“ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಆಗಮಾತ್ರ ಗುರಿ ಸಾಧನೆ ಸಾದ್ಯಮಾಗುತ್ತದೆ. ಇಂದು ನಾವೆಲ್ಲ ಇಲ್ಲಿಬಂದು ಸೇರಬೇಕಾದರೇ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಇಲ್ಲದ ಸಮಾಜ ಪರಿಪೂರ್ಣ ಆಗಲಾರದು. ಹಿಂದೆ ಮಠಮಾನ್ಯಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಗುರುಕುಲ ಪದ್ದತಿ ಇತ್ತು. ಇಂದು ನಾವು ಅವುಗಳನ್ನು ಕಾಣಬಹುದು” ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಹೇಳಿದರು.
ಗದಗ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಅಧ್ಯಕ್ಷತೆ ಮಾತನಾಡಿದರು.
“ಶಿಕ್ಷಣದ ನೀತಿಗಳನ್ನು ಜಾರಿ ತರುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯ. ನಮ್ಮನ್ನು ತಿದ್ದಿ ತೀಡಿ ನಮ್ಮನ್ನು ಶಿಲ್ಪಿಗಳಾಗಿಸಿದವರು ಶಿಕ್ಷಕರು. ಯಾವುದೇ ಸಂದರ್ಭದಲ್ಲಿ ನಮಗೆ ಕಲಿಸಿದ ಶಿಕ್ಷಕರು ಕಂಡ ತಕ್ಷಣ ನಮಸ್ಕರಿಸುತ್ತೇವೆ, ಅದು ನಮಗೆ ಅವರ ಮೇಲಿರುವ ಗೌರವ, ಜಾಗೃತ ಮನಸ್ಸಿಂದ ಬರುತ್ತದೆ. ಇರು ಶಿಕ್ಷಕರ ಮೇಲಿರುವ ಶ್ರದ್ದೇಯಾಗಿದೆ” ಎಂದರು.
“ಇಂದಿನ ಆದುನಿಕ ಕಾಲದಲ್ಲಿ ಗ್ಯಾಜೆಟ್ಸ್ ನಿಂದ ಮಕ್ಕಳನ್ನು ಹೊರ ತಂದು ಅವರಿಗೆ ಮನವರಿಕೆ ಆಗುವಂತೆ ಕಲಿಸುವದು ಚಾಲೆಂಜ್ ಆಗಿದೆ. ಅದನ್ನು ನಮ್ಮ ಶಿಕ್ಷಕರು ಸರಿಯಾಗಿ ನಿಬಾಯಿಸಬೇಕು. ಅರಿವೇ ಗುರು ಎಂಬಂತೆ ಮೊದಲು ನಮ್ಮನ್ನು ನಾವು ಅರಿತು ನಂತರ ಮಕ್ಕಳಿಗೆ ಅರಿವು ಮಾಡಿಸುವ ಕಾರ್ಯ ನಾವೆಲ್ಲ ಮಾಡಬೇಕು” ಎಂದು ಹೇಳಿದರು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ಡಾ.ಹರಿಪ್ರಸಾದ್ ಜಿ.ವಿ. ಉಪನ್ಯಾಸ ನೀಡಿ, “ಶಿಕ್ಷಕರಿಗೆ ನೀಡಿದ ದೈನಂದಿನ ಕಾರ್ಯಗಳು, ಕರ್ತವ್ಯಗಳು, ಆದುನಿಕ ತಂತ್ರಜ್ಞಾನ, ಸಿಂತಟೆಕ್ ಇಂಟಲಿಜೆನ್ಸ್ ಕುರಿತು ವಿಸ್ತಾರವಾಗಿ” ಮಾತನಾಡಿದರು.
“ಇಂದಿನ ಮಕ್ಕಳು ಜನರೇಶನ್ ಆಲ್ಪಾ, ಬೀಟಾ ಮಕ್ಕಳಾಗಿದ್ದಾರೆ. ಮಕ್ಕಳದ್ದು ಮುದ್ರಣರಹಿತ ಅಭ್ಯಸ ಆಗಿದೆ. ಇದಕ್ಕಾಗಿ ನಾವುಸಹ ಆದುನಿಕತೆಗೆ ಹೊಂದಿಕೊಳ್ಳಬೇಕು. ಇಂದಿನ ಮಕ್ಕಳು ಟೀನೆಜರ್ಸ್ ಅಲ್ಲ ಮೊಬೈಲ್ ಸ್ಕ್ರೀನಿರ್ ಮಕ್ಕಳಾಗಿರುತ್ತಾರೆ” ಎಂದರು.
“ಇಂದಿನ ಮಕ್ಕಳಿಗೆ ಒದುವುದು ಎಂದರೆ, ಕೆಳಿಸಿಕೊಳ್ಳುವುದು. ಬರೆಯುವದು ಎಂದರೆ, ಹೇಳುವುದಾಗಿದೆ. ಇದಕ್ಕೆ ನಾವು ಬದಲಾಗಿ ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ನಮ್ಮದಾಗಿದೆ” ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಆರ್.ಎಸ್.ಬುರಡಿ, ಸರ್ವರಿಗೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, “ಒಬ್ಬ ಒಳ್ಳೆ ಶಿಕ್ಷಕನಾದವರು ಮೊದಲು ತಮ್ಮನ್ನು ತಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಕರಾದವರು ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ಪ್ರಮಾಣಿಕವಾಗಿ ಮಾಡಬೇಕು” ಎಂದರು.
“ಶಿಕ್ಷಕ ನಿರಂತರ ಅಧ್ಯಯನ ಶೀಲರಾಗಿರಬೇಕು, ಅದನ್ನು ಮಕ್ಕಳಿಗೆ ಕಲಿಸುವ ರೂಡಿ ಮಾಡಿಕೊಳ್ಳಬೇಕು ಎಂದು ಹೇಳಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಶಿಕ್ಷಕರ ಮೇಲಿನ ಪ್ರೀತಿ ಅಭಿಮಾನದಿಂದಾಗಿ ತಮ್ಮ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಡಾ. ರಾಧಾಕೃಷ್ಣನ್ರವರ ಶಿಸ್ತು, ಶ್ರದ್ದೆ ನಮಗೆಲ್ಲ ಮಾದರಿ : ಶಾಸಕ ಎಸ್ ವಿ ಸಂಕನೂರ
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್ ಎನ್ ಬಳ್ಳಾರಿ, ಎಡಿಸಿ ಡಾ. ದುರಗೇಶ್ ಕೆ ಆರ್, ಜಿಪಂ ಉಪಕಾರ್ಯರ್ಶಿ ಸಿ ಆರ್ ಮುಂಡರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಡಯಟ್ದ ಉಪನಿರ್ದೇಶಕರಾದ ( ಅಭಿವೃದ್ಧಿ) ಮಂಗಳಾ ತಾಪಸ್ಕರ್, ಗದಗ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಸಿ ಕೊರವನವರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಕ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಗದಗ ತಹಶೀಲ್ದಾರರಾದ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಶೆಟ್ಟೆಪ್ಪನವರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.





