ಜೋಕುಮಾರ ಸ್ವಾಮಿ ಮನೆ ಮನೆಗೆ ಬಂದ – ರೈತರಲ್ಲಿ‌ ಸಂತಸ ತಂದ

Date:

ಉತ್ತರ ಕರ್ನಾಟಕದಲ್ಲಿ ಆಚರಿಸಲಾಗುವ ಪರಂಪರೆಯ ಜಾನಪದ ಹಬ್ಬಗಳಲ್ಲಿ ಜೋಕುಮಾರ ಸ್ವಾಮಿ ಹಬ್ಬವೂ ಒಂದು. ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ಜೋಕುಮಾರನ ಮಣ್ಣಿನ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ, ಅವುಗಳನ್ನು ಜೋಕುಮಾರ ಸ್ವಾಮಿ ಬಗೆಹರಿಸುತ್ತಾನೆಂಬ ನಂಬಿಕೆ ಹಳ್ಳಿಗಳ ರೈತಾಪಿ ಜನರದ್ದು.

ಗಣೇಶ ಚತುರ್ಥಿ ನಂತರದ ಅಷ್ಟಮಿ ದಿನದಂದು ಜೋಕುಮಾರ ಸ್ವಾಮಿ ಹುಟ್ಟುತ್ತಾನೆ. ಹುಟ್ಟಿದ ಏಳು ದಿನಕ್ಕೆ ಜೋಕುಮಾರ ಸ್ವಾಮಿ ಸಾಯುತ್ತಾನೆ. ಬಡಿಗೇರ ಸಮುದಾಯದ ಕುಟುಂಬದದವರು ಕೆರಗೆ ಹೋಗಿ ಅರಲನ್ನು ತಂದು ಜೋಕುಮಾರ ಸ್ವಾಮಿಯ ಮೂರ್ತಿಯನ್ನು ತಯಾರು ಮಾಡುತ್ತಾರೆ. ಅಗಲ‌ ಮುಖ, ಮುಖಕ್ಕೆ ತಕ್ಕಂತೆ ಕಣ್ಣು, ತೆರೆದ ಬಾಯಿ, ಚೂಪಾದ ಮೀಸೆಯುಳ್ಳ ಮೂರ್ತಿ ತಯಾರಿಸಿ ಬಾರಕೇರ ಸಮುದಾಯಕ್ಕೆ ಒಪ್ಪಿಸುತ್ತಾರೆ.

ಬಾರಕೇರ ಸಮುದಾಯದ ಮಹಿಳೆಯರು ಜೋಕುಮಾರಸ್ವಾಮಿ ಮೂರ್ತಿಗೆ ಕಿರೀಟದಂತೆ ಇರುವ ತಲೆಸುತ್ತು ಸುತ್ತಿ, ಹಣೆಗೆ ವಿಭೂತಿ, ಕುಂಕುಮ ಭೊಟ್ಟು ಇಟ್ಟು ಅಲಂಕಾರ ಮಾಡುತ್ತಾರೆ. ಬಿದಿರಿನ ಬುಟ್ಟಿಯಲ್ಲಿ ಬೇವಿನ ಎಲೆಗಳನ್ನು ಇಟ್ಟು, ಅದರ ನಡುವೆ ಅಲಂಕಾರಗೊಂಡ ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಇಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

WhatsApp Image 2023 10 18 at 2.07.31 PM

ಇದೆಲ್ಲ ಮುಗಿದ ಮೇಲೆ ಬಾರಕೇರ ಸಮುದಾಯದ ಐವರು ಮಹಿಳೆಯರು ಜೋಕುಮಾರ ಸ್ವಾಮಿಯನ್ನು ಪೂಜಿಸುತ್ತಾರೆ. ಒಬ್ಬ ಮಹಿಳೆ ಜೋಕುಮಾರ ಸ್ವಾಮಿಯನ್ನು ಹೊತ್ತರೆ, ಒಬ್ಬರು ಕಾಡಿಗೆ ಮತ್ತು ಜೊಳದ ನುಚ್ಚು ಬುಟ್ಟಿಯನ್ನು ಹೊರುತ್ತಾರೆ. ಇನ್ನೂ ಮೂರು ಹಿರಿ ಮಹಿಳೆಯರು (ಅಮ್ಮ) ಜೋಕುಮಾರ ಸ್ವಾಮಿಯ ಹಾಡುಗಳನ್ನು ಹಾಡುತ್ತಾರೆ.

“ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆಗಳರಲ್ಲ ತುಂವಿ ಒಡ್ಡುಗಳೆಲ್ಲ ಒಡೆದಾವು”, “ಅಬ್ಬಬ್ಬಾ ಇವನ ಏನ ಡೌಲು – ಜೋಕುಮಾರ ಆಗ್ಯಾನ ಜೋಕುಮಾರ” ಹಾಡುಗಳನ್ನು ಹಾಡುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ರೈತರ ಮನೆಗಳಿಗೆ ಹೋಗಿ, ಬಾಗಿಲ ಮುಂದೆ ಇಟ್ಟು ಹಾಡುಗಳನ್ನು ಹಾಡುತ್ತಾರೆ.

ಜೋಕುಮಾರ ಸ್ವಾಮಿ ಮನೆಗೆ ಬಂದನೆಂದು ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ, ಉಪ್ಪು, ತರಕಾರಿ, ಹೊಲದಲ್ಲಿ ಬೆಳೆದ ಧಾನ್ಯಗಳನ್ನು ನೀಡುತ್ತಾರೆ. ಹೀಗೆ ನೀಡಿದವರಿಗೆ ಜೋಗಪ್ಪನ ಪ್ರಾಸಾದ ಜೋಳದ ನುಚ್ಚು, ಕಾಡಿಗೆ ಕೊಡುತ್ತಾರೆ. ಈ ಪ್ರಸಾದವನ್ನು ಊರಲ್ಲಿರುವ ಪ್ರತಿಯೊಬ್ಬ ರೈತನು ತಗೊಂಡು ತಮ್ಮ ಜಮೀನುಗಳಿಗೆ ಚೆಲ್ಲುತ್ತಾರೆ. ಹಾಗೆ ಚೆಲ್ಲಿದರೆ ಹೊಲದಲ್ಲಿ ಬೆಳೆದ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಕಾಡಿಗೆಯನ್ನು ದನಕರುಗಳಿಗೆ ಹಚ್ಚಿದರೆ ಚಿಕ್ಕಾಡಿ, ಉಣ್ಣೆ ಆಗುವುದಿಲ್ಲ ಎಂದೂ ಅವರು ನಂಬುತ್ತಾರೆ.

WhatsApp Image 2023 10 18 at 2.07.32 PM

ಜೋಕುಮಾರ ಸ್ವಾಮಿಯನ್ನು ಹೊತ್ತ ಮಹಿಳೆಯರಿಗೆ ರೈತರು ನೀರನ್ನು ಹೂಯ್ಯೂತ್ತಾರೆ. ಇದರಿಂದ ಭೂಮಿಗೆ ಮಳೆ ಆಗುತ್ತದೆ ಎನ್ನುತ್ತಾರೆ ರೈತರು. ಏಳು ದಿನ ಜೋಕುಮಾರ ಸ್ವಾಮಿಯನ್ನು ಹೊತ್ತು ಊರೂರು, ರೈತರ ಮನೆಗಳಿಗೆ ತೆರಳಿ ಮೆರವಣಿಗೆ ನಡೆಯುತ್ತದೆ. ಏಳನೆಯ ದಿನಕ್ಕೆ ಜೋಕುಮಾರ ಸ್ವಾಮಿಯನ್ನು ದಲಿತರ ವಸತಿ ಪ್ರದೇಶದಲ್ಲಿ ಇಟ್ಟು, ಅವನ ಸುತ್ತ ಮುಳ್ಳುಕಂಟಿ ಹಾಕಿ ಮಹಿಳೆಯರು ಸುತ್ತುತ್ತಾರೆ. ಆಗ ಮಹಿಳೆಯರ ಸೆರಗು ಮುಳ್ಳಿಗೆ ಸಿಕ್ಕಿಕೊಂಡರೆ, ಜೋಕುಮಾರ ಸ್ವಾಮಿಯೇ ಎಳೆದಿದ್ದಾನೆ ಎಂದು ಆ ಮೂರ್ತಿಯನ್ನು ಹೊಡೆದು (ಸಾಯಿಸಿ) ಹಳ್ಳದಲ್ಲಿ ಮುಚ್ಚುತ್ತಾರೆ.

ಜೋಕುಮಾರ ಸ್ವಾಮಿ ಸತ್ತ ನಂತರ ಅಗಸ ಸಮುದಾಯದವರು ತಿಥಿ ಮಾಡಿ ಅಡುಗೆ ಮಾಡಿ ಊಟ ಮಾಡುವುದು ಸಂಪ್ತದಾಯವಾಗಿ ಬೆಳೆದು ಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...