ಲೋಕಾಯುಕ್ತರ ಬಲೆಗೆ ಸಿಕಕ್ಕಿಬಿದ್ದಿದ್ದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಇಬ್ಬರು ಪಿಎಗಳನ್ನು ಸೇರಿ ಮೂವರನ್ನು ಲಂಚದ ಆರೋಪದಲ್ಲಿ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಹಿದೆ. ಇದರ ಬೆನ್ಲಲ್ಲೇ ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ.ವಿ.ಇಂಗಳಹಳ್ಳಿ ಅವರು ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗದಗ ಪಟ್ಟಣದ ನಿವಾಸಿ ವೀರೇಶ ಪೂಜಾರ ತನ್ನ ತಾಯಿ ಹೆಸರಿನಲ್ಲಿ ಗದಗ ಶಹರ ಠಾಣೆಗೆ ಅನಾಮಧೇಯ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲು ಕೋರಿದ್ದರು. ಅದಕ್ಕೆ ಎಎಸ್ಐ ಇಂಗಳಹಳ್ಳಿ ₹13 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬುಧವಾರ ಪೊಲೀಸ್ ಠಾಣೆಯಲ್ಲೇ ₹10 ಸಾವಿರ ಲಂಚ ಪಡೆಯುವ ವೇಳೆ ಎಎಸ್ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.





