“ಅಧಿಪತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಬಿ. ಆರ್. ಗವಾಯಿ ಅವರಿಗೆ ಕೋರ್ಟಿನಲ್ಲಿ ಶೂ ಎಸೆಯಲು ಪ್ರಯತ್ನಿಸಿರುವುದು ನ್ಯಾಯಾಧೀಶರಿಗೆ ಅವಮಾನ ಮಾಡಿದಂತ ಘಟನೆ ಇಡೀ ದೇಶದಲ್ಲಿನ ಕಾನೂನು ವ್ಯವಸ್ಥೆಗೆ ಅಪಮಾನ ಮಾಡಿದಂತಾಗಿದೆ. ಕೂಡಲೇ ದೇಶದ್ರೋಹಿ ಪ್ರಕರಣ ದಾಖಲಿಸಲಿ” ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರು ಸಂಜಯ ದೊಡ್ಡಮನಿ ಒತ್ತಾಯಿಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಹೇಳಿಕೆ ನೀಡಿದ ಅವರು, “ಸುಪ್ರೀಂಕೋರ್ಟ್ ಗೌರವಾನ್ವಿತ ಮುಖ್ಯ ನ್ಯಾಯಾಧೀಶರಾದ ಬಿ.ಆರ್ ಗವಾಯಿಯವರು ದಲಿತರು ಅನ್ನುವ ಕಾರಣಕ್ಕೆ ಇಂತಹ ಅವಮಾನ ಮಾಡಲಾಗಿದೆ. ವಿನಹ ಮತ್ತೇನು ಕಾರಣವಲ್ಲ. ಆರ್.ಎಸ್.ಎಸ್ ಮೂಲದ ವಕೀಲ ರಾಕೇಶ್ ಕಿಶೋರ ಎಂಬುವ ಮನುವಾದಿಗೆ ದೇಶ ದ್ರೋಹದ ಕೇಸು ದಾಖಲಿಸಿ ಅವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
“ಒಬ್ಬ ಗೌರವಾನ್ವಿತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯದೀಶರಿಗೆ ಈ ರೀತಿ ಅವಮಾನ-ಅಪಮಾನ ಮಾಡಿದರೆ ದೇಶದ ಪರಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಅನ್ನುವುದು ಬಹಳಷ್ಟು ಬೇಜಾರಿನ ಸಂಗತಿಯಾಗಿದೆ” ಎಂದರು.
“ಭಾರತದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕಿಯಾದ ಘಟನೆಯಾಗಿದೆ. ಈ ಕೂಡಲೇ ಆತನನ್ನು ಬಾರ್ ಕೌನ್ಸಿಲ್ನಂದ ಅಮಾನತ್ತು ಮಾಡಿ ಬಂಧಿಸಿ ಜೈಲಿಗೆ ಹಾಕಬೇಕು” ಎಂದು ಒತ್ತಾಯಿಸಿದರು.





