ಬೆಂಗಳೂರು | ಜಿಐಓ ಸದಸ್ಯರ ರಾಜ್ಯ ಸಮಾವೇಶ ಸಮಾರೋಪ

Date:

ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್‌ನ(ಜಿ ಐ ಓ)ರಾಜ್ಯಮಟ್ಟದ ಸಮಾವೇಶವು ಬೆಂಗಳೂರು ನಗರದಲ್ಲಿರುವ ಸಿಎಂಎ ಗ್ರಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ಇತ್ತೀಚಿಗೆ ಸಮಾರೋಪಗೊಂಡಿತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 1200 ಸದಸ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷೆ ಸೀಮಾ ತಾಜ್ ಹುಮನಬಾದ್, ಒಮ್ಮೆ ಕಂಡ ಕನಸಿನ ಅಭಿವ್ಯಕ್ತಿ ಜಿ ಐ ಓ ಆಗಿದೆ. ಜಿ ಐ ಓ ಯುವತಿಯರು ಮಾದರಿಯಾದ ಮುಸ್ಲಿಮ್ ಮಹಿಳೆಯರಾಗಿ ಹೇಗೆ ಬೆಳೆಯಬೇಕು. ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಯಾವ ರೀತಿಯಲ್ಲಿ ತಮ್ಮ ಸೇವೆಗಳನ್ನು ಕೊಡಬೇಕು ಎಂದು ತಿಳಿಸಿದರು.

1002292409

ಜಿ ಐ ಓ ಕರ್ನಾಟಕವು ತನ್ನ ಪ್ರಯಾಣವನ್ನು ನೆನೆಸುವ ಸಲುಗಾಗಿ ಜಿ ಐ ಓ ವಿಶೇಷಾಂಕವನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮೊಹಮ್ಮದ್ ಸಾದ್ ಬೆಳಗಾಮಿ ಅವರು ಬಿಡುಗಡೆ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಬ್ಬೀರ್ ಅಹಮದ್ ಖಾನ್ ಅವರು ತಮ್ಮ ಭಾಷಣದಲ್ಲಿ, ಸಮಾಜದ ಪುನರ್ ನಿರ್ಮಾಣ ಎಂಬ ವಿಷಯದಡಿ ಮಾತನಾಡಿ, ನಾವು ಇತಿಹಾಸದ ಯುಗವನ್ನು ಅಧ್ಯಯನ ಮಾಡಬೇಕೆಂದು ಮತ್ತು ಆ ಕಾಲದಲ್ಲಿ ಸಮಾಜ ಹೇಗಿತ್ತು ಎಂಬುದನ್ನು ಗಮನಿಸಬೇಕೆಂದು ಹೇಳಿದರು.

“ಮುಸ್ಲಿಂ ಮಹಿಳೆಯರು ಮತ್ತು ಭಾರತೀಯ ಸಮಾಜದಲ್ಲಿ ಅವರ ಪ್ರಾತಿನಿಧ್ಯ” ಎಂಬ ವಿಷಯದಡಿಯಲ್ಲಿ ಸಂವಾದ ನಡೆಯಿತು.

1002292410

NFGIO ರಾಷ್ಟ್ರೀಯ ಅಧ್ಯಕ್ಷೆ ಸುಮಯ್ಯಾ ರೋಷನ್, ಜಿಐಒ ಮಾಜಿ ರಾಜ್ಯ ಸಲಹಾ ಸಮಿತಿಯ ಸದಸ್ಯೆಯರಾದ ಉಬೈದಾ, ಫರ್ಹಾ ಖಾಲಿದ್, ಫಾರ್ವರ್ಡ್ ಟ್ರಸ್ಟ್, ಕರ್ನಾಟಕದ ಜಂಟಿ ಕಾರ್ಯದರ್ಶಿ ನುಝತ್ ರಜ್ವಿಯವರು ಪ್ಯಾನೆಲಿಸ್ಟರಾಗಿ ಭಾಗವಹಿಸಿದರು ಮತ್ತು ಚರ್ಚೆಯನ್ನು ನೌಶಾಬಾ ಸುಲ್ತಾನಾ ಅವರು ನಿರ್ವಹಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕಿಲಾ ಖಾನಂ, ಅತಿಥಿಯಾಗಿದ್ದ ಖಾನ್ ಮುಬಶಿರಾ ಫಿರ್ದೌಸ್ ಅವರು ಮಾತನಾಡಿದರು. ಆ ನಂತರ ಜಿಐಓ ಕರ್ನಾಟಕದ ವತಿಯಿಂದ ಸಮಾವೇಶದ ರಾಜ್ಯ ತಂಡವನ್ನು ಗೌರವಿಸಲಾಯಿತು.

1002292408

ಬೆಂಗಳೂರು ನಗರದ ಖ್ಯಾತ ವೈದ್ಯರಾದ ಡಾ. ತಾಹಾ ಮತೀನ್ ಅವರು “Small things big Impact” ಎಂಬ ವಿಷಯದಡಿ ಮಾತನಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಜಮಾಅತ್ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮೊಹಮ್ಮದ್ ಸಾದ್ ಮಾತನಾಡಿ, ಯುವಜನತೆ ವ್ಯಕ್ತಿತ್ವ, ನೈತಿಕತೆ ಮತ್ತು ವ್ಯಕ್ತಿ ಸ್ವಭಾವವನ್ನು ಇಸ್ಲಾಮಿನ ಅನುಸಾರ ರೂಪಿಸಬೇಕು. ತನ್ನ ಸ್ವಭಾವವನ್ನು ಬದಲಾಯಿಸಬೇಕು ಎಂದರು.

ಸಿಸ್ಟರ್ ಝೈನಬಾ ಗಝಾಲಿ ಧನ್ಯವಾದ ಕಾರ್ಯಕ್ರಮವನ್ನು ಮಾಡಿದರು. ಮರಿಯಂ ಉಡುಪಿ, ಜುಫಿಷಾ ನಿಖಾತ್ ಖಾಜಿ, ಆಮಿನಾ ಮುಷೀರಾ, ಆಯೇಶಾ ಸ್ವಾಲೆಹಾ ಕಾರ್ಯಕ್ರಮವನ್ನು ನಿರೂಪಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...