“ಗುತ್ತಿಗೆದಾರನಿಂದ 5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ ದಾಳಿಗೆ ರೆಂಡ್ಹ್ಯಾಂಡ್ ಸಿಕ್ಕಿರುವ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಶಾಸಕ ಸದಸ್ಯತ್ವದಿಂದ ಅನರ್ಹಗೊಳಿಸಬೇಕು” ಎಂದು ಲಕ್ಷ್ಮೇಶ್ವರ ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದ್ದಕ್ಕೆ 11ಲಕ್ಷ ಕಮಿಷನ್ಗೆ ಬೇಡಿಕೆಯಿಟ್ಟಿದ್ದು, ಕಮಿಷನ್ ರೂಪದಲ್ಲಿ ರೂ.5 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದದ್ದು ಶಾಸಕರನ್ನು ಅನರ್ಹಗೊಳಿಸಲು ಸಭಾಪತಿ ಹಾಗೂ ರಾಜ್ಯಪಾಲರಿಗೆ ಲಕ್ಷ್ಮೇಶ್ವರ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಕಾಂಗ್ರೇಸ್ ಆಕಾಂಕ್ಷಿ ಅಭ್ಯರ್ಥಿ ಸುಜಾತ ದೊಡ್ಡಮನಿ ಮಾತನಾಡಿ, “ಗುತ್ತಿಗೆದಾರ ವಿಜಯರಾಜ್ ಪೂಜಾರ ಅವರಿಂದ 11 ಕಮಿಷನ್ಗೆ ಬೇಡಿಕೆ ಇಟ್ಟಿದ್ದು, ಗುತ್ತಿಗೆದಾರನಿಂದ ರೂ. 5 ಲಕ್ಷ ಲಂಚ ತೆಗೆದುಕೊಳ್ಳುವಾಗಲೇ ಲೋಕಾಯುಕ್ತರು ದಾಳಿ ಮಾಡಿ ರೆಂಡ್ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಶಿರಹಟ್ಟಿ ಕ್ಷೇತ್ರದಲ್ಲಿ ಎಂದೂ ಆಗದ ಇಂತಹ ಘಟನೆ. ಚಂದ್ರು ಲಮಾಣಿ ಅವರು ಆದ ಶಾಸಕರಾದ ಮೇಲೆ ಹಣದ ದುರಾಸೆಯಿಂದ ಬಡಪಾಯಿ ಗುತ್ತಿಗೆದಾರರಿಂದ ಕಮಿಷನ್ಗೆ ಒತ್ತಡವೇರಿದ್ದರೆ. ಒಂದು ವೇಳೆ ‘ಕಮಿಷನ್ ಕೊಡ್ದೆ ಇದ್ದರೆ ಟೆಂಡರ್ ಕ್ಯಾನಸಲ್ ಮಾಡಿಸುವೆ ಇದೆಲ್ಲ ಇಟಕೊಬೇಡ ನಮ್ಮ ತಾಲೂಕಿನಲ್ಲಿ ‘ನಡ ಮುರಿಸುವೆ” ಎಂದು ಬೇದರಿಕೆ ಹಾಕಿದ್ದಾರೆ.
“ಜನಪ್ರತಿನಿಧಿಯಾದಂತವರಿಗೆ ಈ ನಡವಿಕೆ ಸರಿಯಲ್ಲ. ಹಾಗಾಗಿ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಕಾಂಗ್ರೇಸ್ ಆಕಾಂಕ್ಷಿ ಅಭ್ಯರ್ಥಿ ಸುಜಾತ ದೊಡ್ಡಮನಿ ಆಗ್ರಹಿಸಿದರು.
ಯಲ್ಲಪ್ಪ ಸುರಣಗಿ ಮಾತನಾಡಿ, “ತಾಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಡಾ.ಚಂದ್ರು ಲಮಾಣಿ ಅವರು ಶಾಸಕರಾದಾಗಿನಿಂದ ತಾಲೂಕಿನ ಅಧಿಕಾರಿಗಳು ಅತಿ ಭ್ರಷ್ಟಾಚಾರಿಗಳಾಗುತ್ತಿದ್ದಾರೆ. ಕಾರಣ ತಿಳಿದಾಗ ಶಾಸಕರಿಗೆ ಕಮಿಷನ್ ಕೊಡಲೇಬೇಕೆಂಬ ಕಟ್ಟಳೆ ಇತ್ತು; ಎಂಬುದು ಗಮನ ಬರುತಿತ್ತು. ಇದರಿಂದ ಅಧಿಕಾರಿಗಳು ಸಾರ್ವಜನಿಕರು ಶಾಸಕರ ಈ ದುಷ್ಟ ಭ್ರಷ್ಟಾಚಾರದಿಂದ ಬೆಸತ್ತು ಹೋಗಿದ್ದರು. ಇಂತಹ ಒಬ್ಬ ಭ್ರಷ್ಟ ಶಾಸಕ ಭಾರತ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಭಾಗದಲ್ಲಿ ಕಂಡಿರಲಿಲ್ಲ. ಆದ್ದರಿಂದ ಲಂಚಕೋರ ಶಾಸಕ ಈ ತಾಲೂಕಿಗೆ ಅವರನ್ನು ಸದಸ್ಯತ್ವ ಕೂಡಲೇ ವಜಾಗೊಳಿಸಿ” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ, ಚನ್ನಪ್ಪ ಜಗಲಿ, ಗುಡ್ಡಪ್ಪ ಕೊಪ್ಪದ, ಫಕ್ಕೀರೇಶ ಮ್ಯಾಟಣವರ, ಸದ್ಧಮ್ ಹಾಲಗಿ, ಶಿವು ಕಬ್ಬೇರ್, ಲಕ್ಷ್ಮೇಶ್ವರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.





