ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧೈಯೋದ್ದೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ವಿಕಾಸ ರಂಗ ಸಂಘಟನೆಯ ಗದಗ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಯುವ ಪತ್ರಕರ್ತ, ಬರಹಗಾರ, ಸಾಮಾಜಿಕ ಕಾರ್ಯಕರ್ತ ಮಲ್ಲೇಶ ಪಿ.ಮಣ್ಣಮ್ಮನವರ ಅವರನ್ನು ನೇಮಕ ಮಾಡಲಾಗಿದೆ.
ಮಲ್ಲೇಶ ಪಿ.ಮಣ್ಣಮ್ಮನವರ ಆಯ್ಕೆಯನ್ನು ಕರ್ನಾಟಕ ವಿಕಾಸ ರಂಗ ವೇದಿಕೆಯ ರಾಜ್ಯಾದ್ಯಕ್ಷರಾದ ವ.ಚ. ಚನ್ನೇಗೌಡ ಅವರು ನೇಮಿಸಿ, ಆದೇಶ ಹೊರಡಿಸಿದ್ದಾರೆ.
ನೂತನ ಅಧ್ಯಕ್ಷರು ಕರ್ನಾಟಕ ವಿಕಾಸ ರಂಗದ ಧೈಯೋದ್ದೇಶಗಳಿಗೆ ಶಕ್ತಿ ಮೀರಿ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವಂತೆ ವಿಶ್ವಾಸ ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷರಿಗೆ ಅಭಿನಂದನೆಗಳು: ಕರ್ನಾಟಕ ವಿಕಾಸ ರಂಗದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲೇಶ ಮಣ್ಣಮ್ಮನವರ ಅವರನ್ನು ವಿವಿಧ ಸಂಘಟನೆಗಳು ಅಭಿನಂದಿಸಿವೆ.
ರಾಜಕೀಯ, ಸಾಮಾಜಿಕ ಮುಖಂಡರಾದ ಗುರುನಾಥ ದಾನಪ್ಪನವರ, ಫಕ್ಕೀರೇಶ ಮ್ಯಾಟಣ್ಣವರ,ಜಗದೀಶ ಹುಲಿಗೆಮ್ಮನವರ,ಶರಣಪ್ಪ ಇಚ್ಚಂಗಿ,ಕೃಷ್ಣಪ್ಪ ಲಮಾಣಿಯವರು ಮುಂತಾವದರು ಅಭಿನಂದಿಸಿದ್ದಾರೆ.





