ಗದಗ ಬೈಪಾಸ್ ಮೂಲಕ ಸಂಚಾರ ಆಗುವ ಎಲ್ಲ ರೈಲುಗಳನ್ನು ಗದಗ ಜಂಕ್ಷನ್ ಮೂಲಕ ಸಂಚಾರ ಆಗವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರು ವಿಶ್ವನಾಥ ಖಾನಾಪುರ ಅವರು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.
ಪ್ರತಿಕ್ರಿಯೆ ನೀಡಿದ ಸಂಸದರು, “ಗದಗ ಬೈಪಾಸ್ ಮೂಲಕ ಸಂಚಾರ ಆಗುವ ರೈಲುಗಳನ್ನು ಗದಗ ಮೇನ್ ಜಂಕ್ಷನ್ ಮೂಲಕವೇ ಸಂಚಾರ ಆಗುತ್ತವಂತೆ ಈಗಾಗಲೇ ರೈಲ್ವೆ ಸಚಿವರು ಹಾಗೂ ರೈಲ್ವೆ ಇಲಾಖೆ ಹಾಗೂ ವಿಜಯಪುರ ಲೋಕಸಭಾ ಸದಸ್ಯರು ಆಗಿರುವ ರಮೇಶ್ ಜಿಗಜಿಗಣಿಗೆ ಅವರಿಗೆ ಸಹ ಗಮನಕ್ಕೆ ತಂದಿದ್ದೇನೆ. ಇನ್ನೂ ಮುಂದೆ ಯಾವುದೇ ಪ್ರಯಾಣಿಕರು ಟ್ರೇನ್ಗಳು ಗದಗ ಮೇನ್ ಜಂಕ್ಷನ್ ಮೂಲಕವೇ ವಿಜಯಪುರಕ್ಕೆ ಸಂಚಾರ ಆಗುತ್ತವೆ” ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಗದಗ ಯಲವಗಿ ನೂತನ ಮಾರ್ಗದ ಈಗಾಗಲೇ ಇದರ ಕಾರ್ಯ ಆರಂಭ ಆಗಲಿದೆ ಅಂತಹ ಭರವಸೆ ನೀಡಿದರು. ನಾನು ಸಹ ಸರ್ಕಾರದ ಗಮನಕ್ಕೆ ಸೆಳೆದು ಇದರ ಕೆಲಸದ ವೇಗ ಹೆಚ್ಚಿಸುವ ಬಗ್ಗೆ ಗಮನ ಹರಿಸುತ್ತೇನೆ ಅಂತಹ ಭರವಸೆ ನೀಡಿದರು.





