ಗದಗ ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ಲಡಾಯಿ ಪ್ರಕಾಶನ, ದಲಿತ ಕಲಾಮಂಡಳಿ, ಸೊಲಿಡಾರಿಟಿ ಯೂತ್ ಮೊಮೆಂಟ್, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟಗಳ ಸಹಭಾಗಿತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಹತ್ತಿರದ ಲಯನ್ಸ್ ಭವನದಲ್ಲಿ ಫೆ. 6ರಂದು ಸಂಜೆ 4ರಿಂದ ‘ಎಸ್ಐಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ಸಂವಾದ ಗೋಷ್ಠಿಯನ್ನು ಏರ್ಪಡಿಸಿದ್ದಾರೆ.
ಇದನ್ನೂ ಓದಿ ಗದಗ | ವಿಬಿ ಜಿರಾಮ್ಜಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಫೆ. 12ರಂದು ಮುಷ್ಕರ
ಸಂವಾದ ಗೋಷ್ಠಿಯಲ್ಲಿ ಈ ವಿಷಯದ ಕುರಿತು ಚಿಂತಕ ಶಿವಸುಂದರ ಅವರು ಮಾತನಾಡಲಿದ್ದಾರೆ. ಅಶೋಕ ಬರಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುತ್ತು ಬಿಳೆಯಲಿ ಪ್ರಾಸ್ತಾವಿಕವಾಗಿ ಮಾತನಾಡುವರು. ಡಾ.ರಾಮಚಂದ್ರ ಹಂಸನೂರ, ಎಂ. ಎಸ್. ಹಡಪದ, ಶರೀಪ ಬಿಳೆಯಲಿ, ಇಸಬೆಲ್ಲ ದಾಸ, ಕೆ ಆಯ್ ಶೇಖ್ ಉಪಸ್ಥಿತರಿರುವರು.





