ಗದಗ | ಸಂವಿಧಾನ ಬದಲಿಸುವ ವ್ಯವಸ್ಥೆಯ ವಿರುದ್ದ ಜನಕ್ರಾಂತಿ ಆಗಬೇಕಿದೆ: ಚಿಂತಕ ಬಸವರಾಜ ಸೂಳಿಬಾವಿ

Date:

ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸಲೇಬೇಕು ಎಂದೇ ಬೇರೆ ಬೇರೆಯವರಿಂದ ಹೇಳಿಸಲು ಹೊರಡುತ್ತಾರೆ. ಅನಂತಕುಮಾರ್ ಹೆಗಡೆ ನೆಪ ಮಾತ್ರ ಅಷ್ಟೇ. ಬೇರೆ ಬೇರೆ ಸಂದರ್ಭದಲ್ಲಿ ಈಗಾಗಲೇ ಹೇಳಿದ್ದಾರೆ. ಅನಂತ ಕುಮಾರ ಹೆಗಡೆ ಸಾಮಾನ್ಯ ಮನುಷ್ಯನಲ್ಲ. ಈ ಸಂವಿಧಾನದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಸಂಸತ್ತಿನ ಒಬ್ಬ ಸದಸ್ಯ, ಬಿಜೆಪಿಯಲ್ಲಿ ಮಂತ್ರಿ ಸ್ಥಾನದಲ್ಲಿದ್ದವನು. ಈ ರೀತಿ ಹೇಳುವುದನ್ನು ಬಿಜೆಪಿ ನಿರಾಕರಿಸುವುದಾಗಲಿ, ಪಕ್ಷಕ್ಕೆ ಸಂಬಂಧಿಸಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಲ್ಲ. ಅಂದರೆ ಬಿಜೆಪಿ ಮೌನವಾಗಿಯೇ ಒಪ್ಪಿಕೊಂಡಿದೆ ಎಂದರ್ಥ” ಎಂದು ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.

ಉತ್ತರ ಕನ್ನಡದ ಸಂಸದ ಅನಂತ ಕುಮಾರ ಹೆಗಡೆ ಪದೇ ಪದೆ ಸಂವಿಧಾನದ ವಿರುದ್ಧ ಮಾತನಾಡುತ್ತಿರುವುದನ್ನು ಖಂಡಿಸಿ ಪ್ರಗತಿಪರ ಚಿಂತಕರು, ದಲಿತಪರ ಮುಖಂಡರು ಒಗ್ಗೂಡಿ ಗದಗ ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

“ಹಿಂದೆ ಸ್ಪಷ್ಟವಾಗಿಯೇ ಹೇಳಿದ್ದಾರೆ, ನಮ್ಮ ಸರ್ಕಾರ‌ ಅಧಿಕಾರಕ್ಕೆ ಬಂದಿದ್ದು, ನಾವು ಸಂವಿಧಾನ ಬದಲಿಸಲಿಕ್ಕಾಗಿಯೇ ಬಂದಿದ್ದೇವೆಂದು ಈಗ ಅನಂತಕುಮಾರ್ ಹೆಗಡೆ ಹೇಳ್ತಿದ್ದಾನೆ” ಸಂವಿಧಾನ ಬದಲಿಸಲಿಕ್ಕೆ 400 ಮಂದಿ ಸಂಸದರು ಬರಬೇಕೆಂದು ಅನಂತಕುಮಾರ ಹೆಗಡೆ ಹೇಳುತ್ತಿದ್ದ, ಈ ಮನುಷ್ಯನಿಗೆ ಇವತ್ತಿಗೂ ಸಂವಿಧಾನ ಓದ್ಕೊಳ್ಳೋಕೆ ಆಗಿಲ್ಲ. ಸಂವಿಧಾನವನ್ನು ಪೂರ್ತಿಯಾಗಿ ಓದಿಕೊಂಡಿದ್ದರೆ, ಇಂತಹ ಪದಗಳನ್ನು ಹೇಳಲು ಸಾದ್ಯವೇ ಇಲ್ಲ” ಎಂದು ಬಸವರಾಜ ಸೂಳಿಬಾವಿ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಈ ಹಿಂದೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆಂದು ಉದ್ಧಟತನ ಹೇಳಿಕೆ ಕೊಟ್ಟಿದ್ದರು. ಈಗ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಿ ಬದಲಾಯಿಸುತ್ತೇವೆಂದು ಹೇಳಿದ್ದಾರೆ. ಇವರ ಸಂವಿಧಾನ ವಿರೋಧಿ ಹೇಳಿಕೆ ಖಂಡನೀಯ” ಎಂದು ಹೇಳಿದರು.

“ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಕೆಲವು ನಿಯಮಗಳಿವೆ. ಇವುಗಳ ಕುರಿತು ಯಾವುದೇ ಪರಿಜ್ಞಾನ ಇಲ್ಲದೇ, ಸಂವಿಧಾ‌ನ ಬದಲಿಸಕ್ಕೆ 400 ಮಂದಿ ಸಂಸದರು ಬೇಕು ಎನ್ನುವುದಿದೆಯಲ್ಲ, ಈ ಸಂವಿಧಾನ ನಿರಾಕರಿಸುವುದಿಷ್ಟೇ, ಈ ದೇಶದ ಗಣರಾಜ್ಯ, ಒಕ್ಕೂಟ ವ್ಯವಸ್ಥೆಯನ್ನೇ ನಿರಾಕರಿಸಿದ ಹಾಗೆ. ಈ ಸಂವಿಧಾನದ ಮೂಲಕವೇ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿರುವುದು, ಗಣರಾಜ್ಯ ಬಂದಿರುವುದು. ಅಂದರೆ ಗಣರಾಜ್ಯವನ್ನು ಪ್ರಜಾಪ್ರಭುತ್ವವನ್ನು ನಿರಾಕರಿಸುವಂತಹ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ಸಂವಿಧಾನವನ್ನು ಇವರು ಯಾಕೆ ನಿರಾಕರಿಸುತ್ತಾರೆಂದರೆ ಈ ಸಂವಿಧಾನ ಎಲ್ಲರಿಗೂ ಸಮಾನತೆಯ ಅವಕಾಶಗಳನ್ನು ಕೊಟ್ಟಿದೆ. ಇಲ್ಲಿ ಯಾರೂ ಶ್ರೇಷ್ಠರಲ್ಲ ಕನಿಷ್ಟರಲ್ಲ, ಎಲ್ಲರೂ ಸಮಾನರೆಂದು ಹೇಳುತ್ತದೆ. ಆದರೆ ಮನುಸ್ಮೃತಿ ಮನುಷ್ಯರನ್ನು ಇವರು ಶ್ರೇಷ್ಠರು, ಇವರು ಕನಿಷ್ಟರೆಂದು ಹೇಳುತ್ತದೆ. ಆದರೆ ಸಂವಿಧಾನ ಎಲ್ಲರೂ ಸಮಾನರೆಂದು ಹೇಳುತ್ತದೆ. ಈ ಸಮಾನತೆ ಕಲ್ಪನೆಯನ್ನು, ಈ ಸನಾತನವಾದವನ್ನು ಎತ್ತಿ ಹಿಡಿಯುತ್ತಿರುವ ಬಿಜೆಪಿಯವರಿಗೆ, ಸಂಘ ಪರಿವಾರದವರಿಗೆ ಈ ಸಮಾನತೆಯನ್ನು ಸಹಿಸಲು ಆಗುತ್ತಿಲ್ಲ. ಜಾತ್ಯತೀತ ವ್ಯವಸ್ಥೆಯ ಬದಲು ಜಾತಿ ವ್ಯವಸ್ಥೆ ತರುತ್ತಿದ್ದಾರೆ. ಧರ್ಮ ತರುತ್ತಿದ್ದಾರೆ. ಇನ್ನು ಚಾತುರ್ವರ್ಣ ವ್ಯವಸ್ಥೆಯನ್ನು ತರುತ್ತಿದ್ದಾರೆ. ಆದರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. ಆದರೆ ಹಿಂದುತ್ವಕ್ಕೆ ಮರಳುವುದೆಂದರೆ, ಬೇದ-ಭಾವ, ಶ್ರೇಷ್ಠ-ಕನಿಷ್ಟ ಎತ್ತಿ ಹಿಡಿಯುವುದಾಗಿದೆ. ಈ ಬಿಜೆಪಿ ಪುನಃ ಚಾತುರ್ವರ್ಣ ಜಾರಿಗೊಳಿಸುವ ಹುನ್ನಾರ ನಡೆಸುತ್ತಿದೆ” ಎಂದು ಹೇಳಿದರು.

“ಸಂವಿಧಾನದ ಮೂಲಕ ಸಮಾನತೆ ಪಡೆದಿದ್ದೇವೆ. ಈ ತಾರತಮ್ಯ ನಿರಾಕರಿಸಿ, ಸಂವಿಧಾನದ ಫಲಾನುಭವಿಗಳಾಗಿದ್ದೇವೆ. ಬ್ರಾಹ್ಮಣ್ಣೇತರ ವರ್ಗಗಳು ಶ್ರೂದ್ರರು, ದಲಿತರೆಲ್ಲ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರೆಲ್ಲರೂ ಕೂಡ ಸಂವಿಧಾನವನ್ನು ಬದಲಿಸುವುದನ್ನು ಮಾತನಾಡುವಂತಹ ಪಕ್ಷವನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವಂತಹ ಗಟ್ಟಿ ನಿರ್ಧಾರ ಮಾಡಿಕೊಂಡು ಅದಕ್ಕೆ ತಕ್ಕ ಉತ್ತರ ಕೊಡಬೇಕು. ಅದರ ಜತೆಗೆ ಸಂವಿಧಾನ ಬದಲಾಯಿಸುವಂತೆ ಮಾತನಾಡುತ್ತಿದ್ದಾರೆ. ಆ ವ್ಯವಸ್ಥೆ ವಿರುದ್ದ ಜನಕ್ರಾಂತಿ ಆಗಬೇಕಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂವಿಧಾನ ಎಲ್ಲರ ಎದೆಯೊಳಗೆ‌ ಅಚ್ಚಾಗಿದೆ. ಸಂವಿಧಾನ ಉಳಿಸಿಕೊಳ್ಳುವುದಕ್ಕಾಗಿ ಈ ದೇಶದ ಎಪ್ಪತ್ತರಷ್ಟು ಜನರು ಯಾವಾಗಲೂ ಸಿದ್ಧರಿರುತ್ತಾರೆ. ಅನಂತಕುಮಾರ್ ಹೆಗಡೆ ಪ್ರತಿನಿಧಿಸುವ ಬಿಜೆಪಿ ಪಕ್ಷವನ್ನು, ಸಂವಿಧಾನ ವಿರೋಧಿಸುವ ಪಕ್ಷವನ್ನು ವಿರೋಧಿಸಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂಲಸೌಕರ್ಯ ಒದಗಿಸುವಂತೆ ಆಗ್ರಹ

ಬಸವ ತತ್ವ ಅನುಯಾಯಿ ಅಶೋಕ ಬರಗುಂಡಿ, ಶೇಖರ ಕವಳಿಕಾಯಿ ದಲಿತಪರ ಮುಖಂಡರು ಮುತ್ತು ಬಿಳಿಯಲಿ, ಪರಶು ಕಾಳೆ, ಅನಿಲ್ ಕಾಳೆ, ಆನಂದ ಶಿಂಗಾಡಿ, ಬಾಲರಾಜ ಅರಬರ್, ನಾಗರಾಜ್ ಗೋಕಾವಿ ಸೇರಿದಂತೆ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...