ಇತ್ತೀಚಿಗೆ ಸೂರಣಗಿ ಗ್ರಾಮದಲ್ಲಿ ಚಲನಚಿತ್ರ ನಟ ಯಶ್ ಹುಟ್ಟು ಹಬ್ಬದಂದು ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಅವಘಡದಿಂದ ಮೃತರಾದ ಮೂವರ ಸಂತ್ರಸ್ತ ಕುಟುಂಬಗಳಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ತಲಾ ಎರಡು ಲಕ್ಷ ಚೆಕ್ ಕೊಟ್ಟು, ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಧೈರ್ಯ ತಂಬಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಮೊದಲು ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಆಗಮಿಸಿದ್ದ ಅವರು ಹಾಗೂ ಅವರ ಪುತ್ರ ಹಾವೇರಿ ಲೋಕಸಭಾ ಮತ ಕ್ಷೇತ್ರದ ಚುನಾವಣಾ ಆಕಾಂಕ್ಷಿ ಕಾಂತೇಶ್ ಈಶ್ವರಪ್ಪ ಅವಮಾಜಿ, ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
“ರಾಮ ಮಂದಿರ ರಾಷ್ಟ್ರದ ಮಂದಿರ, ಅದು ಕೋಟ್ಯಾಂತರ ಹಿಂದುಗಳ, ನೂರಾರು ವರ್ಷದ ಹೋರಾಟದ ಪ್ರತಿಫಲದ ಮಂದಿರ” ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಾಸಕ ಚಂದ್ರು ಲಮಾಣಿ, ಹಾವೇರಿ ಲೋಕಸಭ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕಾಂತೇಶ್ ಈಶ್ವರಪ್ಪ, ಗುರುನಾಥ ದಾನಪ್ಪನವರ, ರಾಜಣ್ಣ ಅರಳಿ, ಫಕ್ಕಿರೇಶ್ ರಟ್ಟಿಹಳ್ಳಿ, ಹಾಲಪ್ಪ ಸಂಕದಾಳ ಮುಂತಾದವರು ಇದ್ದರು.





