ್ಣೂರ್ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವರದಿ : ಗುರುನಾಥ ಕೆಂಗಾರಕಾರ ಸಿಟಿಜನ್ ಜರ್ನಲಿಸ್ಟ್ ನರಗುಂದ





