ಗದಗ | ಗುರುವಂದನಾ ಕಾರ್ಯಕ್ರಮ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Date:

ಗುರು ಕಾರುಣ್ಯವೇ ಸದಾಚಾರ, ಶಿವಾಚಾರ, ಪ್ರಸಾದ, ಸಂತೃಪ್ತಿ, ಗುರು ಇದ್ದರೆ ದೀಕ್ಷೆ ಮತ್ತು ಪರಮಾತ್ಮನ ಕೃಪೆ ಪಡೆಯಲು ಸಾಧ್ಯವಾಗುತ್ತದೆ ಎಂದು ವೇದಮೂರ್ತಿ ಬಸಯ್ಯಶಾಸ್ತ್ರಿ ಹೇಳಿದರು.

1998 ರಿಂದ 2008ನೇ ಶೈಕ್ಷಣಿಕ ಸಾಲಿನ ಗದಗ ಜಿಲ್ಲಾ ರೋಣ ತಾಲೂಕಿನ ಮಲ್ಲಾಪೂರದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಎಸ್ ಎಸ್ ಪಾಗದ ಮಾತನಾಡಿ, “ಗುರು ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದುದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರಗೆಳೆದು ಸಾಧಕನನ್ನಾಗಿ ಮಾಡುವಲ್ಲಿ ಗುರು ಮಹತ್ವದ ಪಾತ್ರ ಮಹಿಸುತ್ತಾನೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1998 ರಿಂದ 2008ನೇ ಸಾಲಿನ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ಬಿ ಐಹೊಳೆ ಮಾತನಾಡಿ, “ಗುರು ಸ್ಮರಣೆಯು ಜಗತ್ತಿನಲ್ಲಿಯೇ ಅತಿಶ್ರೇಷ್ಠವಾದ ದಿವ್ಯ ಮಂತ್ರವಾಗಿದ್ದು, ಹರ ಮುನಿದರು ಗುರು ಕಾಯುವನು” ಎಂದು ಹೇಳಿದರು.

ಶಿಕ್ಷಕ ಕೆ ಬಿ ಹರ್ಲಾಪೂರ ಮಾತನಾಡಿ, “ವಿದ್ಯೆ ಯಾರ ಮನೆಯ ಸ್ವತ್ತು ಅಲ್ಲ ಪ್ರಾಮಾಣಿಕತೆಯಿಂದ ಸತತ ಪ್ರಯತ್ನ ಮಾಡುವವರಿಗೆ ಒಲಿಯುತ್ತದೆ” ಎಂದು ಹೇಳಿದರು.

ಶಿಕ್ಷಕಿ ಜಿ ಹಂಪಮ್ಮ ಮಾತನಾಡಿ, “ಮಕ್ಕಳಿಗೆ ಕಲಿಕೆಯ ಸಂದರ್ಭದಲ್ಲಿ ನೀಡುವ ಶಿಕ್ಷೆಗಳು ಆ ಸಂದರ್ಭದಲ್ಲಿ ತಪ್ಪಾಗಿ ಕಂಡರೂ ಮುಂದೆ ಆ ಮಗು ಸಾಧಕನಾಗಿ ಹೊರ ಹೊಮ್ಮಿದಾಗ ಅವು ಮಗುವಿಗೆ ಶಿಕ್ಷೆಗಳೇ ಶ್ರೇಷ್ಠವಾಗಿ ಕಾಣುತ್ತವೆ” ಎಂದು ಹೇಳಿದರು.

ಶಿಕ್ಷಕ ಎಸ್ ಎಸ್ ಹಿರೇಮಠ ಮಾತನಾಡಿ, “ಶಿಕ್ಷಕನ ನಿಜವಾದ ಸಾಧನೆ ಅವನ ವಿದ್ಯಾರ್ಥಿಗಳು ಮಾಡುವ ಸಾಧನೆಯ ಮೇಲೆ ನಿರ್ಧರಿತವಾಗುತ್ತದೆ. ಇಂದು ನೀವುಗಳು ಪ್ರೀತಿಯಿಂದ ಆಯೋಜಿಸಿರುವ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿಯಾಗಿದೆ” ಎಂದು ಹೇಳೀದರು.

ವಿದ್ಯಾರ್ಥಿಗಳಾದ ಶೋಭಾ ಚಲವಾದಿ, ಸುಧಾ ಕಪಾಲಿ, ಶಿವರಡ್ಡಿ ದಾನರಡ್ಡಿ ಮುತ್ತು ತಳವಾರ, ಸಂತೋಷ ಹೂಗಾರ, ಶರಣು ಚಳಗೇರಿ, ರೇಣುಕಾ ಗಾರವಾಡ, ಪ್ರಕಾಶ ಚಳಗೇರಿ, ಸುನೀತಾ ಕವಲೂರ, ಗೌರಮ್ಮ ಅರಹುಣಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದಿನಗಳ ಕುರಿತು ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಡಿಎಸ್ಎಸ್ ಆಗ್ರಹ

1998 ರಿಂದ 2008ನೇ ಸಾಲಿನ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ಬಿ ಐಹೊಳೆ, ವಿ ಎಸ್ ವಾಲಿ, ವಿ ಎಮ್ ಶಿರಗುಪ್ಪಿ, ಎ ಬಿ ಮೇಟಿ, ಜಿ ಹಂಪಮ್ಮ, ಜೆ. ಡಬ್ಲ್ಯೂ, ಬಣ್ಣಾ, ಆರ್ ಬಿ ಹೊಸಮನಿ, ಬಿ ಜಿ ಅಂಬೋಲಿ, ಎಸ್ ವಿ ಬಸವರಡ್ಡಿ, ಎಸ್ ವಿ ಜಕ್ಕನಗೌಡ್ರ ಮತ್ತು ಪ್ರೌಢಶಾಲೆಯ ಶಿಕ್ಷಕರುಗಳದ ಎಸ್ ಜಿ ಅಗಸಿಮುಂದಿನ, ಎಂ ಕೆ ಹನುಮಕ್ಕನವರ, ಎಚ್ ಎಸ್ ನೇಲಗಾರ, ಆರ್ ಎಸ್ ತ್ರಿಮಲ್ಲೆ, ಜೆ ಎಂ ಜೋಶಿ, ಎಸ್ ಎಸ್ ಹಿರೇಮಠ ಗುರುಗಳನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...