ಬಾಬಾಸಾಹೇಬ ಅಂಬೇಡ್ಕರ್ ಅವರು ಅಸಮಾನತೆ, ಶೋಷಣೆ ಮತ್ತು ತಾರತಮ್ಯದ ಮನು ಸಂವಿಧಾನವನ್ನು ಬಹಿರಂಗವಾಗಿ ಸುಟ್ಟು ನಾಳೆಗೆ 98 ವರ್ಷ ಸಂದಲಿದ್ದು, ನಾಳೆ ಗಾಂಧಿ ವೃತ್ತದಲ್ಲಿ ಮನುಸ್ಮೃತಿ ದಹನ ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆಯಲಿದೆ.
“ಬಾಬಾಸಾಹೇಬ ಅಂಬೇಡ್ಕರ್ ಅವರ ಕ್ರಾಂತಿಕಾರಿ ನಿಲುವು ನಮಗೆ ಎಂದಿಗೂ ಆದರ್ಶವಾಗಲಿ. ನಾಳೆ ದಿನ 11 ಗಂಟೆಗೆ ನಗರದ ಗಾಂಧಿವೃತ್ತದಲ್ಲಿ ಸೇರಿ ಮನುಸ್ಮೃತಿಯನ್ನು ಮತ್ತೊಮ್ಮೆ ದಹನ ಮಾಡೋಣ” ಎಂದು ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
“ಬಾಬಾಸಾಹೇಬ ಅಂಬೇಡ್ಕರ್ ಅವರು ಅಂದು ಸುಟ್ಟ ಮನುಸ್ಮೃತಿಯ ಕುಡಿಗಳು ಮತ್ತೆ ಚಿಗುರೊಡೆದು ಹೆಮ್ಮರವಾಗಿದ್ದಾರೆ. ಅಂತವರನ್ನು ಮತ್ತೆ ದಮನ ಮಾಡಲು ನಾವು ಜೊತೆಯಾಗೋಣ” ಎಂದು ತಿಳಿಸಿವೆ.





