ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಇರುತ್ತಿದೆ. ಜನರ ಬಾಯಾರಿಕೆ ಈಡೇರಿಸಿಕೊಳ್ಳಲು ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರ ಸಭೆಯಲ್ಲಿ ಸಾರ್ವಜನಿಕಕರಿಗೆ ಕಲ್ಪಿಸಿಲ್ಲ.
ಗದಗ ಪಟ್ಟಣದ ನಗರ ಸಭೆಯಲ್ಲಿ ನಿತ್ಯ ಸಾವಿರಾರು ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬರುತ್ತಾರೆ. ಆದರೆ ಅವರಿಗೆ ಕುರಿಯುವ ನೀರಿನ ವ್ಯವಸ್ಥೆ ಇಲ್ಲ.
ನಗರ ಸಭೆ ಕಚೇರಿಗೆಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ. ಅಕ್ಕ ಪಕ್ಕದ ಹೋಟೆಲ್ ಅಂಗಡಿಗಳಲ್ಲಿ ಹೋಗಿ ದುಡ್ಡು ಕೊಟ್ಟು ನೀರನ್ನು ಕುಡಿಯುವ ಪರಿಸ್ಥಿತಿ ಆಗಿದೆ.
ಕಚೇರಿಗೆ ಸಾವಿರಾರು ಜನರು ಅಗತ್ಯ ಕೆಲಸಗಳಿಗಾಗಿ ಬರುತ್ತಾರೆ. ಆದರೆ ಅಲ್ಲಿಯ ಸಾರ್ವಜನಿಕರಿಗೆ ನೀರಿನ ಹಾಹಾಕಾರವಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ಅಚ್ಚರಿಯಾಗಿದೆ.
ಈದಿನ.ಕಾಮ್ ಜೊತೆಗೆ ಮಾತನಾಡಿದ, ಸಾರ್ವಜನಿಕರು “ನಗರ ಸಭೆಗೆ ಸಾಕಷ್ಟು ಜನರು ಬರುತ್ತಾರೆ. ಬಿಸಿಲ ಬೇಗೆಯಿಂದ ಬಂದ ಸಾರ್ವಜನಿಕರು ನೀರು ಕುಡಿಯಲು ನೀರನ್ನು ಹುಡುಕಿದರೂ ಸಿಗದೆ ಪರದಾಡುತ್ತಾರೆ. ದುಡ್ಡು ಇದ್ದವರು ಅಂಗಡಿಗೆ ಹೋಗಿ ಹಣ ಕೊಟ್ಟು ಕುಡಿಯುತ್ತಾರೆ. ಹಣ ಇಲ್ಲದವರು ಸ್ಥಿತಿ ಹೇಗೆ. ಕೂಡಲೇ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು” ಎಂದು ಸಾರ್ವಜನಿಕರು ಹೇಳಿದ್ದಾರೆ.





