ಕೋಲಾರ: ತಾಲೂಕಿನ ವಕ್ಕಲೇರಿ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎಂ.ಪಾಲಾಕ್ಷಗೌಡ ಹಾಗೂ ಉಪಾಧ್ಯಕ್ಷರಾಗಿ ರಮಾದೇವಿ ಕ್ರಮವಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೈತ್ರಿಯೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಸಂಘದ ಆವರಣದಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಎಂ.ಪಾಲಾಕ್ಷಗೌಡ, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರಮಾದೇವಿ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಎಂ.ಪಾಲಾಕ್ಷಗೌಡ ಮಾತನಾಡಿ ವಕ್ಕಲೇರಿ ಹೋಬಳಿಯ ರೈತರ ಹಿತಕಾಪಾಡುವ ಭರವಸೆವಿಟ್ಟು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ನಮ್ಮ ತಂದೆ ಮಾರ್ಕೊಂಡಪ್ಪ ನವರು 10 ವರ್ಷಗಳ ಕಾಲ ಅಧ್ಯಕ್ಷರಾಗಿ ಈ ಸೊಸೈಟಿಯ ಕಟ್ಟಡಕ್ಕೆ ಅಡಿಪಾಯ ಹಾಕಿದ್ದರು ನಂತರ ಬಂದ ಆಡಳಿತ ಮಂಡಳಿ ರೈತರ ಅಭಿವೃದ್ಧಿಗೆ ಕಾರಣವಾಗಿದ್ದರು ಕಳೆದ ಐದು ವರ್ಷದ ಹಿಂದೆ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಂತರ ಜಿಲ್ಲೆಯಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ಅಉಮಾರು 40 ಲಕ್ಷ ವೆಚ್ಚದ ರೈತಭವನ ನಿರ್ಮಿಸಲಾಗಿದೆ ಮುಂದೆ ಕೂಡ ಸುಮಾರು 15 ಕುಂಟೆ ಜಾಗದಲ್ಲಿ ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಹೋಬಳಿ ಕೇಂದ್ರದಲ್ಲಿಯೇ ವಿತರಿಸಲು ಗೋದಾಮು ನಿರ್ಮಿಸಲಾಗುತ್ತದೆ ರೈತರ ಹಿತವೇ ನೂತನ ಆಡಳಿತ ಮಂಡಳಿಯ ಮುಖ್ಯ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷೆ ರಮಾದೇವಿ, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಂ.ಆನಂದ್ ಕುಮಾರ್, ಎನ್.ವೀರೇಗೌಡ, ಎಂ.ಶ್ರೀನಿವಾಸಗೌಡ, ಎನ್.ಮುನಿಕೃಷ್ಣಪ್ಪ, ಭುವನೇಶ್ವರಿ, ನವೀನ್ ಕುಮಾರ್, ಮುನಿಕೃಷ್ಣಪ್ಪ ಅವರನ್ನು ಅಭಿನಂದನೆ ಸಲ್ಲಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ₹16 ಕೋಟಿ ವೆಚ್ಚದ ಹೈಟೆಕ್ ಐಸಿಯು, ಡಯಾಲಿಸಿಸ್ ಘಟಕ ಆರಂಭ: ಬಡವರ ಬದುಕಿಗೆ ಆಶಾಕಿರಣ
ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ ನಾಗರಾಜ್, ಟಿಎಪಿಎಂಎಸ್ ಅಧ್ಯಕ್ಷ ವಡಗೂರು ರಾಮು, ಸೊಸೈಟಿ ಮಾಜಿ ಉಪಾಧ್ಯಕ್ಷ ಮಂಜುನಾಥ್, ಮಾಜಿ ನಿರ್ದೇಶಕ ಸದಾಶಿವಯ್ಯ, ಮುಖಂಡರಾದ ಚಲಪತಿ, ಅಬ್ಬಯ್ಯ, ನಂಜುಂಡಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಸೊಸೈಟಿ ಸಿಇಒ ಮಂಜುನಾಥ್, ಮುಂತಾದವರು ಇದ್ದರು.





