ಗದಗ | ಐಸಿಡಿಎಸ್ ಅಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ: ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ

Date:

“ಬಿ.ಎಲ್.ಓ ಕೆಲಸಗಳಿಗೆ ನಮ್ಮನ್ನು ನೇಮಿಸುವುದು ಸರಿಯಲ್ಲಾ. ಐಸಿಡಿಯಸ್ ಅಲ್ಲದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ” ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷರು ನೀಲಮ್ಮ ಹಿರೇಮಠ ಎಂದು ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿರಸ್ತೆದಾರರ ಮೂಲಕ ಮಾನ್ಯ ತಹಶಿಲ್ದಾರರಗೆ ಮನವಿ ಸಲ್ಲಿಸಿ ಮಾತನಾದರು.

“ಬಿ.ಎಲ್.ಓ ಅಧಿಕಾರಿಗಳು ನಮಗೆ ಅನಧಿಕೃತವಾಗಿ ಕೆಲಸಗಳನ್ನು ಹಚ್ಚುತ್ತಿದ್ದಾರೆ. ನಾವು ಅಂಗನವಾಡಿ ಕಾರ್ಯಕರ್ತರು ಐಸಿಡಿಎಸ್ ಯೋಜನೆಯ ಜಾರಿಗಾಗಿ ಸುಮಾರು 24-25 ಹಂತದ ಕಾರ್ಯಕ್ರಮಗಳನ್ನು ನಿಭಾಯಿಸಿದರೂ ಸಮಯ ಸಿಗುತ್ತಿಲ್ಲ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರು ಗಣೇಶ್ ರಾಥೋಡ್ ಮಾತನಾಡಿ, “ಐಸಿಡಿಎಸ್ ಯೋಜನೆ, ಅದರ ಉದ್ದೇಶ ತಾಯಿ ಮತ್ತು ಮಗುವಿನ ಆರೈಕೆ ಕೆಲಸ. ಅದನ್ನು ಬಿಟ್ಟು ಐಸಿಡಿಎಸ್ ಅಲ್ಲದ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತರನ್ನ ನೇಮಿಸುತ್ತಿರುವುದು ಅವೈಜ್ಞಾನಿಕ ನಿಯಮವಾಗಿದ್ದು, ಯಾವುದೇ ಕಾರಣಕ್ಕೂ ಐಸಿಡಿಎಸ್ ಅಲ್ಲದ ಕೆಲಸಗಳಿಗೆ ನೇಮಿಸಬಾರದು” ಎಂದರು.

“ಮಹಿಳೆಯರ ಮತ್ತು ಮಗುವಿನ ಆರೈಕೆ, ಪೌಷ್ಟಿಕಾಂಶ, ಘೋಷಣೆ ಯೋಜನೆಗಳ ಜಾರಿ ಹೀಗೆ ಈಗಾಗಲೇ ಅನೇಕ ಕೆಲಸಗಳಿಗೆ ಸಮಯದ ಅಭಾವವಿದೆ. ಇದಾಗ್ಯೂ ಕೆಲಸ ಬಾಕಿ ಉಳಿಯುತ್ತಿದ್ದು, ಅವುಗಳನ್ನು ಸರಿದೂಗಿಸಲು ಐಸಿಡಿಎಸ್ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ತರಬೇತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕು. ಬೇರೆ ಬೇರೆ ಕೆಲಸಗಳಿಗೆ ನೇಮಿಸುವುದು ಸರಿಯಲ್ಲ. ಐಸಿಡಿಯಸ್ ಯೋಜನೆಗೆ ಮಾಡುವ ಮೋಸ ಆಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಾಲ್ತುಳಿತ | ಆರ್‌ಸಿಬಿ ಮತ್ತು ಡಿಎನ್‌ಎ ಪದಾಧಿಕಾರಿಗಳಿಗೆ ಮಧ್ಯಂತರ ಜಾಮೀನು

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಸಿಐಟಿಯು ಜಿಲ್ಲಾ ಮುಖಂಡರಾದ ಮೈಬು ಹವಾಲ್ದಾರ್, ಅಂಗನವಾಡಿ ಮುಖಂಡರಾದ ಸುಮ್ನೆ ಮಾತಾಡಬೇಡ ಸುನಿತಾ, ಪವಿತ್ರ, ಸವಿತಾ ರಾಠೋಡ, ರಂಜಿತಾ ಕುಲಕರ್ಣಿ, ರತ್ನಾ ವಾಲಿ, ದೀಪಾ ಬಡಿಗೇರ್, ಸುನೀತಾ ಅಜಮೀರ್, ಶಂಕ್ರಮ್ಮ ಸಿಂಹಾಸನದ, ಗೀತಾ ಕಡಬಲಕಟ್ಟಿ, ಖಾಜಾಬಿ ಕುಸುಗಲ್, ದಾನಮ್ಮ ಹಿರೇಮಠ್, ವಿಜಯಲಕ್ಷ್ಮಿ ಪತ್ತಾರ್, ರಾಚಮ್ಮ ಗದಗಿನಮಠ,  ಮಲ್ಲಮ್ಮ ವಿಭೂತಿ, ಮಹಾದೇವಿ,  ಕಸ್ತೂರಿ ಹುಬ್ಬಳಿ, ಸಾವಿತ್ರಿ ಸುಬೇದಾರ್, ಮಂಜುಳಾ ಹಡಪದ, ಸಿದ್ರಾಮವ್ವ ಹಿರೇಮಠ, ಶಾಂತ ಸೋಬಾನದ್, ಲಕ್ಷ್ಮಿಬಾಯಿ ರಾಠೋಡ, ಶಾವಕ್ಕ ಗುರಿಕಾರ್, ಲಕ್ಷ್ಮಿ ಬಂಕದ್, ಪರವಿನ ಬಾನು ಮದಗಾರ, ಶಾರದಾ ಮಂತಾ, ಲಲಿತಾ ಮಾರನಬಸರಿ, ಪವಿತ್ರ ಚಳಗೇರಿ, ಶಾಂತ ಸೋಬಾನದ ಹಾಗೂ ಇತರರು ಹಾಜರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...