“ದೇಶ ಕಂಡ ಅಪ್ರತಿಮ ಸಾಧಕ ಅಂಬೇಡ್ಕರ್ ಅವರು ಶಿಕ್ಷಣದಿಂದ ಅಸಮಾನತೆಯನ್ನ ಹೊಡೆದೊಡಿಸಿ, ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಡಾ. ಬಿ ಆರ್ ಅಂಬೇಡ್ಕರ್ ಅವರು ನಮಗೆಲ್ಲರಿಗೂ ಸ್ಫೂರ್ತಿ” ಎಂದು ಗ್ರಾಮದ ಹಿರಿಯ ಮುಖಂಡ ದೇವಣ್ಣ ತೋಟದ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರ ಗ್ರಾಮದ ಮರಿಯಮ್ಮ ದೇವಸ್ಥಾನದ ಆವರಣದಲ್ಲಿ ಡಾ. ಬಾ.ಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ “ಅರಿವೇ ಅಂಬೇಡ್ಕರ್”ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾದಿಗ ಸಮುದಾಯದ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿ, “ಅರಿವೇ ಅಂಬೇಡ್ಕರ್” ಸಂಚಿಕೆ ನೀಡಿ ಗೌರವಿಸಿದರು.
ಜೊತೆಗೆ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರವನ್ನ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಚಂದ್ರಶೇಖರ ಈಳಿಗೇರ, ಗ್ರಾಮ ಪಂಚಾಯಿತಿ ಸದಸ್ಯರು ನಿಂಗಪ್ಪ ಬಂಕಾಪುರ, ಶ್ರೀಮತಿ ಜಯಮ್ಮ ಮಣ್ಣಮ್ಮನವರವರ, ಊರಿನ ಹಿರಿಯ ಮುಖಂಡರು ಸಂಜಯ ಪಾಟೀಲ ಕುಲಕರ್ಣಿಯವರು, ಶ್ರೀ ಅಮರಪ್ಪ ಗುಡುಗುಂಟಿ, ದುಂಡಪ್ಪ ಬಾಗಲದ, ಸುರೇಶಪ್ಪ ಬಾಗಲದ ಮನೋಜ್ ರಗಟಿಯವರ, ಎನ್. ಎಚ್. ಹಡಪದ, ಗುಡ್ಡಪ್ಪ ಹಡಪದ, ನಾಗರಾಜ ಲಮಾಣಿ, ಕೃಷ್ಣ ಲಮಾಣಿ, ಶಂಕ್ರಪ್ಪ ಲಮಾಣಿ ಹಾಗೂ ಪಂಚಾಯತಿ ಕಾರ್ಯದರ್ಶಿ ರಾಮಯ್ಯ ಗುರುವಿನರವರ, ಓಣಿಯ ಹಿರಿಯರು, ಯುವಕರು, ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ





