“ನಮ್ಮ ಭಾರತ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವಡಿಯಲ್ಲಿ ಎಲ್ಲಾ ನಾಗರೀಕರು ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸರ್ಕಾರಗಳನ್ನು ರಚನೆ ಮಾಡುತ್ತಾರೆ. ಆದರೆ ದೇಶದ ಜನತೆಯ, ಪ್ರಜಾಪ್ರಭುತ್ವದ ಮತ್ತು ನಮ್ಮ ಸಂವಿಧಾನದ ಮೇಲೆ ಬಿಜೆಪಿ ಸರ್ಕಾರಗಳು ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ನೆಪದಲ್ಲಿ ದೇಶದ ಲಕ್ಷಾಂತರ ಜನರ ಮತದಾನದ ಹಕ್ಕನೇ ಕಸಿಯುವ ಹುನ್ನಾರ ನಡೆಯುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ” ಎಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕರದ ಎ.ನರಸಿಂಹಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದರು.
ಗದಗ ಪಟ್ಟಣದ ಗಂಗೆಮಡಿ ಹತ್ತಿರದ ಸಭಾಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಸ್ಲಂ ಸಮಿತಿ ಆಶ್ರಯದಲ್ಲಿ ಸ್ಲಂ ಜನರ ಸಂಘಟನೆ ಬಲವರ್ಧನೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತದಾರರ ನಾಗರಿಕತ್ವ ಪರಿಶೀಲನೆ ಸಂವಿಧಾನ ವಿರೋಧಿ ನಡೆಯಾಗಿದೆ. ಇದರಿಂದಾಗಿ ನಮ್ಮ ದೇಶದ ಲಕ್ಷಾಂತರ ದುರ್ಬಲ ವರ್ಗದ ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ನಮ್ಮ ದೇಶದ ಕಾರ್ಮಿಕ ವರ್ಗವನ್ನು, ದಲಿತರನ್ನು, ಆದಿವಾಸಿಗಳನ್ನು, ಅಲ್ಪಸಂಖ್ಯಾತರನ್ನು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಂತಹ ಜನವಿರೋಧಿ ಮತದಾರರ ತೀವ್ರ ಪರಿಷ್ಕರಣೆ ನಡೆಸಲಾಗುತ್ತದೆ. ಈಗಾಗಲೇ ಅನೇಕ ರಾಜ್ಯದಲ್ಲಿ ಇದರಿಂದ ಲಕ್ಷಾಂತರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“ದೇಶದಲ್ಲಿನ ಕೇಂದ್ರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಜನ ಸಾಮಾನ್ಯರ ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಸದ್ದಿಲ್ಲದೆ ಎಸ್.ಐ.ಆರ್. ಹೆಸರಿನಲ್ಲಿ ಮತನಾದನ ಹಕ್ಕನ್ನೇ ಕಸಿಯುವ, ಒಂದು ಸಮುದಾಯವನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ನಾಗರಿಕತ್ವ ಇರದಂತೆ ಮಾಡುವ ಹುನ್ನಾರ ನಡೆಸಲಾಗುತ್ತದೆ. ಆದ್ದರಿಂದ ನಮ್ಮ ಸ್ಲಂ ಜನರು ಇದನ್ನು ತಿಳಿದುಕೊಂಡು ಜಾಗೃತರಾಗಿ. ಇದರ ವಿರುಧ್ದ ಜನ ಚಳುವಳಿಯನ್ನು ಕಟ್ಟುವ ಅವಶ್ಯಕತೆ ಇದೆ” ಎಂದು ಹೇಳಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ, “ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿ ಕೊಟ್ಟ ಹೋರಾಟದ ಹೆಜೆಗಳನ್ನು ನಾವು ಸ್ವಾರ್ಥರಹಿತವಾಗಿ ಮುಂದೆ ಸಾಗೋಣ. ನಗರವಂಚಿತ ಸಮುದಾಯಗಳ ಮತ್ತು ಮಹಿಳೆಯರ ಧ್ವನಿಯಾಗಿ ಸಂಘಟನೆಯ ಮೂಲಕ ಕೆಲಸ ಮಾಡಬೇಕಾಗಿದೆ. ಸ್ಲಂ ಜನಾಂದೋಲನ-ಕರ್ನಾಟಕ ಕಳೆದ ೨೦೧೦ ರಿಂದ ನಮ್ಮ ನಗರ-ನಮ್ಮ ಪಾಲು, ನಗರ ವಂಚಿತ ಸಮುದಾಯಗಳ ಸ್ವಾಧಿಕಾರಕ್ಕಾಗಿ ಹಾಗೂ ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿದೆ” ಎಂದರು.
“ಸರ್ಕಾರಗಳ ಗಮನ ಸೆಳೆಯುವ ಕೆಲಸ ಮಾಡಲಾಗುತ್ತದೆ. ಸ್ಲಂ ಜನರ ವಸತಿ, ಹಕ್ಕು ಪತ್ರ, ಭೂಮಿ ಹಕ್ಕು ಇನ್ನು ಹಲುವಾರು ಹಕ್ಕೋತ್ತಾಯಗಳಿಗೆ ರಾಜ್ಯಾದ್ಯಾಂತ ಸ್ಲಂ ಜನರ ಚಳುವಳಿಯನ್ನು ಕಟ್ಟುವ ಮುಲಕ ರಾಜ್ಯದಲ್ಲಿ ಒಂದು ಒತ್ತಡದ ಗುಂಪಾಗಿ ಸರ್ಕಾರಕ್ಕೆ ಅವರು ಜವಾಬ್ದಾರಿಗಳ ಕುರಿತು ಎಚ್ಚರಿಕ್ಕೆ ನೀಡಲಾಗುತ್ತದೆ” ಎಂದು ತಿಳಿಸಿದರು.
ಗದಗ ಜಿಲ್ಲಾ ದಲಿತ ಸಂಘರ್ಸ ಸಮಿತಿ ಸಂಚಾಲಕರು ವೆಂಕಟೇಶಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಶರಣಪ್ಪ ಸೂಡಿ, ಮೆಹರುನಿಸಾ ಢಾಲಾಯತ, ವೆಂಕಟೇಶ ಬಿಂಕದಕಟ್ಟಿ, ಸಲೀಂ ಹರಿಹರ ವೇದಿಕೆಯ ಮೇಲೆ ಉಪಸ್ಥಿತರಿದ್ದರು, ಖಾಜಾಸಾಬ ಇಸ್ಮಾಯಿಲನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಸಾಕ್ರುಬಾಯಿ ಗೋಸಾವಿ, ವಿಶಾಲಕ್ಷಿ ಹಿರೇಗೌಡ್ರ, ಮೈಮುನ ಬೈರಕದಾರ, ಗೌಸಸಾಬ ಅಕ್ಕಿ, ಮೆಹಬೂಬ ಮುಲ್ಲಾ, ದಾದು ಗೋಸಾವಿ, ಮಕ್ತುಮಸಾಬ ಮುಲ್ಲಾನವರ ಮಲ್ಲೇಶಪ್ಪ ಕಲಾಲ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಭಾಗವಹಿಸಿದ್ದರು.





