ಗದಗ | ಕಾದಂಬರಿಕಾರ ತನ್ನ ಕಾಲದ ಸತ್ಯವನ್ನು ಹೇಳುವುದೇ ಆಗಿರುತ್ತದೆ: ಐ ಜೆ ಮ್ಯಾಗೇರಿ

Date:

ಕಾದಂಬರಿಕಾರ ತನ್ನ ಕಾಲದ ರಾಜಕೀಯ, ತನ್ನ ಕಾಲದ ಯುಗದ ಸತ್ಯವನ್ನು ಹೇಳುವುದೇ ಆಗಿರುತ್ತದೆ. ಕಾದಂಬರಿಯಲ್ಲಿ ಪೂರ್ಣತೆ ಕಾಣ್ತುತ್ತೇವೆ. ಕಾದಂಬರಿನ್ನು ಓದಿದಾಗ ಹೌದಲ್ಲಾ, ಇದು ನನ್ನದೇ ಜೀವನ ಅಂತ ಅನಿಸುತ್ತೆದೆ. ಈ ರೀತಿ ಬರೆಯುವ ಪರಂಪರೆ ಕುವೆಂಪು ಅವರಿಂದ ಆರಂಭವಾಯಿತು ಎಂದು ಅಂಕಣಕಾರ ಐ ಜೆ ಮ್ಯಾಗೇರಿ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸಂಗಾತ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಸಂಗಾತ ಪುಸ್ತಕ ಹಾಗೂ ಬೆರಗು ಪ್ರಕಾಶನ ಸಹಯೋಗದಲ್ಲಿ ಪುಂಡಲೀಕ ಕಲ್ಲಿಗನೂರು ಅವರ ಮನೋಜನನಿ ಹಾಗೂ “ಅಪ್ಪನ ಲೆಕ್ಕ” ಕಾದಂಬರಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ ಎಸ್ ಗೊರವರ ಮಾತನಾಡಿ, “ಸಮಕಾಲೀನ ರಾಜಕೀಯವು ಸಾಹಿತ್ಯಕ್ಕೆ ಕಾಲು ಚಾಚುತ್ತಿದೆ. ಸಾಹಿತ್ಯ ವಲಯದಲ್ಲಿ ಅಬ್ಬರದ ಭಾಷಣ ಜನಪ್ರಿಯ ಭಾಷಣ ಹೆಚ್ಚಾಗಿದೆ. ಲೇಖಕನ ಕೃತಿಯನ್ನು ಹತ್ತಾರು ಜನರು ಓದುವುದರಿಂದ, ಹತ್ತಾರು ಗ್ರಹಿಕೆ ತಿಳಿಯುತ್ತದೆ. ಈ ರೀತಿ ಅವಲೋಕನವು ಓದುಗರಿಗೆ ಹೊಸ ನೋಟ ಕೊಡುತ್ತದೆ. ಹಾಗೆಯೇ ಲೇಖಕರಿಗೂ ಹೊಸ ದೃಷ್ಟಿಕೋನ ಬೆಳೆಯಲು ಸಾಧ್ಯ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಧಾರವಾಡದಂತಹ ಸಾಹಿತ್ಯ ವಲಯದಲ್ಲಿ ನಡೆಸಿದಂತೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಾಹಿತ್ಯ ವಲಯ ಬೆಳೆಸಬೇಕು. ಆದ್ಯತೆ ಆಸಕ್ತಿ ಬೇರೆಯಾಗಿವೆ. ಇದರಿಂದ ಬದುಕಿನ ವಿಘಟನೆ ಹೆಚ್ಚಾಗಿವೆ. ಸಾಹಿತ್ಯ ಆರೋಗ್ಯಕರ ಬದುಕು. ಇಂತಹ ಹೊಸ ಆಲೋಚನೆಗಳು ಹೆಚ್ಚುತ್ತವೆ” ಎಂದು ಹೇಳಿದರು.

ಡಾ ಬಿ ವಿ ಕಂಬಳ್ಳಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪುಂಡಲೀಕ ಕಲ್ಲಿಗನೂರು ಅವರ ಎರಡೂ ಕಾದಂಬರಿಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಜತೆಗೆ ಕುತೂಹಲ ಹುಟ್ಟಿಸುವ ಕಾದಂಬರಿಗಳಾಗಿವೆ” ಎಂದರು.

ಅಂಕಣಕಾರ ಐ ಜೆ ಮ್ಯಾಗೇರಿ ಅವರು ಕಾದಂಬರಿ ಸಾಹಿತ್ಯ ಕುರಿತು ಮಾತನಾಡಿ, “ಕನ್ನಡ ಕಾದಂಬರಿ ಸಾಹಿತ್ಯ ಪರಂಪರೆ ವಿಶಿಷ್ಟವಾಗಿದೆ. ಕನ್ನಡದಲ್ಲಿ ಮುದ್ರಾಮಂಜೂಸನಿಂದ ಹಿಡಿದು ಇಲ್ಲಿಯವರೆಗೆ ಕನ್ನಡ ಕಾದಂಬರಿ ಪರಂಪರೆ ಬೆಳೆದುಕೊಂಡು ಬಂದಿದೆ. ವಡ್ಡರಾಧನೆ ಕಥೆಗಳು ಮಹಾಭಾರತ ಕಥೆಗಳನ್ನು ಅಂಟಿಕೊಂಡು ಬಂದಂತಹವುಗಳು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ; ರಾಜಕಾಲುವೆ ಹೂಳು ತೆಗೆಯಲು ಮುಂದಾದ ರೈತ

ಮನೋಜನನಿ ಹಾಗೂ ಅಪ್ಪನ ಲೆಕ್ಕ ಕಾದಂಬರಿಗಳ ಕುರಿತು ಕವಿಯತ್ರಿ ಶಿಲ್ಪಾ ಮ್ಯಾಗೇರಿ, ಕವಿ ಮೌನೇಶ ನವಲಹಳ್ಳಿ, ಪ್ರಬಂಧಕಾರರು ಮಹಾಂತೇಶ ಹಿರೇಕುರುಬರ, ಶಿಕ್ಷಕರು ಗಣೇಶ್ ಬುಟ್ಟಾನವರ, ಪ್ರಾದ್ಯಪಕರು ಬಿ ವಿ ಮುನವಳ್ಳಿ ಅವರು ಅವಲೋಕನ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ ಎ ಕೆಂಚರೆಡ್ಡಿ, ಕೃತಿಕಾರರು ಪುಂಡಲೀಕ ಕಲ್ಲಿಗನೂರು ಹಾಗೂ ಸಾಹಿತ್ಯ ಆಸಕ್ತರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...